Featured
ಕೇಳೋರಿಲ್ಲ ಖಾಸಗಿ ಟೀಚರ್ಗಳ ಗೋಳು- ಮಹಾಮಾರಿ ಕೊರೊನಾದಿಂದ ಬೀದಿಗೆ ಬಂತು ಬದುಕು- ಆರ್ಥಿಕ ಮುಗ್ಗಟ್ಟಿನಲ್ಲಿ ಲಕ್ಷಾಂತರ ಶಿಕ್ಷಕರು

ರೈಸಿಂಗ್ ಕನ್ನಡ:
ರಾಯಚೂರು:
ಮಹಾ ಮಾರಿ ಕೋರೋನಾ ಖಾಸಗಿ ಶಾಲೆಗಳ ಶಿಕ್ಷಕರನ್ನು ಆರ್ಥಿಕವಾಗಿ ಬೀದಿಗೆ ತಂದು ನಿಲ್ಲಿಸಿದೆ. ಶಿಕ್ಷಣ ಸಂಸ್ಥೆಗಳ ಅಸಹಾಕರದಿಂದಾಗಿ ಶಿಕ್ಷಕರು ಕುಟುಂಬ ನಿರ್ವಹಣೆ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ರಾಯಚೂರು ಜಿಲ್ಲೆಯ ಖಾಸಗಿ ಶಲಾ ಶಿಕ್ಷಕರು ಸಹಾಯಕ್ಕಾಗಿ ಸರಕಾರದತ್ತ ಮುಖ ಮಾಡಿದ್ದಾರೆ.
ಮಹಾ ಮಾರಿ ಕರೋನಾ ಲಕ್ಷಾಂತರ ಜನರನ್ನ ಆರ್ಥಿಕವಾಗಿ ಬೀದಿಗೆ ತಂದು ನಿಲ್ಲಿಸಿದೆ. ಬಿಡಿಗಾಸಿಗೂ ಪರದಾಡುವಂತ ಪರಿಸ್ಥಿತಿಯನ್ನು ತಂದಿಟ್ಟಿದೆ. ಲಾಕ್ ಡೌನ್ ಹಿನ್ನಲೆ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚುಕೊಂಡಿವೆ. ಅಡ್ಮಿಷನ್ ಇಲ್ಲದೆ ಶಿಕ್ಷಣ ಸಂಸ್ಥೆಗಳು ಆರ್ಥಿಕ ಮುಗ್ಗಟ್ಟು ಎದರಿಸುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನ ನಂಬಿಕೊಂಡಿದ್ದ ಸಾವಿರಾರು ಖಾಸಗಿ ಶಾಲೆ ಶಿಕ್ಷಕರು ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ. ರಾಯಚೂರು ಜಿಲ್ಲೆ ಒಂದರಲ್ಲೆ ಸುಮಾರು ಮೂರು ಸಾವಿರ ಖಾಸಗಿ ಶಾಲೆ ಶಿಕ್ಷಕರು ಬೀದಿಗೆ ಬಂದು ನಿಂತ್ತಿದ್ದಾರೆ. ಉಪ ಜೀವನ ನಡೆಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ.
- ಲಕ್ಷ್ಮಣ, ಖಾಸಗಿ ಶಿಕ್ಷಕರು
ಕಳೆದ ಹಲವು ತಿಂಗಳು ಗಳಿಂದ ಶಾಲೆಗಳು ಮುಚ್ಚಿದ್ದು, ತರಗತಿಗಳು ಆರಂಭವಾಗದೆ ಇರುವುದುರಿಂದ ಶಾಲೆಗಳಲ್ಲಿ ಅಡ್ಮಿಷನ್ ಆಗುತ್ತಿಲ್ಲ. ಇದರಿಂದಾಗಿ ಸಂಸ್ಥೆಗಳಿಗೆ ಆದಾಯ ಇಲ್ಲದಂತಾಗಿದೆ. ಆದಾಯ ಇಲ್ಲದ ಕಾರಣಕ್ಕೆ ಸಂಸ್ಥೆಯ ಮಾಲೀಕರು ಶಿಕ್ಷಕರನ್ನ ಶಾಲೆಗೆ ಬರಬೇಡಿ ಎನ್ನುತ್ತಿದ್ದಾರೆ. ಶಿಕ್ಷಕರು ನೌಕರಿ ಕಳೆದುಕೊಳ್ಳುವ ಭಯದಲ್ಲಿ ಇದ್ದಾರೆ. ನೌಕರಿ ಹೋದರೆ ಹೆಂಡತಿ ಮಕ್ಕಳೊಂದಿಗೆ ಬೀದಿಗೆ ಬೀಳಬೇಕಾಗುತ್ತದೆ. ಹೀಗಾಗಿ ಆದಷ್ಟು ಬೇಗ ಸರಕಾರ ಖಾಸಗಿ ಶಾಲೆ ಶಿಕ್ಷಕರ ಸಹಾಯಕ್ಕೆ ಬರಬೇಕು.
- ರಾಜು, ಶಿಕ್ಷಕರು
ಮಹಾ ಮಾರಿ ಕರೋನಾ ಜನರ ಉದ್ಯೋಗವನ್ನಷ್ಟೇ ಅಲ್ಲ ಅವರ ಜೀವನವನ್ನೆ ಕಸದಿ ಕೊಳ್ಳುತ್ತುದೆ. ಅತ್ತಕಡೆ ಕೈಯಲ್ಲಿ ಕೆಲಸವೂ ಇಲ್ಲ, ಇತ್ತ ಅಕೌಂಟ್ನಲ್ಲಿ ದುಡ್ಡೂ ಇಲ್ಲ ಅನ್ನುವ ಸ್ಥಿತಿ ನಿರ್ಮಾಣವಾಗಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















