Featured
ನೆರೆ ಸಂತ್ರಸ್ತರಿಗೆ ಕನ್ನಡ ಚಿತ್ರರಂಗ ಸಾಥ್ : ಪವರ್ ಸ್ಟಾರ್ ಪುನೀತ್ ಭರವಸೆ

ರೈಸಿಂಗ್ ಕನ್ನಡ:
ಕೊಪ್ಪಳ :
ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ತುಂಬಾ ಜಾಸ್ತಿಯಾಗಿ ಆಗುತ್ತಿದ್ದು, ಕನ್ನಡ ಚಿತ್ರರಂಗದವರಿಂದ ಸಹಾಯ ಮಾಡೋ ಸಂದರ್ಭ ಬಂದರೆ ನಾವೆಲ್ಲಾ ನೆರೆ ಸಂತ್ರಸ್ತರ ಜೊತೆಗಿರುತ್ತೇವೆ ಎಂದು ಪವರ್ ಸ್ಟಾರ್, ನಟ ಪುನೀತ್ ರಾಜಕುಮಾರ ಹೇಳಿದ್ದಾರೆ.
ಶನಿವಾರ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ತಮ್ಮ ಪುನೀತ್ ರಾಜಕುಮಾರ್ ಅವರ ನಟನೆಯ ಜೇಮ್ಸ್ ಸಿನಿಮಾ ಚಿತ್ರೀಕರಣಕ್ಕಾಗಿ ಆಗಮಿಸಿದ ಸಂಧರ್ಭದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪರಿಸ್ಥಿತಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ನಾವೆಲ್ಲರೂ ಅವರ ಜೊತೆ ನಿಲ್ಲಬೇಕಾಗಿದೆ. ಮನುಷ್ಯತ್ವದ ಪ್ರಕಾರ ನಾವೇನು ಮಾಡಬೇಕು ಅದನ್ನ ಮಾಡಬೇಕು.

ನಾನೊಬ್ಬ ಭಾರತೀಯನಾಗಿ ಅವರಿಗೆ ಏನು ಮಾಡಬೇಕೋ ಅದನ್ನ ಮಾಡ್ತೀನಿ ಎಂದು ಪುನೀತ್ ಹೇಳಿದ್ದಾರೆ. ಇನ್ನು ಜೇಮ್ಸ್ ಸಿನಿಮಾ ಚಿತ್ರೀಕರಣಕ್ಕಾಗಿ ಜಿಲ್ಲೆಗೆ ಬಂದಿರೋ ನಾವೆಲ್ಲರೂ ಕೊರೊನಾ ಸಂಧರ್ಭದಲ್ಲಿ ನಮ್ಮ ನಮ್ಮ ಸುರಕ್ಷತೆಯಲ್ಲಿ ಇರೋದು ತುಂಬಾ ಮುಖ್ಯ ಎಂದು ಹೇಳಿದ್ದಾರೆ .
ಇನ್ನು ಚಿತ್ರಮಂದಿರಗಳು ಓಪನ್ ಆದ ವಿಚಾರವಾಗಿ ಪ್ರೇಕ್ಷಕರಿಗೆ ಚಿತ್ರರಂಗಕ್ಕೆ ಬರಲು ಅಪ್ಪು ಮನವಿ ಮಾಡಿಕೊಂಡಿದ್ದು, ಮುಂಜಾಗ್ರತಾ ಕ್ರಮಕೈಗೊಂಡು ಜನರು ಚಿತ್ರಮಂದಿರಕ್ಕೆ ಬರಲಿ ಎಂದು ವಿನಂತಿಸಿದರು .
ಕೊಪ್ಪಳ ಜಿಲ್ಲೆಯ ಬಗ್ಗೆ ಮಾತನಾಡಿದ ಪುನೀತ್ ಕೊಪ್ಪಳ ನನಗೇನು ಹೊಸದಲ್ಲ . ಅಪ್ಪಾಜಿಯ ನೆನಪು ಇಲ್ಲಿದೆ . ಆ ಜಾಗ ನೋಡಿಕೊಂಡು ಬಂದಿದ್ದೇನೆ . ತುಂಬಾ ಖುಷಿಯಾಯ್ತು ಎಂದು ಹೇಳಿದರು . ಆದರೆ , ಇಲ್ಲಿನ ಸ್ಥಳೀಯರು ಮಾಸ್ಕ್ ಧರಿಸುತ್ತಿಲ್ಲ ಎಂದು ಪವರ್ ಸ್ಟಾರ್ ತಮ್ಮ ಬೇಸರವನ್ನು ಹೊರಹಾಕಿದರು .
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?