Featured
ಸೋಮಶೇಖರ್ ಡೆಸ್ಪರೇಟ್ ಆಗಿದ್ದಾರೆ ಪಾಪ..! : ದಿನೇಶ್ ಗುಂಡೂರಾವ್ ಕೂಲ್ ರಿಯಾಕ್ಷನ್

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಸೋಮಶೇಖರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ರೆ, ದಿನೇಶ್ ಗುಂಡೂರಾವ್ ಕೂಲ್ ಆಗಿಯೇ ರಿಯಾಕ್ಟ್ ಮಾಡಿದ್ದಾರೆ. ಸೋಮಶೇಖರ್ಗೆ ಕಾಂಗ್ರೆಸ್ನಲ್ಲಿದ್ದೇನಾ..? ಬಿಜೆಪಿಯಲ್ಲಿ ಇದ್ದೀನಾ ಅನ್ನೋದೇ ಗೊತ್ತಿಲ್ಲ. ನಾನು ಎಲ್ಲಿದ್ದೇನೆ ಅನ್ನೋದನ್ನೆ ಮರೆತು, ಈ ರೀತಿ ಬಾಯಿಗೆ ಬಂದಂತೆ ವಿಚಲಿತರಾಗಿ ಮಾತ್ನಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ರು.
ಬೆಂಗಳೂರಿನಲ್ಲಿ ಮಾತ್ನಾಡಿದ ದಿನೇಶ್ ಗುಂಡೂರಾವ್, ಮನುಷ್ಯನ ಸಹಜ ಸ್ವಭಾವ ಅದು. ನೋವಲ್ಲಿ ಇದ್ದಾಗ ಹೇಗೇಗೋ ಮಾತಾಡ್ತಾರೆ. ಸೋಮಶೇಖರ್ ಬಗ್ಗೆ ಯಾರೂ ಮಾತನಾಡಬಾರದು ಎಎಂದು ಸುಪ್ರೀಂಕೋರ್ಟ್ನಲ್ಲಿ ಮಾತಾಡಲಿ ಎಂದ್ರು. ಅಲ್ಲದೆ, ಸೋಮಶೇಖರ್, ಹೊಸ ಸಂಬಂಧದ ಜೊತೆ ಚೆನ್ನಾಗಿ ಇದ್ರೆ ಸಾಕು ಎಂದ್ರು.
ಅನರ್ಹ ಶಾಸಕ ಸೋಮಶೇಖರ್, ಸಾಕಷ್ಟು ಆಸೆ. ಕನಸು ಇಟ್ಕೊಂಡು ಹೋಗಿದ್ದಾರೆ. ನನಗೆ ನೂರಕ್ಕೆ ನೂರು ವಿಶ್ವಾಸ ಇದೆ ಅವರು, ಉಪ ಚುನಾವಣೆಯಲ್ಲಿ ಭಾಗಿಯಾಗಲ್ಲ. ಪಾಪ, ಡೆಸ್ಪರೇಟ್ ಆಗಿ ಹೀಗೆಲ್ಲಾ ಮಾತ್ನಾಡ್ತಿದ್ದಾರೆ ಎಂದ್ರು. ಇನ್ನು, ನಾನು ಯಾರ ಪರವೂ ಅಲ್ಲ. ಸಿದ್ದರಾಮಯ್ಯ, ಪರಮೇಶ್ವರ್ ಪರವೂ ಇಲ್ಲ. ಸಿದ್ದರಾಮಯ್ಯ ವಿರುದ್ಧ ನಾನು ಎಷ್ಟೋ ಬಾರಿ ವಾದ ಮಾಡಿದ್ದೀನಿ. ನಾನು ಯಾರಿಗೂ ಬಕೆಟ್ ಹಿಡಿದಿಲ್ಲ, ಯಾರ ಚೇಲಾನೂ ಅಲ್ಲ. ನಾನು ಪಕ್ಷದ ಪರ ಇದ್ದೇನೆ ಎಂದು ಸೋಮಶೇಖರ್ಗೆ ತಿರುಗೇಟು ನೀಡಿದ್ರು ದಿನೇಶ್ ಗುಂಡೂರಾವ್.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?