ರೈಸಿಂಗ್ ಕನ್ನಡ:
ನಾಗರಾಜ್. ವೈ. ಕೊಪ್ಪಳ:
ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ ಹಳ್ಳಿಯಲ್ಲಿ ನಡೆದ ಗಲಭೆ ಈಗ ರಾಜಕೀಯ ಆಟಕ್ಕೆ ದಾಳವಾಗಿದೆ. ಕಾಂಗ್ರೆಸ್ ಬಿಜೆಪಿಯನ್ನು ದೂರುತ್ತಿದ್ದರೆ, ಆಡಳಿತ ನಡೆಸುವ ಬಿಜೆಪಿ ಕಾಂಗ್ರೆಸ್ ಗಲಭೆ ನಡೆದ ಮೇಲೆ ನಡೆದುಕೊಂಡ ರೀತಿಯನ್ನು ಪ್ರಶ್ನೆ ಮಾಡುತ್ತಿದೆ. ಈ ನಡುವೆ ಕೊಪ್ಪಳದಲ್ಲಿ ಕಾನೂನು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ರಾಮಲಿಂಗ ರೆಡ್ಡಿಗೆ ಟಾಂಗ್ ನೀಡಿದ್ದಾರೆ. ಎಸ್ ಡಿಪಿಐ, ಪಿಎಫ್ಐ ಸಂಘಟನೆ ಬಹಿಷ್ಕಾರ ಮಾಡುವ ವಿಚಾರದ ಬಗ್ಗೆ ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆ ವರದಿ ನೀಡಬೇಕು. ಒಂದೊಮ್ಮೆ ಎರಡೂ ಸಂಘಟನೆಗಳೇ ಘಟನೆಗೆ ಕಾರಣ ಎಂದಾದರೇ ಅವುಗಳನ್ನು ನಿಷೇಧ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಮತ್ತೆ ಇಂತಹ ಘಟನೆ ನಡೆಯಲೂ ಬಹುದು. ಈ ವಿಚಾರದಲ್ಲಿ ರಾಮಲಿಂಗ ರೆಡ್ಡಿ ಅಲ್ಲ ಇಂಥ ಯಾರೇ ಬಂದರೂ ನಾವು ಸಂಘಟನೆ ನಿಷೇಧ ಮಾಡುತ್ತೇವೆ ಎಂದು ಹೇಳಿದರು.
ಎರಡು ಸಂಘನೆಗಳನ್ನು ನಿಷೇಧಕ್ಕೂ ಮೊದಲು ಪೊಲೀಸ್ ಅಧಿಕಾರಿಗಳು ವರದಿ ನೀಡಬೇಕು. ಅದು ಬರುವ ತನಕ ಈ ಬಗ್ಗೆ ಮಾತಾಡೋದು ಸರಿ ಅಲ್ಲ. ಕಾನೂನು ಸಚಿವನಾಗಿ ತನಿಖೆಗೆ ಮೊದಲೇ ಮಾತಾಡೋದು ಸರಿಯಲ್ಲ. ಸಹಿಸುವ ಶಕ್ತಿ ಇಲ್ಲದವರು, ನಮ್ಮ ಅಧಿಕಾರ ಸಹಿಸದೇ ಇರುವವರು ಇಂಥ ಗಲಾಟೆ ಮಾಡಿಸ್ತಾರೆ. ಆರೋಪಿಗಳು ಎಲ್ಲೂ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಮಾಧುಸ್ವಾಮಿ ತಿರುಗೇಟು ನೀಡಿದ್ರು.
ಕೊಪ್ಪಳದಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಕೋಟ್ಯಂತರ ರೂ. ಹಗರಣ ಆರೋಪ ಕೇಳಿ ಬಂದಿದೆ. ಆದ್ರೆ ಈ ಬಗ್ಗೆ ದೂರು ಬಂದರೆ ತನಿಖೆ ನಡೆಸಲಾಗುವುದು. ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಾಗುವುದು.
ಬೆಂಗಳೂರು ಗಲಭೆ: ಡಿಜೆ ಹಳ್ಳಿಗೆ ಭೇಟಿ ನೀಡಿದ ಮಾಜಿ ಸಿ.ಎಂ ಸಿದ್ದರಾಮಯ್ಯ
ಬೆಂಗಳೂರು ಗಲಭೆ: ಕಾಂಗ್ರೆಸ್ನಿಂದ ವೋಟ್ ಬ್ಯಾಂಕ್ ರಾಜಕಾರಣ- ಡಿಸಿಎಂ ಗೋವಿಂದ ಕಾರಜೋಳ ಆರೋಪ
ಪಿಎಫ್ಐ, ಎಸ್ಡಿಪಿಐ ಮೇಲಿನ ಕೇಸ್ ಹಿಂಪಡೆದಿದ್ದೆ ಗಲಭೆಗೆ ಕಾರಣ: ಕಾಂಗ್ರೆಸ್ ವಿರುದ್ಧ ಸಿಸಿ ಪಾಟೀಲ್ ಕಿಡಿ
ಬೆಂಗಳೂರು ಗಲಭೆ: ಕಾರ್ಪೋರೇಟರ್ ಸೇರಿ 60 ಮಂದಿ ಬಂಧನ
ಜನಸಾಮಾನ್ಯರ ಆಸ್ತಿಪಾಸ್ತಿ ನಷ್ಟ: ಗಲಭೆಕೋರರಿಂದಲೇ ವಸೂಲಿ ಮಾಡಬೇಕು ಎಂಬ ಕಾನೂನು ಇದೆ: ಸಚಿವ ಮಾಧುಸ್ವಾಮಿ
ಬೆಂಗಳೂರು ಗಲಭೆ ಪ್ರಕರಣ: ಪೊಲೀಸರನ್ನ ಗುರಿಯಾಗಿಸಿದ್ದ ಗಲಭೆಕೋರರು: ಕಿಡಿಗೇಡಿಗಳ ನೇತೃತ್ವ ವಹಿಸಿದ್ದ ಐವರ ವಿರುದ್ಧ ಎಫ್ಐಆರ್