Featured
ಮಕ್ಕಳ ಪಾಲಿಗೆ ಆಪಾದ್ಬಂಧವ : ಅನಾಥ ಮಕ್ಕಳ ತವರು ಮನೆ “ಮಾತೃಭೂಮಿ”
ರೈಸಿಂಗ್ ಕನ್ನಡ :
ಹರೀಶ್ ರಾಮನಗರ :
ಅನಾಥ ಮಕ್ಕಳಿಗೆ ಈತ ಆಶ್ರಯದಾತ. ತಂದೆ ತಾಯಿ ಇಲ್ಲದ ಮಕ್ಕಳಿಗೆ ಇವರೇ ಅಪ್ಪ ಅಮ್ಮ. ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವ ಇರುತ್ತೆ. ಆದ್ರೆ ಇಲ್ಲೊಬ್ಬ ಯುವಕ ನಿಸ್ವಾರ್ಥ ಸೇವೆಯಿಂದ ಅನಾಥ ಮಕ್ಕಳಿಗೆ ಆಪಾದ್ಬಂಧವನಾಗಿದ್ದಾನೆ. ಶಿಕ್ಷಣದಿಂದ ವಂಚಿತವಾಗಿರುವ ಬಡ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡುತ್ತಿದ್ದಾನೆ ಈ ಯುವಕ.
ಹೌದು ಇದು ಮಾತೃ ಭೂಮಿ ಮಡಿಲು ಮಕ್ಕಳ ಸೇವಾಶ್ರಮ ಬಾಲಕ ರಚಿರುವ ಕಾವ್ಯ. ಈ ಯುವಕನ ಹೆಸರು ಮಹೇಶ್. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದ ನಿವಾಸಿ. ಹಳ್ಳಿಯಿಂದ ನಗರಕ್ಕೆ ಬಂದು ಅನಾಥ ಮಕ್ಕಳಿಗೆ ಭವಿಷ್ಯ ರೂಪು ಮಾಡುವ ಉದ್ದೇಶದಿಂದ ಟ್ರಸ್ಟ್ ಸ್ಥಾಪನೆ ಮಾಡಲಾಗಿದೆ. ಶಿಕ್ಷಣದಿಂದ ವಂಚಿತವಾಗಿರುವ ಬಡ ಮಕ್ಕಳನ್ನ ಗುರ್ತಿಸಿ ಅಂತಹ ಮಕ್ಕಳಿಗೆ ಉಚಿತವಾಗಿ ವಸತಿ ಸಹಿತ ಶಿಕ್ಷಣ ನೀಡಿಕೊಂಡು ಬರಲಾಗುತ್ತಿದೆ.
2004ರಲ್ಲಿ ಚನ್ನಪಟ್ಟಣದ ಭಾರತೀ ನಗರದಲ್ಲಿ ಬಾಡಿಗೆ ಕಟ್ಟಡ ಪಡೆದುಕೊಂಡು ಮಾತೃ ಭೂಮಿಸೇವಾ ಫೌಂಡೇಶನ್ ಹೆಸರಿನಡಿಯಲ್ಲಿ ಸೇವಾ ಕೈಂಕರ್ಯ ಮಾಡಿಕೊಂಡು ಬರುತ್ತಿದ್ದೇವೆ. ಇದುವರೆಗೂ ಈ ವಸತಿ ಶಾಲೆಯಲ್ಲಿ 16 ಅನಾಥ ಮಕ್ಕಳು ಕಲಿಯುತ್ತಿದ್ದಾರೆ. ನನಗೆ ಎಲ್ಲಾ ಇದ್ದು ಅನಾಥನಾಗಿ ಎಲ್ಲಾ ಕಷ್ಟಗಳನ್ನ ಅನುಭವಿಸಿದ್ದೇನೆ. ನನ್ನ ಹಾಗೆ ಯಾರು ಕೂಡ ಅನಾಥರಾಗಬಾರದೆಂಬ ಉದ್ದೇಶದಿಂದ ಮಾತೃ ಭೂಮಿ ಸೇವಾಶ್ರಮ ಪ್ರಾರಂಭ ಮಾಡಿ ಅನಾಥ ಮಕ್ಕಳಿಗೆ ಇಲ್ಲಿ ಆಶ್ರಯ ನೀಡುತ್ತಿದ್ದೇನೆ. ಈ ಆಶ್ರಮದಲ್ಲಿ ಇರುವ ಒಂದೊಂದು ಮಗುವಿನ ಹಿಂದೆ ಒಂದೊಂದು ಸಂಕಷ್ಟದ ಕಥೆಯೇ ಇದೆ. ಈ ಮಕ್ಕಳಿಗೆ ನಾಡಿನ ಉನ್ನತ ವ್ಯಕ್ತಿಯನ್ನಾಗಿ ಮಾಡುವ ಉದ್ದೇಶವೇ ಟ್ರಸ್ಟ್ ನ ಗುರಿಯಾಗಿದೆ. ಈ ಸೇವೆಯ ಜೊತೆಗೆ ಕಷ್ಟದಲ್ಲಿರುವ ಬಡವರಿಗೆ ಸೇವೆ ಒದಗಿಸಲು ನಮ್ಮ ಟ್ರಸ್ಟ್ ಸದಾ ಮುಂದೆ ಇರುತ್ತೆ. ಯಾವುದೇ ಸಮಸ್ಯೆಗಳು ಎದುರಾದಾಗ ನಮ್ಮ ಟ್ರಸ್ಟ್ ನಿಂದ ಆಗುವ ಸೇವೆಯನ್ನ ಕೂಡ ನಾವು ಮಾಡಿಕೊಂಡು ಬರುತ್ತಿದ್ದೇವೆ
- ಮಹೇಶ್, ಆಶ್ರಮದ ಸಂಸ್ಥಾಪಕ
ಅನಾಥ ಮಕ್ಕಳಿಗೆ ಆಶ್ರಯತಾಣ
ಸದ್ಯಕ್ಕೆ ಆಶ್ರಮದಲ್ಲಿ 16 ಅನಾಥ ಮಕ್ಕಳು ಇದ್ದಾರೆ. ಮಕ್ಕಳನ್ನ ಹೆಚ್ಚಿಸುವ ಗುರಿ ಕೂಡ ಇದೆ. ಮಕ್ಕಳನ್ನ ಸಾಕಲು ಸಂಪನ್ಮೂಲ ವ್ಯಕ್ತಿಗಳು ಸಹಾಯ ಮಾಡುತ್ತಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯ ಪಿಎಸ್ಐ ಶಿವಕುಮಾರ್, ಚನ್ನಪಟ್ಟಣ ಗ್ರಾಮಾಂತರ ಠಾಣೆ, ಚನ್ನಪಟ್ಟಣ ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರು ಇಲ್ಲಿ ಓದುತ್ತಿರುವ ಅನಾಥ ಮಕ್ಕಳನ್ನ ದತ್ತು ಪಡೆದುಕೊಂಡು ಸೇವೆ ಮಾಡುತ್ತಿದ್ದಾರೆ.
ಸರ್ಕಾರದಿಂದ ಯಾವುದೇ ಅನುದಾನ ಇಲ್ಲ
ಈ ಆಶ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಅನಾಥ ಮಕ್ಕಳು ಇಲ್ಲಿದ್ದಾರೆ. ಈ ಸೇವಾಶ್ರಮಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ಕೇವಲ ಸಂಪನ್ಮೂಲ ವ್ಯಕ್ತಿಗಳಿಂದ ಮಾತ್ರ ಸೇವೆ ಸಿಗುತ್ತಿದೆ. ಸೇವಾ ಮನೋಭಾವ ಇದ್ಧರೆ ಸಾಲದು, ಅದನ್ನು ಹಂಚುವ ಕೆಲಸವನ್ನು ಮಾಡಬೇಕು ಅದನ್ನು ಈ ಮಾತೃ ಭೂಮಿ ಸೇವಾಶ್ರಮ ಮಾಡುತ್ತಿದೆ ಎನ್ನುತ್ತಾರೆ ಸ್ಥಳೀಯರು.
ನೂರಾರು ಕನಸು ಕಟ್ಟಿಕೊಂಡಿರುವ ಬಾಲಕರು
ಮಹೇಶ್ ಬಡ ಹಾಗೂ ಅನಾಥ ಮಕ್ಕಳಿಗೆ ಅಪ್ಪ ಅಮ್ಮ ಕೂಡ ಆಗಿದ್ದಾರೆ. ಪ್ರತಿನಿತ್ಯ ಮಕ್ಕಳ ಯೋಗ ಕ್ಷೇಮ ವಿಚಾರಿಸುತ್ತಾರೆ. ಇಲ್ಲಿಯ ಮಕ್ಕಳಿಗೆ ನಾವು ಅನಾಥರೆಂಬ ಭಾವನೆ ಬರದ ಹಾಗೆ ಸಾಕುತ್ತಿದ್ದಾರೆ. ಇಲ್ಲಿಯ ಒಂದೊಂದು ಮಕ್ಕಳು ಕೂಡ ಹಲವು ಕನಸು ಗುರಿಯನ್ನ ಇಟ್ಟುಕೊಂಡಿದ್ದಾರೆ. ಒಟ್ಟಾರೆ ಅನಾಥ ಮಕ್ಕಳಿಗೆ ಈ ಮಾತೃ ಭೂಮಿ ಸೇವಾಶ್ರಮ ಆಶ್ರಯತಾಣವಾಗಿದ್ದು, ಮಹೇಶ್ ಮಾಡಿಕೊಂಡು ಬರುತ್ತಿರುವ ನಿಸ್ವಾರ್ಥ ಸೇವೆ ಹೀಗೆ ಮುಂದುವರೆಯಲಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?