Connect with us

ಜ್ಯೋತಿಷ್ಯ

ಭಗವಾನ್ ರಾಮನಿಗೆ ಈ ವಸ್ತುಗಳನ್ನ ಅರ್ಪಿಸಿ, ಸಂತೋಷ-ಸಮೃದ್ಧಿ ಸಿಗುತ್ತೆ

festival : ಇಂದು ದೇಶದಲ್ಲಿ ರಾಮ ನವಮಿಯ ಸಂಭ್ರಮ ಮನೆ ಮಾಡಿದೆ. ಭಕ್ತರು ಈಗಾಗಲೇ ಹಬ್ಬವನ್ನ ಆಚರಿಸುತ್ತಿದ್ದಾರೆ. ಈ ದಿನ ರಾಮನಿಗೆ ವಿಶೇಷ ಪೂಜೆಗಳನ್ನ ಮಾಡಲಾಗುತ್ತದೆ. ಅದರ ಜೊತೆಗೆ ಈ ದಿನ ಕೆಲ ಮುಖ್ಯವಾದ ವಸ್ತುಗಳನ್ನ ರಾಮನಿಗೆ ಅರ್ಪಣೆ ಮಾಡಿದರೆ ಒಳ್ಳೆಯ ಫಲಗಳು ಸಿಗುತ್ತದೆ ಎನ್ನುವ ನಂಬಿಕೆ ಇದೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.

ಶ್ರೀರಾಮ ನವಮಿಯ ಸಂದರ್ಭದಲ್ಲಿ, ದೇಶದಾದ್ಯಂತ ರಾಮ ಮಂದಿರಗಳಲ್ಲಿ ಭಗವಾನ್ ರಾಮನನ್ನು ಪೂಜಿಸಲಾಗುತ್ತದೆ ಮತ್ತು ರಾಮ ಜನ್ಮೋತ್ಸವವನ್ನು ಅದ್ಧುರಿಯಾಗಿ ಆಚರಿಸಲಾಗುತ್ತದೆ. ರಾಮ ನವಮಿಯ ಸಂದರ್ಭದಲ್ಲಿ, ನೀವು ಕೆಲವು ಸರಳ ಕೆಲಸಗಳನ್ನು ಮಾಡುವುದರೊಂದಿಗೆ ನಿಮ್ಮ ಜೀವನವನ್ನು ಸಂತೋಷದಿಂದ ತುಂಬಿರುತ್ತದೆ ಎನ್ನುವ ನಂಬಿಕೆ ಇದೆ. ಪುರಾಣಗಳ ಪ್ರಕಾರ, ಶ್ರೀರಾಮನು ಚೈತ್ರ ಶುದ್ಧ ನವಮಿ, ಪುನರ್ವಸು ನಕ್ಷತ್ರದ ಕರ್ಕ ಲಗ್ನದಲ್ಲಿ, ಅಭಿಜಿತ್ ಮುಹೂರ್ತದಲ್ಲಿ, ಅಂದರೆ ಮಧ್ಯಾಹ್ನ 12 ಗಂಟೆಗೆ ಜನಿಸಿದ. ಹಾಗಾಗಿ ಈ ದಿನಕ್ಕೆ ಹೆಚ್ಚಿನ ಮಹತ್ವವಿದೆ.

ರಾಮಾಯಣದ ಪ್ರಕಾರ, ರಾಮ ವಿಷ್ಣುವಿನ ಏಳನೇ ಅವತಾರ ಎನ್ನಲಾಗುತ್ತದೆ. ಈ ವರ್ಷ ರಾಮ ನವಮಿ 17 ಏಪ್ರಿಲ್ 2024 ರಂದು. ರಾಮನವಮಿಯಂದು ಭಗವಾನ್ ರಾಮನ ಮಗುವಿನ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ರಾಮನಿಗೆ ಕೆಲ ವಸ್ತುಗಳನ್ನ ನೈವೇದ್ಯ ಸಗ ಮಾಡಬೇಕು. ಹಾಗಾದ್ರೆ ಈ ದಿನ ಮಾಡಬೇಕಾದ ಪ್ರಮುಖ ಕೆಲಸ ಹಾಗೂ ನೈವೇದ್ಯಗಳು ಯಾವುವು ಎಂಬುದು ಇಲ್ಲಿದೆ.

ಪಂಜಿರಿ – ಈ ಪಂಜಿರಿ ಎನ್ನುವ ಪದಾರ್ಥವು ಬಹಳ ವಿಶೇಷವಾಗಿದ್ದು, ಇದನ್ನ ಸಾಮಾನ್ಯವಾಗಿ ಉತ್ತರ ಭಾರತದ ಭಾಗಗಳಲ್ಲಿ ಸೇವನೆ ಮಾಡುತ್ತಾರೆ. ಈ ಪಂಜಿರಿ ಎಂದರೆ ರಾಮನಿಗೆ ಬಹಳ ಇಷ್ಟವಂತೆ. ಅದರಲ್ಲೂ ಶ್ರೀರಾಮನಿಗೆ ಕೊತ್ತಂಬರಿ ಸೊಪ್ಪು, ತುಪ್ಪ ಮತ್ತು ಸಕ್ಕರೆಯಿಂದ ಮಾಡಿದ ಪಂಜಿರಿ ಎಂದರೆ ತುಸು ಜಾಸ್ತಿಯೇ ಪ್ರೀತಿ ಎನ್ನಲಾಗುತ್ತದೆ. ಹಾಗಾಗಿ ರಾಮ ನವಮಿ ದಿನ ಇದನ್ನ ಅರ್ಪಣೆ ಮಾಡಿದರೆ ರಾಮನಿಗೆ ಸಂತೋಷವಾಗುತ್ತಾನೆ ಮತ್ತು ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಪಾನಕ-ಕೋಸಂಬರಿ: ರಾಮ ನವಮಿಯಂದು ನಾವು ರಾಮನಿಗೆ ತಪ್ಪದೇ ಅರ್ಪಿಸಬೇಕಾದ ನೈವೇದ್ಯಗಳು ಎಂದರೆ ಪಾನಕ ಹಾಗೂ ಕೋಸಂಬರಿ. ದಕ್ಷಿಣ ಭಾರತದಲ್ಲಿ ಪಾನಕ ಹಾಗೂ ಕೋಸಂಬರಿಯನ್ನ ದೇವಸ್ಥಾನಗಳಲ್ಲಿ ಸಹ ಅರ್ಪಿಸಲಾಗುತ್ತದೆ. ಇದನ್ನ ರಾಮನಿಗೆ ಅರ್ಪಣೆ ಮಾಡುವುದರಿಂದ ಹಾಗೂ ಇತರ ಭಕ್ತರಿಗೆ ಸಹ ಹಂಚುವುದರಿಂದ ಜೀವನದಲ್ಲಿನ ಕಷ್ಟಗಳಿಗೆ ಪರಿಹಾರ ಸಿಗುತ್ತದೆ.

ಪಂಚಾಮೃತ – ಎಲ್ಲರಿಗೂ ಗೊತ್ತಿರುವಂತೆ ವಿಷ್ಣುವಿನ ಆರಾಧನೆಯಲ್ಲಿ ಪಂಚಾಮೃತವು ಬಹಳ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಅಲ್ಲದೇ, ವಿಷ್ಣುವಿನ ಪ್ರತಿಯೊಂದು ಅವತಾರಗಳ ಪೂಜೆ ಮಾಡುವಾಗ ಪಂಚಾಮೃತವನ್ನ ತಪ್ಪದೇ ನೈವೇದ್ಯ ಮಾಡಬೇಕು. ಹಾಲು, ಮೊಸರು, ತುಪ್ಪ ಮತ್ತು ಸಕ್ಕರೆಯ ಪಂಚಾಮೃತವನ್ನು ನೈವೇದ್ಯ ಮಾಡಿದರೆ ಹಣಕಾಸಿನ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ.

Advertisement

ಅಕ್ಕಿ ಪಾಯಸ – ಭಗವಾನ್ ರಾಮನಿಗೆ ಪಾಯಸ ಎಂದರೆ ತುಂಬಾ ಇಷ್ಟ. ಅನ್ನವನ್ನು ದೇವರ ಆಹಾರ ಎನ್ನುತ್ತಾರೆ. ರಾಮ ನವಮಿಯಂದು ಅಕ್ಕಿಯ ಪಾಯಸ ಅರ್ಪಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಅಲ್ಲದೇ, ರಾಮನ ಜನ ಅಕ್ಕಿ ಪಾಯಸ ಶಕ್ತಿಯಿಂದಲೇ ಆಗಿದ್ದು ಎನ್ನಲಾಗುತ್ತದೆ, ಹಾಗಾಗಿ ಇದನ್ನ ಅರ್ಪಣೆ ಮಾಡುವುದರಿಂದ ನಿಮಗೆ ಸಂತಾನ ಭಾಗ್ಯ ಸಹ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.

ರಾಮ ನವಮಿಯಂದು ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಲ್ಲಿ ಇಟ್ಟು ರಾಮ ನವಮಿಯನ್ನು ಅನೇಕರು ಆಚರಿಸುತ್ತಾರೆ. ಈ ದಿನ ಮಾಡುವಂತಹ ಉಪವಾಸವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಇದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಎಲ್ಲಾ ಪಾಪಗಳು ದೂರವಾಗುತ್ತವೆ.

ಈ ದಿನ ಪೂಜೆ ಮಾಡುವಾಗ ಶ್ರೀಗಂಧ ಮತ್ತು ಬೊಟ್ಟನ್ನು ಇಟ್ಟು ರಾಮನ ಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಬೇಕು. ರಾಮರಕ್ಷಾಸ್ತೋತ್ರ ಓದಬೇಕು. ಈ ದಿನ ಶ್ರೀರಾಮನಿಗೆ ನೈವೇದ್ಯ ಮಾಡಬೇಕು. ಜೊತೆಗೆ ರಾಮ ನಾಮವನ್ನು ಜಪಿಸಬೇಕು. ರಾಮನಿಗೆ ರಾಮ ನವಮಿಯ ದಿನದಂದು ತುಳಸಿದಳ, ಸೀತೆ ಮತ್ತು ಹನುಮಂತನನ್ನು ವೀಳ್ಯದೆಲೆಯಿಂದ ಪೂಜಿಸಬೇಕು.

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ