ವಿಜಯಪುರ :
ರೈಸಿಂಗ್ ಕನ್ನಡ :
ಕೊರೋನಾ ಮಹಾಮಾರಿಯಿಂದಾಗಿ ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಬಸೆಗೆ ಬರುವ ಹೆಣ್ಣುಮಕ್ಕಳು ಪರದಾಡುವಂತಾಗಿದೆ.
ಇಲ್ಲಿನ ಜಿಲ್ಲಾಸ್ಪತ್ರೆಯ ಆರು ಜನ ವೈದ್ಯರಿಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಗರ್ಭಿಣಿಯರಗೆ ಹೆರಿಗೆ ಮಾಡಿಸೋರು ಯಾರು ಇಲ್ಲದಂತಾಗಿದೆ. ಈ ಹಿನ್ನಲೆ ನಾರ್ಮಲ್ ಹೆರಿಗೆಗಳನ್ನು ಮಾತ್ರ ಜಿಲ್ಲಾ ಆಸ್ಪತ್ರೆಯಲ್ಲಿ ಮಾಡುತ್ತಿದ್ದು ಸಿಜರಿಯನ್ ಮಾಡಿಸಲು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಜನ ಮುಖ ಮಾಡುವಂತಾಗಿದೆ.
ಸ್ತ್ರೀ ರೋಗ ಹಾಗೂ ಅರವಳಿಕೆ ತಜ್ಞರಿಗೂ ಕೊರೋನಾ ಸೋಂಕು ತಗುಲುತ್ತಿದ್ದು, ಇದರಿಂದ ಹೆರಿಗೆ ವಾರ್ಡ್ನಲ್ಲಿ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ಐದು ತಿಂಗಳಿಂದ ಈಚೆಗೆ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಚಿಕಿತ್ಸೆಯ ವಾರ್ಡ್ ಆರಂಭಗೊಂಡಿದೆ. ಇದೇ ವೇಳೆ ಕೊರೊನಾ ಜಿಲ್ಲೆಯಾದ್ಯಂತ ಹಬ್ಬಿದ ಕಾರಣ, ಖಾಸಗಿ ಹೆರಿಗೆ ಆಸ್ಪತ್ರೆಯ ಗರ್ಭಿಣಿಯರು ಇದೇ ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಇದರಿಂದ ವೈದ್ಯರ ಕೊರೊತೆಯೂ ಹೆಚ್ಚಾಗಿದೆ.
ಈ ಮೊದಲು ನಿತ್ಯ 35-40 ಹೆರಿಗೆ ಆಗುತ್ತಿದ್ದವು. ಅವುಗಳಲ್ಲಿ ಹೆಚ್ಚಾಗಿ ಸಿಜರಿಯನ್ ಮೂಲಕವೇ ಆಗುವ ಕಾರಣ ಇಲ್ಲಿನ ವೈದ್ಯರಿಗೆ ಬಿಡುವೇ ಇಲ್ಲದಂತಾಗಿತ್ತು. ಇದರ ನಡುವೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಸ್ತ್ರೀ ರೋಗ ತಜ್ಞರು, ಮೂವರು ಅರವಳಿಕೆ ತಜ್ಞರು ಹಾಗೂ ಓರ್ವ ಪೆಥಾಲಾಜಿಸ್ಟ್ಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಸಮಸ್ಯೆ ಉಂಟಾಗಿದೆ.
ಹೆಚ್ಚುವರಿಯಾಗಿ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಂದಲೂ ವೈದ್ಯರನ್ನು ಎರವಲು ಸೇವೆಗೆ ನಿಯೋಜಿಸಲಾಗಿದೆ. ಆದರೆ ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡರೆ, ಇಲ್ಲವೇ ತುರ್ತು ಹೆರಿಗೆಗೆ ಬರುವ ಗರ್ಭಿಣಿಯರಿಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚನೆ ನೀಡಲಾಗುತ್ತಿದೆ. ಬೇರೆ ವೈದ್ಯರನ್ನು ಆದಷ್ಟು ಬೇಗ ನೇಮಕ ಮಾಡಬೇಕು ಎಂಬುದು ರೋಗಿಗಳ ಸಂಬಂಧಿಕರ ಬೇಡಿಕೆಯಾಗಿದೆ. ಈ ಮುಂಚೆಯಿಂದಲೂ ಜಿಲ್ಪಾಸ್ಪತ್ರೆಯಲ್ಲಿ ವೈದ್ಯರು, ಶುರ್ಶೂಷಕಿಯರ ಕೊರತೆಯನ್ನು ಎದುರಿಸುತ್ತಿತ್ತು. ಈಗ ಕೊರೊನಾ ಬಂದ ಮೇಲೆ ವೈದ್ಯರ ಸಮಸ್ಯೆ ಹೆಚ್ಚಾಗುತ್ತಿದೆ.
ಕೆಲ ದಿನಗಳ ಹಿಂದೆಯಷ್ಟೇ ಇದೇ ಆಸ್ಪತ್ರೆಯಲ್ಲಿ ಬಾಣಂತಿ ಹಾಗೂ ಮಗು ಸೂಕ್ತ ಚಿಕಿತ್ಸೆ ದೊರೆಯದೇ ಸಾವನ್ನಪ್ಪಿದ್ದರು. ಇನ್ನಾದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿ ವೈದ್ಯರ ನೇಮಕ ಮಾಡಬೇಕಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?