ರೈಸಿಂಗ್ ಕನ್ನಡ :
ಬೆಂಗಳೂರು :
ಕರ್ನಾಟಕದಲ್ಲಿ ಮುಂಗಾರು ಮಳೆ ಆರ್ಭಟ ಹೆಚ್ಚಾಗಿದೆ. ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ ಜು.7ರವರೆಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಶನಿವಾರವೂ ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೇಸರಿ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಕರಾವಳಿಯಲ್ಲಿ ವೇಗವಾದ ಗಾಳಿ ಬೀಸುತ್ತಿರೋದ್ರಿಂದ ಮೀನುಗಾರರು ಕಡಲಿಗೆ ಇಳಿಯಬಾರದು ಅಂತ ಕೂಡ ಸಿ.ಎಸ್ ಪಾಟೀಲ್ ಎಚ್ಚರಿಸಿದ್ದಾರೆ.
ಇನ್ನೂ ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರ್ಗಿ, ರಾಯಚೂರು, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ನಾಲ್ಕು ದಿನಗಳವರೆಗೆ ಹಗುರದಿಂದ ಹಿಡಿದು ಸಾಧಾರಣವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಯಾವ ಊರಲ್ಲಿ ಎಷ್ಟು ಮಳೆ? (ಶುಕ್ರವಾರದ ಮಳೆ)
ಹೊನ್ನಾವರದಲ್ಲಿ ವಾರ 17 ಸೆಂ.ಮೀ
ಮಂಗಳೂರು – 16 ಸೆಂ.ಮೀ
ಮೂಡುಬಿದರೆ 16 ಸೆಂ.ಮೀ
ಅಂಕೋಲ – 13 ಸೆಂ.ಮೀ
ಕಾರ್ಕಳ – 12 ಸೆಂ.ಮೀ
ಚಿಂಚೋಳಿ 12 ಸೆಂ.ಮೀ
ಭಟ್ಕಳ – 11 ಸೆಂ.ಮೀ
ಉಪ್ಪಿನಂಗಡಿ – 10 ಸೆಂ.ಮೀ,
ಗೋಕರ್ಣ – 10 ಸೆಂ.ಮೀ,
ಕಾರವಾರ – 10 ಸೆಂ.ಮೀ,
ಕುಮಟಾ – 10 ಸೆಂ.ಮೀ,
ಸುಬ್ರಹ್ಮಣ್ಯ – 9 ಸೆಂ.ಮೀ,
ಕದ್ರಾ – 9 ಸೆಂ.ಮೀ
ಪುತ್ತೂರು – 8 ಸೆಂ.ಮೀ
ಸುಳ್ಯ – 7 ಸೆಂ.ಮೀ,
ಧರ್ಮಸ್ಥಳ – 7 ಸೆಂ.ಮೀ,
ಭಾಗಮಂಡಲ – 7 ಸೆಂ.ಮೀ,
ಕೋಟಾ – 6 ಸೆಂ.ಮೀ,
ಕುಂದಾಪುರ – 5 ಸೆಂ.ಮೀ,
ಹೊಸನಗರ – 5 ಸೆಂ.ಮೀ,
ಶೃಂಗೇರಿ – 5 ಸೆಂ.ಮೀ,
ತೀರ್ಥಹಳ್ಳಿ – 5 ಸೆಂ.ಮೀ,
ಸಕಲೇಶಪುರ – 4 ಸೆಂ.ಮೀ,
ಮಡಿಕೇರಿ – 3 ಸೆಂ.ಮೀ,
ಮೊಳಕಾಲ್ಮೂರು – 3 ಸೆಂ.ಮೀ,
ಸೊರಬ – 3 ಸೆಂ.ಮೀ,
ಚಿಂತಾಣಿ – 3 ಸೆಂ.ಮೀ,
ತರೀಕೆರೆ – 3 ಸೆಂ.ಮೀ,
ಸೋಮವಾರಪೇಟೆ – 3 ಸೆಂ.ಮೀ,
ಹೊಸಪೇಟೆ – 3 ಸೆಂ.ಮೀ,
ಬೆಳಗಾವಿ – 2 ಸೆಂ.ಮೀ,
ಗೌರಿಬಿದನೂರು – 2 ಸೆಂ.ಮೀ,
ಶಾಲನಗರದಲ್ಲಿ – 2 ಸೆಂ.ಮೀ, ಮಳೆಯಾಗಿದೆ
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?