Featured
ನೇಪಾಳದಿಂದಲೂ ಭಾರತದ ಭೂ ಕಬಳಿಕೆ- ಗೂಗಲ್ ಮ್ಯಾಪ್ ಅಪ್ಡೇಟ್ ಮಾಡಲು ಸಿದ್ಧತೆ- ಹೊಸ ಭೂಪಟ ವಿಶ್ವಸಂಸ್ಥೆಗೆ ಕಳುಹಿಸಲು ನೇಪಾಳ ಪ್ಲಾನ್..!

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಒಂದು ಕಡೆ ಚೀನಾ ಮತ್ತೊಂದು ಕಡೆ ನೇಪಾಳ, ಇನ್ನೊಂದೆಡೆ ಪಾಕಿಸ್ತಾನ ಈ ಮೂರು ರಾಷ್ಟ್ರಗಳು ಭಾರತದ ಗಡಿಭಾಗವನ್ನು ವಶಪಡಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಲೇ ಇದೆ. ಚೀನಾ ಲಡಾಕ್ ಪ್ರಾಂತ್ಯದಲ್ಲಿ ಒಳನುಗ್ಗುವ ಯತ್ನ ಮಾಡಿ ಅವಮಾನ ಅನುಭವಿಸಿದೆ. ಪಾಕಿಸ್ತಾನ ಜಮ್ಮುಕಾಶ್ಮೀರದಲ್ಲಿ ನಿರಂತರ ದಾಳಿಗಳನ್ನು ಮಾಡುತ್ತಲೇ ಇದೆ. ಈಗ ನೇಪಾಳ ಉತ್ತರಾಖಂಡದ ಕೆಲವು ಭಾಗಗಳನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ. ಅಷ್ಟೇ ಅಲ್ಲ ಭಾರತದ ಕೆಲವು ಭೂಪ್ರದೇಶಗಳನ್ನು ಸೇರಿಸಿಕೊಂಡು ಹೊಸ ಭೂಪಟವನ್ನು ಕೂಡ ಸಿದ್ಧ ಪಡಿಸಿಕೊಂಡಿದೆ.
ನೇಪಾಳ ಭಾರತದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾಗಳನ್ನು ತನ್ನ ದೇಶದ ನಕ್ಷೆಯೊಳಗೆ ಸೇರಿಸಿಕೊಂಡಿದೆ. ಹೊಸ ನಕ್ಷೆಗೆ ನೇಪಾಳ ಪ್ರದಾನಿ ಕೆ.ಪಿ.ಶರ್ಮಾ ಒಲಿ ಸರ್ಕಾರದಿಂದ ಅನುಮೋದನೆ ಕೂಡ ಸಿಕ್ಕಿದೆ. ಈಗ ಹೊಸ ಭೂಪಟವನ್ನು ವಿಶ್ವಸಂಸ್ಥೆ ಹಾಗೂ ಗೂಗಲ್ಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಚೀನಾ ಆಮೀಷಕ್ಕೆ ಬಿದ್ದು ಕೆ.ಪಿ.ಒಲಿ ಸರ್ಕಾರ ಭಾರತದ ವಿರುದ್ಧ ಈ ಕ್ರಮಕ್ಕೆ ಮುಂದಾಗಿದೆ ಎಂದು ಸ್ವಪಕ್ಷೀಯರೇ ಒಲಿ ವಿರುದ್ಧ ತಿರುಗಿಬಿದ್ದಿದ್ದಾರೆ. ಅಷ್ಟೇ ಅಲ್ಲ ಒಲಿಯವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವ ಪ್ರಯತ್ನ ಕೂಡ ನಡೆಯುತ್ತಿದೆ. ಆದರೆ ಇದ್ಯಾವುದಕ್ಕೂ ಒಲಿ ತಲೆಕೆಡಿಸಿಕೊಳ್ಳದೆ ದೇಶದ ನಕಾಶೆಯನ್ನು ಬದಲಿಸಿದ್ದಾರೆ. ಇದನ್ನು ಇಂಗ್ಲೀಷ್ನಲ್ಲಿ ಮುದ್ರಿಸುವ ಪ್ರಯತ್ನವೂ ನಡೆಯುತ್ತಿದೆ. ಹೊಸ ನಕಾಶೆಯನ್ನು ಅಂತರಾಷ್ಟ್ರೀಯ ಸಮುದಾಯಕ್ಕೆ ಕಳುಹಿಸಿಕೊಡುತ್ತೇವೆ ಎಂದು ನೇಪಾಳ ಸರ್ಕಾರ ಹೇಳಿದೆ.
ಗೂಗಲ್ ಮ್ಯಾಪ್ನಲ್ಲಿ ಅಪ್ಡೇಟ್ ಆದ ತಕ್ಷಣ ಅಥವಾ ನೇಪಾಳ ಹೊಸ ಭೂಪಟ ಮಾಡಿಕೊಂಡ ಬಳಿಕ ಭಾರತದ ಗಡಿಭಾಗ ಏನೂ ಬದಲಾಗುವುದಿಲ್ಲ. ನೇಪಾಳ ಸರ್ಕಾರದ ಈ ಕ್ರಮವನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ನೇಪಾಳದಲ್ಲಿ ಅಧಿಕಾರ ಹೊಂದಿರುವ ಕಮ್ಯೂನಿಷ್ಟ್ ಸರ್ಕಾರದ ಬಗ್ಗೆ ಅಲ್ಲಿನ ಜನರೇ ತಿರುಗಿ ಬಿದ್ದಿದ್ದಾರೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್