Featured
ಕೊರೊನಾ ಸಂದರ್ಭದಲ್ಲೂ ಅಮ್ಮನಿಗಿಲ್ಲ ಆಸರೆ – ಹೆತ್ತವಳನ್ನೇ ಹೊರಹಾಕಿದ ಪಾಪಿ ಮಕ್ಕಳು..!

ರೈಸಿಂಗ್ ಕನ್ನಡ :
ಪ್ರತಿನಿಧಿ, ವಿಶ್ವ ಕುಮಾರ್, ಬೀದರ್ :
ಹೆತ್ತ ತಾಯಿಯನ್ನೇ ಮನೆಯಿಂದ ಹೊರ ಹಾಕಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ. ಮನೆಯಿಂದ ಹೋರ ಬಂದ ವೃದ್ದೆ ಸರ್ಕಾರಿ ಶಾಲೆಯಲ್ಲಿ ಆಸರೆ ಪಡೆದಿದ್ದಾರೆ. ಖೆರ್ಡಾ ಗ್ರಾಮದ ನಿವಾಸಿಯಾರಿರುವ ವೃದ್ದೆಯನ್ನ ತನ್ನ ಮಕ್ಕಳು ಕಳೆದ ಮೂರು ವರ್ಷಗಳ ಹಿಂದೆಯೇ ಮನೆಯಿಂದ ಹೊರ ಹಾಕಿದ್ದಾರಂತೆ.
ದಾರಿ ತೊಚದ ವೃದ್ದೆ ಮೂರು ವರ್ಷಗಳಿಂದ ಗುಡಿ ಗುಂಡಾಂತರಗಳಲ್ಲಿ ತನ್ನ ಜೀವನ ಕಳೆಯುತ್ತಿದ್ದಳು, ದೇವಾಸ್ಥಾನಕ್ಕೆ ಬರುವ ಭಕ್ತರು ನೀಡುವ ಪ್ರಸಾದ ತಿಂದು ಹಾಗೋ ಹೀಗೋ ಜೀವನ ನಡೆಸುತ್ತಿದ್ದರು, ಆದರೆ ಇತ್ತಿಚಿನ ದಿನದಲ್ಲಿ ಕೋರೊನಾ ಮಹಾಮಾರಿಗೆ ಕಳೆದ ಮೂರು ನಾಲ್ಕು ತಿಂಗಳಿಂದ ಲಾಕ್ ಡೌನ್ನಿಂದಾಗಿ ತುತ್ತು ಅನ್ನಕ್ಕೂ ಪರದಾಡುತ್ತಿರುವ ವೃದ್ದೆ ಈಗ ಬಸವಕಲ್ಯಾಣದ ಸರ್ಕಾರಿ ಶಾಲೆಯಲ್ಲಿ ಆಸರೆ ಪಡೆದಿದ್ದಾರೆ.
ವೃದ್ದೆಯ ಸಹಾಯಕ್ಕೆ ಜಿಲ್ಲಾಪಂಚಾಯತ್ ಸಸದ್ಯ ಗುಂಡುರೆಡ್ಡಿ ಮುಂದಾಗಿದ್ದು,. ಸುದ್ದಿ ತಿಳಿದ ಸಮಾಜ ಸೇವಕಿ ಲಕ್ಷ್ಮಿಬಾವಗಿ ಸ್ಥಳಕ್ಕೆ ಭೇಟಿ ನೀಡಿ, ಇನ್ನು ಉಳಿದ ನಿರಾಶ್ರಿತ ವೃದ್ದೆಯರ ಸಹಾಯಕ್ಕೆ ಮುಂದಾಗಿ ಕುಡಿಯಲು ನೀರು, ಬ್ಲ್ಯಾಂಕೆಟ್ ಸೇರಿದಂತೆ ಬಟ್ಟೆಗಳನ್ನ ನೀಡಿ ವೃದ್ದೆಗೆ ಸಹಾಯಮಾಡಿದ್ದಾರೆ.
ನಿರಾಶ್ರಿತ ವೃದ್ದೆಯ ಬಗ್ಗೆ ಈಗಾಗಲೆ ಜಿಲ್ಲಾಡಳಿತ ಗಮನಕ್ಕೆ ತರಲಾಗಿದ್ದು, ಜಿಲ್ಲಾಡಳಿತ ಸಹ ವೃದ್ದೆಯನ್ನ ನಿರಾಶ್ರೀತರ ಕೇಂದ್ರಕ್ಕೆ ತಲುಪಿಸುವ ಕಾರ್ಯಕ್ಕೂ ಇನ್ನು ಮುಂದಾಗದಿರುವುದು ವಿಪರ್ಯಾಸವೆ ಸರಿ. ಅದೇನೆ ಇರಲಿ, ಒಂಭತ್ತು ತಿಂಗಳು ಹೆತ್ತು ಹೊತ್ತು ೩೦ ವರ್ಷ ಕಷ್ಟಪಟ್ಟು ಸಾಕಿದ ಮಕ್ಕಳೆ ತನ್ನ ತಾಯಿಯನ್ನ ಮನೆಯಿಂದ ಹೊರ ಹಾಕಿದ್ದು ದುರಂತವೆ ಸರಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?