ರೈಸಿಂಗ್ ಕನ್ನಡ :- 2020 ಮುಗಿದು, 2021ಕ್ಕೆ ಕಾಲಿಟ್ಟಾಯ್ತು. ಕೊರೋನಾ ಓಡಿಸಲು ಲಸಿಕೆ ಕೂಡ ಬರ್ತಿದೆ. ಈಗಾಗ್ಲೇ ಡ್ರೈ-ರನ್ ಸಕ್ಸಸ್ ಆಗಿದೆ. ಆದ್ರೆ, ಲಸಿಕೆಗೆ ಎಷ್ಟು ದುಡ್ಡು ಕೊಡಬೇಕಪ್ಪ ಅನ್ನೋ ಚಿಂತೆ ಜನರನ್ನ ಕಾಡ್ತಿದೆ. ಯಾಕಂದ್ರೆ, ಕೊರೋನಾ ಟ್ರೀಟ್ಮೆಂಟ್ ಅಷ್ಟೊಂದು ಕಾಸ್ಟ್ಲಿಯಾಗಿತ್ತು. ಹೀಗಾಗಿ, ಇನ್ನು ಲಸಿಕೆಗೆ ಎಷ್ಟು ದುಡ್ಡು ಕೊಡಬೇಕು ಅನ್ನೋ ಚಿಂತೆ ಜನರನ್ನ ಕಾಡ್ತಿದೆ.
ಜನರ ಚಿಂತೆಗೆ, ಪ್ರಶ್ನೆಗೆ ಕೇಂದ್ರ ಸರ್ಕಾರ ಡೋಂಟ್ ವರಿ, ನಿಮ್ಮ ಜೊತೆ ನಾವಿದ್ದೇವೆ ಅಂತ ಉತ್ತರ ನೀಡಿದೆ. ಯೆಸ್, ದೇಶದ ಜನರಿಗೆ ಪ್ರಧಾನಿ ಮೋದಿ ಗುಡ್ ನ್ಯೂಸ್ ನೀಡಿದ್ದಾರೆ. ದೇಶದ ಜನರಿಗೆ ಸಂಕ್ರಾಂತಿ ಗಿಫ್ಟ್ ಕೊಟ್ಟಿರೋ ಕೇದ್ರ ಸರ್ಕಾರ, ದೇಶಾದ್ಯಂತ ಕೊರೋನಾ ಲಸಿಕೆ ಫುಲ್ ಫ್ರೀ ಅಂತ ಘೋಷಣೆ ಮಾಡಿದೆ. ಕೊರೋನಾ ಲಸಿಕೆಯನ್ನ ಫ್ರೀಯಾಗಿ ಕೊಡಲು ಕೇಂದ್ರದ ನಿರ್ಧಾರ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಕೊರೋನಾ ಲಸಿಕಾ ಡ್ರೈ-ರನ್ ಕೇಂದ್ರಗಳಿಗೆ ಭೇಟಿ ನೀಡಿದ್ದ ಡಾ. ಹರ್ಷವರ್ಧನ್, ಲಸಿಕೆ ಬಗ್ಗೆ ಮಾಹಿತಿ ನೀಡಿದ್ರು. ದೇಶಾದ್ಯಂತ ಕೊರೋನಾ ಲಸಿಕೆ ಹಂಚಿಕೆಯ ಡ್ರೈ ರನ್ ಸಕ್ಸಸ್ ಆಗಿದೆ ಎಂದ ಹರ್ಷವರ್ಧನ್, ದೆಹಲಿ ಆಸ್ಪತ್ರೆಯಲ್ಲಿ ಡ್ರೈ-ರನ್ ಪರಿಶೀಲನೆ ನಡೆಸಿದ್ರು. ಈ ವೇಳೆ, ದೇಶದ ಎಲ್ಲಾ ಜನತೆಗೆ ಉಚಿತ ಕೊರೋನಾ ಲಸಿಕೆ ಹಂಚಿಕೆ ಮಾಡೋದಾಗಿ ಘೋಷಣೆ ಮಾಡಿದ್ರು.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಜನತೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. ಆದಷ್ಟು ಬೇಗ ಲಸಿಕೆ ಬರಲಿ ಅಂತ ಜನ ಕಾಯ್ತಿದ್ದಾರೆ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?