ಕೊಪ್ಪಳ:
ರೈಸಿಂಗ್ ಕನ್ನಡ:
ರಾಜಮಹರಾಜರ ಕಾಲದಿಂದಲೂ ಡ್ರಗ್ಸ್ ಮತ್ತು ಡ್ರಿಂಕ್ಸ್ ಬಳಕೆಯಲ್ಲಿದ್ದು ಎಲ್ಲ ಕ್ಷೇತ್ರದಲ್ಲೂ ಜನ ಡ್ರಗ್ಸ್ ಮತ್ತು ಡ್ರಿಂಕ್ಸ್ ತೆಗೆದುಕೊಳ್ಳುತ್ತಿದ್ದಾರೆ ಇದಕ್ಕೆ ರಾಜಕೀಯವೂ ಹೊರತಲ್ಲ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ ವಿವಾದಿತ ಹೇಳಿಕೆ ನೀಡಿದ್ದಾರೆ.
ಡ್ರಗ್ಸ್ ಮಾಫಿಯಾ ಕುರಿತು ಮಾತನಾಡಿದ ಅವರು, ರಾಜಮಹರಾಜರ ಕಾಲದಿಂದಲೂ ಡ್ರಗ್ಸ್ ಮತ್ತು ಡ್ರಿಂಕ್ಸ್ ಬಳಕೆಯಲ್ಲಿದ್ದು ಶೇ.30ರಿಂದ 40ರಷ್ಟು ಮಂದಿ ಮಾದಕ ವಸ್ತು ಮತ್ತು ಮದ್ಯಪಾನದ ಹವ್ಯಾಸಗಳನ್ನ ಬೆಳೆಸಿಕೊಂಡಿದ್ದಾರೆ ಎಂದರು.
ಡ್ರಗ್ಸ್ ಜಾಲಕ್ಕೆ ಸಿನಿಮಾ, ರಾಜಕಾರಣ ಕ್ಷೇತ್ರ ಅಂತಾ ಇಲ್ಲ. ಎಲ್ಲ ಕ್ಷೇತ್ರದಲ್ಲೂ ಡ್ರಗ್ಸ್ ತೆಗೆದುಕೊಳ್ಳುವವರು ಇದ್ದಾರೆ. ಡ್ರಗ್ಸ್ ಜೊತೆ ಬದುಕುವವರು ನಮ್ಮ ಸಮಾಜದಲ್ಲಿ ಇದ್ದಾರೆ ಎಂದರು.
ಮಾಧ್ಯಮ ಕ್ಷೇತ್ರದ ಅನೇಕರಿಗೆ ಡ್ರಗ್ಸ್ ಲಿಂಕ್ ಇದೆ. ನಿಮ್ಮ ಆತ್ಮಸಾಕ್ಷಿಯಿಂದ ಹೇಳಿ ನೀವು ಎಂದ ಅಮರೇಗೌಡ ಬಯ್ಯಾಪೂರ ಪ್ರಶ್ನಿಸಿದರು. ನಾನು ಹೇಳಿದ್ದನ್ನು ಏನೇನೂ ತಿಳಿದುಕೊಂಡರೆ ಹೇಗೆ ? ಇದನ್ನು ಇಷ್ಟೊಂದು ಬಿಂಬಿಸುವ ಅಗತ್ಯವಿಲ್ಲ ಎಂದು ಹೇಳಿದ್ದೇನೆ ಎಂದು ಅಮರೇಗೌಡ ಬಯ್ಯಾಪೂರ ತಿಳಿಸಿದ್ದಾರೆ.
ಬರೀ ನಟಿಯರನ್ನ ಟಾರ್ಗೆಟ್ ಮಾಡಬೇಡಿ ಸಿನಿಮಾ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?