Featured
ನಿಧಿಯ ಆಸೆಗೆ ಹೋಗಿ ಜೀವವೇ ಹೋಯಿತು- ಹಾಲಿ VS ಮಾಜಿ ಶಾಸಕರ ಫೈಟ್ಗೆ ಕಾರಣವೂ ಆಯಿತು..!

ರೈಸಿಂಗ್ ಕನ್ನಡ:
ಮಂಜುನಾಥ ತಳವಾರ, ಬಾಗಲಕೋಟೆ
ಸ್ನೇಹಿತರ ಜೊತೆ ನಿಧಿ ಅಗೆಯಲು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹೂಲಗೇರಿ ರಸ್ತೆ ಬಳಿ ನಡೆದಿದೆ. ಸಂಗಮೇಶ್ ಹಿರೆಮಠ ಎಂಬುವವರ ಹೊಲದಲ್ಲಿ ಘಟನೆ ನಡೆದಿದ್ದು ಇಳಕಲ್ ನಗರದ ನಿವಾಸಿ ಚಿದಾನಂದ ಚಿಲ್ಲಾಳ(32 ) ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ನಿಂಬೆಹಣ್ಣು, ಬಾಳೆಹಣ್ಣು, ಬಳೆ, ಎಣ್ಣೆ, ಕುಂಕುಮ ಭಂಡಾರ,ವಿಭೂತಿ,ತೆಂಗಿನಕಾಯಿ,ಪೂಜಾ ಬಟ್ಟಲು,ಗೋಮೂತ್ರದ ಕ್ಯಾನ್,ಪೂಜಾ ಸಾಮಗ್ರಿ ಪತ್ತೆಯಾಗಿವೆ.
ನಿಧಿ ಅಗೆಯಲು ಬಳಸಿದ ಸಲಿಕೆ, ಹಾರೆ ,ಸ್ಥಳದಲ್ಲಿ ಚಪ್ಪಲಿಗಳು ಕೂಡ ಪತ್ತೆಯಾಗಿವೆ. ಇನ್ನು ಸಾವಿನ ಬಗ್ಗೆ ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಗಂಭೀರ ಆರೋಪ ಮಾಡಿದ್ದು, ಹಾಲಿ ಶಾಸಕ ದೊಡ್ಡನಗೌಡ ಪಾಟಿಲ್ ಬೆಂಬಲಿಗರು ಮತ್ತು ಪೊಲೀಸರು ಚಿದಾನಂದ ಮೇಲೆ ಹಲ್ಲೆ ಮಾಡಿದ್ದಾರೆ. ದೊಡ್ಡನಗೌಡ ಪಾಟಿಲ್ ಬಂಟರಾದ ಶಿವನಗೌಡ ಪಾಟಿಲ್, ಪರತಗೌಡ ಪಾಟಿಲ್, ಇಳಕಲ್ ಗ್ರಾಮೀಣ ಠಾಣೆ ಪೇದೆಗಳಾದ ಸಿದ್ದು, ಎಸ್ ವಿ ಗೌಡರ,ಎಮ್ ಎಸ್ ಲಮಾಣಿ,ಇಳಕಲ್ ನಗರ ಠಾಣೆ ಪೇದೆ ವಿ ಹೆಚ್ ತುಂಬದ ಎಲ್ಲರೂ ಮನಬಂದಂತೆ ಹಲ್ಲೆ ಮಾಡಿದ್ದಾರೆ ಇದೇ ಕಾರಣಕ್ಕೆ ಚಿದಾನಂದ ಸಾವನ್ನಪ್ಪಿದ್ದಾನೆ, ನಂತರ ಹೃದಯಾಘಾತ ಅಂತ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಇಳಕಲ್ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
You may like
ಕಾಂಗ್ರೆಸ್ ಟಿಕೆಟ್ ಹಂಚಿಕೆ ಅಂತಿಮ ಹಂತದಲ್ಲಿದೆ : ಸತೀಶ್ ಜಾರಕಿಹೊಳಿ
*ಬಿಜೆಪಿಯರು ದ್ವೇಷ ಪ್ರೇಮಿಗಳು ಎಂದಿದ್ದೇಕೆ? ರಾಮಲಿಂಗಾರೆಡ್ಡಿ
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ: ಇಬ್ಬರು ಶಾಸಕರಿಗೆ ನೋಟಿಸ್ ಸಾಧ್ಯತೆ?
ರಾಜ್ಯಸಭೆ ಚುನಾವಣೆ | ವಿಧಾನಸಭೆಯಲ್ಲಿ ಶಾಸಕರಿಂದ ಭರ್ಜರಿ ವೋಟಿಂಗ್
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!