ರೈಸಿಂಗ್ ಕನ್ನಡ :
ಮಂಡ್ಯ :
ಶ್ರಾವಣ ಶನಿವಾರ ರಾಜ್ಯದ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆನಡೆಯುವ ಸುದಿನ. ಆದ್ರೆ, ಕೊರೊನ ಹಿನ್ನಲೆಯಲ್ಲಿ ಕೆಲ ದೇವಾಲಯಗಳನ್ನ ತೆಗೆದಿಲ್ಲ. ಮೇಲುಕೋಟೆಯಲ್ಲೂ ದೇವಾಲಯಕ್ಕೆ ಭಕ್ತರ ಪ್ರವೇಶವನ್ನ ನಿಷೇಧಿಸಲಾಗಿದೆ. ಆದ್ರೆ, ಪೂರ್ವ ಮಾಹಿತಿ ಇಲ್ಲದ ಕಾರಣ, ರಾಜ್ಯದ ಹಲವು ಭಾಗಗಳಿಂದ ಬಂದ ಭಕ್ತರು ದೇವರ ದರ್ಶನವಿಲ್ಲದೆ, ಬೇಸರದಿಂದ ಹಿಂದಿರುಗುತ್ತಿದ್ದಾರೆ. ಮೇಲುಕೋಟೆ ಹೊರಭಾಗದಲ್ಲೇ ವಾಹನಗಳನ್ನ ತಡೆಯುತ್ತಿದ್ದ ಪೊಲೀಸರು, ಭಕ್ತರನ್ನು ವಾಪಸ್ಸು ಕಳಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳು ಮೊದಲೇ ಆದೇಶವನ್ನ ಹೊರಡಿಸಿದ್ದರು ಕೂಡ, ಇಓ ನಂಜೇಗೌಡ ಅನ್ನುವವರು ಅದನ್ನ ಪ್ರಚಾರ ಮಾಡಿಲ್ಲ. ಬದಲಾಗಿ ದೇವಾಲಯ ಮುಂಭಾಗ ಸೂಚನಾ ಫಲಕ ಅಂಟಿಸಿ ಅಧಿಕಾರಿ ನಾಪತ್ತೆಯಾಗಿದ್ದಾರೆ. ಪರಿಣಾಮ ದೂರದ ಊರುಗಳಿಂದ ಬಂದಿದ್ದ ನೂರಾರು ಭಕ್ತರು, ದೇವರ ದರ್ಶನವಿಲ್ಲದೆ ಆಡಳಿತ ಮಂಡಳಿಗೆ ಹಿಡಿಶಾಪ ಹಾಕಿ ಹಿನ್ನಡೆದಿದ್ದಾರೆ.
ಶ್ರಾವಣ ಶನಿವಾರದಂದು ಭಕ್ತರ ಪ್ರವೇಶ ನಿರ್ಬಂಧಿಸಿ ಡಿಸಿ ಆದೇಶವಿದ್ರು, ಅಧಿಕಾರಿ ಮಾತ್ರ ಮಾಹಿತಿ ನೀಡಿರಲಿಲ್ಲ. ಸರಿಯಾದ ಮಾಹಿತಿ ಇಲ್ಲದೆ ಎಂದಿನಂತೆ ಮೇಲುಕೋಟೆಗೆ, ರಾಜ್ಯದ ವಿವಿಧೆಡೆಗಳಿಂದ ಭಕ್ತರು ಬಂದಿದ್ದರು.
ಆದ್ರೆ, ಇಓ ಮಾಧ್ಯಮಗಳಿಗೂ ನಿರ್ಬಂಧದ ಸುದ್ದಿ ನೀಡದೆ ಇರೋದು ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ ಅನ್ನೋ ಆರೋಪ ಕೇಳಿಬಂದಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?