Featured
ಮರಣ ಭಯ ಸದಾ ಇರಲಿ

ಸಂತ ಏಕನಾಥರು ಒಮ್ಮೆ ಸದಾ ಸಜ್ಜನರನ್ನು ಪೀಡಿಸುವ ಒಬ್ಬ ದುಷ್ಟ ವ್ಯಕ್ತಿಯ ಮನೆಗೆ ಬಂದು, ” ನಿನ್ನೆ ನನಗೆ ಒಂದು ಕನಸು ಬಿತ್ತು. ಅದನ್ನು ನಿನಗೆ ಹೇಳಿ ಹೋಗೋಣ” ಅಂತ ಬಂದೆ ಎಂದರು. ಏಕನಾಥರ ಮೇಲೆ ಶ್ರದ್ಧೆಯುಳ್ಳ ಆ ವ್ಯಕ್ತಿ ಅವರ ಪಾದಕ್ಕೆರಗಿ “ನಾಥಮಹರಾಜರೇ! ಹೇಳಿ ಏನು ವಿಷಯ?” ಎಂದು ಕೇಳಲು, ” ನಿನ್ನ ಆಯುಷ್ಯದಲ್ಲಿ ಇನ್ನು ಏಳು ದಿನ ಮಾತ್ರೆ ಉಳಿದಿದೆ. ಇನ್ನು ಒಂದು ವಾರದಲ್ಲಿ ನೀನು ಸಾಯುತ್ತಿ!” ಎಂದರು.
ಇದನ್ನು ಕೇಳುತ್ತಲೇ ಮರಣಭಯದಿಂದ ನಡುಗಿದ ಆ ವ್ಯಕ್ತಿಯು, ನಾಥರ ಪಾದದ ಮೇಲೆ ಬಿದ್ದು ನನ್ನನ್ನು ಹೇಗಾದರೂ ಬದುಕಿಸಿರಿ ಎಂದು ಪ್ರಾರ್ಥಿಸಿದನು. ಆಗ ಏಕನಾಥರು “ನಿನಗಾಗಿ ಇಂದೇ ಜಪವನ್ನು ಪ್ರಾರಂಭಿಸುತ್ತೇನೆ. ಆ ಪುಣ್ಯದಿಂದ ನೀನು ಬದುಕಬಹುದು. ಆದರೆ ಈ ಜಪವನ್ನು ನೀನೂ ಮಾಡುತ್ತಿರಬೇಕೆಂದು ಹೇಳಿ, ‘ಶ್ರೀರಾಮಮಂತ್ರ’ವನ್ನು ಅವನಿಗೆ ಉಪದೇಶಿಸಿ ಮತ್ತೆ ಬರುತ್ತೇನೆಂದು ಹೇಳಿ ಹೊರಟರು.
ಈ ವ್ಯಕ್ತಿ ಸಾವಿನ ಭಯದಿಂದ ಶ್ರೀರಾಮನಾಮ ಹೇಳುತ್ತಾ ಹಸಿವೆ, ನಿದ್ರೆ ಯಾವುದರ ಅರಿವೆ ಇಲ್ಲದೇ ಮರಣಭಯದಿಂದ ಮಂಚದ ಮೇಲೆಯೇ ಬಿದ್ದುಕೊಂಡಿರುತ್ತಿದ್ದ. ಏಳನೆಯ ದಿನ ಸೂರ್ಯೋದಯಕ್ಕೆ ಮೊದಲು ಏಕನಾಥರು ಅವನ ಮನೆಗೆ ಬಂದು “ನನಗೆ ನಿನ್ನೆ ಕನಸಿನಲ್ಲಿ ಆದ ಸೂಚನೆಯಂತೆ ನಿನ್ನೆ ಆಯುಷ್ಯವು ಇನ್ನೂ ಮುಗಿದಿಲ್ಲವೆಂದು ತಿಳಿಯಿತು. ಅದಿರಲಿ; ಈ ಏಳು ದಿನಗಳಲ್ಲಿ ಏನೇನು ಪಾಪ ಚಿಂತನೆ, ಪಾಪಕಾರ್ಯ ಮಾಡಿದೆ ಹೇಳು” ಎನ್ನಲು, ಆ ವ್ಯಕ್ತಿ, “ಮಹಾರಾಜ! ನಾನು ಹಾಸಿಗೆ ಬಿಟ್ಟು ಕೆಳಗೇ ಇಳಿದಿಲ್ಲ! ಮರಣ ಭಯದಿಂದ ನಡುಗುವ ನನಗೆ ಪಾಪದ ಯೋಚನೆ ಬರುವುದಾದರೂ ಹೇಗೆ? ಎಂದನು. ಏಕನಾಥರು ” ಮಗು, ನಿನಗೆ ಇನೂ ತುಂಬಾ ಆಯುಷ್ಯವಿದೆ. ಆದರೆ ಈಗ ಉಂಟಾದ ಭಯ ಮಾತ್ರ ಹೀಗೆ ಇರಲಿ” ಎಂದರಂತೆ.
ಸದಾ ಮಹಾಲಕ್ಷ್ಮಿಯ ಕೃಪೆ ಇರಲಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?