ರೈಸಿಂಗ್ ಕನ್ನಡ : ಮಹಾರಾಷ್ಟ್ರ ಚುನಾವಣಾ ಪ್ರಚಾರದ ವೇಳೆ ಯಡಿಯೂರಪ್ಪ ಕೊಟ್ಟಿರೋ ಯಡವಟ್ ಹೇಳಿಕೆ ಸದ್ಯ ವಿವಾದಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರೋ ಮಾಜಿ ಸಿಎಂ ಕುಮಾರಸ್ವಾಮಿ, ಮಹಾದಾಯಿಗೆ ಅನುಮತಿ ಕೊಡಲಿಲ್ಲ ಅಂತ ರೈತರು ಹೋರಾಟ ಮಾಡ್ತಿದ್ದಾರೆ. ಮೊದಲು ಅ ಜನರ ಕಷ್ಟ ನೋಡಿ. ನಮ್ಮ ಜನರನ್ನ ಮೊದಲು ನೋಡಿ, ಅಮೇಲೆ ಮಹಾರಾಷ್ಟ್ರದವರನ್ನ ಸಿಎಂ ಗಮನಿಸಲಿ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇತ್ತ, ಯಡಿಯೂರಪ್ಪ ಹೇಳಿಕೆಗೆ ಕಳಸಾ ಬಂಡೂರಿ ಹೋರಾಟಗಾರರು ಕೂಡ ಆಕ್ರೋಶ ಹೊರಹಾಕಿದ್ದಾರೆ. ಮೊದಲು ಕೃಷ್ಣಾ ವಿವಾದವನ್ನು ಬಗೆಹರಿಸಿ ಅಧಿಸೂಚನೆ ಹೊರಡಿಸಿ. ಕರ್ನಾಟಕದ ಜನ ವೋಟು ಕೊಟ್ಟಿದ್ದು, ಕರ್ನಾಟಕದ ಜನರ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು. ನಮಗೇ ಈವರೆಗೆ ನೀರು ಕೊಟ್ಟಿಲ್ಲ. ಇನ್ನು ಅಲ್ಲೇನು ಹೋಗಿ ನೀರು ಕೋಡ್ತೀವಿ ಅಂತ ಯಾಕೆ ಹೇಳ್ತೀರಿ ಎಂದು ರೈತರು ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಮಹಾರಾಷ್ಟ್ರದಲ್ಲಿ ನಿಮ್ಮ ಪಕ್ಷದ ಇಮೇಜ್ ಕ್ರಿಯೇಟ್ ಮಾಡೋಕೆ ಈ ರೀತಿಯ ಹೇಳಿಕೆ ಕೊಡಬೇಡಿ. ಅಧಿಕಾರಕ್ಕೆ ಬಂದ ಹದಿನೈದು ದಿನಕ್ಕೆ ಮಹದಾಯಿ ವಿವಾದ ಬಗೆಹರಿಸ್ತೀನಿ ಅಂತಾ ಹೇಳಿದ್ದು, ಬಹುಶಃ ಯಡಿಯೂರಪ್ಪ ಮರೆತಂತೆ ಇದೆ ಎಂದು ನೋವನ್ನ ಹೊರಹಾಕಿದ್ದಾರೆ.
ಅದೇನೇ ಆಗ್ಲಿ, ಸದ್ಯ ಯಡಿಯೂರಪ್ಪ ಅವರ ಹೇಳಿಕೆ ವಿವಾದಕ್ಕೆ ಎಡೆ ಮಾಡಿದೆ. ಇದನ್ನ ಯಡಿಯೂರಪ್ಪ ಹೇಗೆ ಸಮರ್ಥಿಸಿಕೊಳ್ತಾರೆ ಅನ್ನೋದು ಕಾದುನೋಡಬೇಕಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?