Featured
#ಪಾಗಲ್ಪ್ರೇಮಿ : ಲವ್ ಮಾಡಲಿಲ್ಲ ಎಂದು ಬಾಲಕಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ ಪಾಪಿ

ರೈಸಿಂಗ್ ಕನ್ನಡ : ಪ್ರೀತಿಯ ಉನ್ಮಾದಕ್ಕೆ ಮತ್ತೊಂದು ಬಾಲಕಿ ಜೀವನವೇ ಬಲಿಯಾಗಿದೆ. ತನನ್ನ್ನು ಪ್ರೀತಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ಯುವಕನೋರ್ವ ಬಾಲಕಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಬಾಲಕಿಯ ಮನೆಯಲ್ಲೇ, ತಂದೆ ಎದುರಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅಲ್ಲದೆ, ತಾನು ಕೂಡ ಬೆಂಕಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಈ ದಾರುಣ ಘಟನೆ ನಡೆದಿರೋದು ಕೇರಳದ ಕೊಚ್ಚಿಯ ಶಿವಾರು ಕಕ್ಕನಾಡು ಪ್ರಾಂತ್ಯದಲ್ಲಿ. ಘಟನೆಯಲ್ಲಿ ಬಾಲಕಿಯ ತಂದೆಗೂ ಗಂಭೀರ ಗಾಯವಾಗಿದೆ.
17 ವರ್ಷದ ಬಾಲಕ ದೇವಿಕ ಪ್ರೇಮ ಉನ್ಮಾದಕ್ಕೆ ಬಲಿಯಾದ ದುರ್ದೈವಿ ಬಾಲಕಿ. ಅದೇ ಪ್ರಾಂತ್ಯದ ಮಿಥುನ್ ಎನ್ನುವ ಯುವಕ, ಕೆಲವು ದಿನಗಳಿಂದ ಬಾಲಕಿ ದೇವಿಕಾ ಹಿಂದೆ ಬಿದ್ದಿದ್ದ. ಪ್ರೀತಿ, ಪ್ರೇಮದ ಹೆಸರಲ್ಲಿ ಸಾಕಷ್ಟು ಕಿರುಕುಳ ಕೊಡ್ತಿದ್ದ. ಆದ್ರೆ, ಬಾಲಕಿ ದೇವಿಕಾ ಇದಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಯುವಕ ಮಿಥುನ್, ತನಗೆ ಸಿಗದೇ ಇರೋದು ಬೇರೆ ಯಾರಿಗೂ ಸಿಗಬಾರದು ಎಂದು ನಿರ್ಣಯಿಸಿ, ಬೆಂಕಿ ಹಚ್ಚಿದ್ದಾನೆ..
ಘಟನೆ ನಡೆದಿದ್ದು ಹೇಗೆ..?
ಕಳೆದ ಬುಧವಾರ ಅರ್ಧ ರಾತ್ರಿ ಬೈಕ್ನಲ್ಲಿ ಬಾಲಕಿ ಮನೆಗೆ ಬಂದ ಬಂದ ಮಿಥುನ್, ಡೋರ್ ಬೆಲ್ ಮಾಡ್ತಾನೆ. ಈ ವೇಳೆ ಬಾಲಕಿ ದೇವಿಕಾ ತಂದೆ ಮಗಳ ಜೊತೆ ಹೊರಗೆ ಬಂದು ಬಾಗಿಲು ತೆಗೀತಾರೆ. ತಕ್ಷಣ ತನ್ನ ಕೈಯಲ್ಲಿದ್ದ ಪೆಟ್ರೋಲ್ ಅನ್ನ ದೇವಿಕಾ ಮೇಲೆ ಸುರಿದ ಯುವಕ ಮಿಥುನ್, ಬೆಂಕಿ ಹಚ್ತಾನೆ. ಬೆಂಕಿ ನಂದಿಸಲು ಮುಂದಾಗ್ತಾರೆ. ಅಷ್ಟೊತ್ತಿಗಾಗ್ಲೇ ಬಾಲಕಿ ದೇವಿಕಾ ಹಾಗೂ ಯುವಕ ಮಿಥುನ್ಗೂ ಕೂಡ ಬೆಂಕಿ ತಗಲಿರುತ್ತೆ. ತಕ್ಷಣ ಆ್ಯಂಬುಲೆನ್ಸ್ ಬಂದು ಆಸ್ಪತ್ರೆಗೆ ದಾಖಲು ಮಾಡ್ತಾರೆ.
ದುರಾದೃಷ್ಟವಶಾತ್ ಬಾಲಕಿ ದೇವಿಕಾ ಹಾಗೂ ಯುವಕ ಮಿಥುನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಬಾಲಕಿ ತಂದೆ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಅದೇನೇ ಆಗ್ಲಿ, ಪ್ರೇಮದ ಹೆಸರಲ್ಲಿ ಹುಚ್ಚುತನದ ವರ್ತನೆಗಳು ಇನ್ನೂ ಯಾವಾಗ ಕಡಿಮೆ ಆಗುತ್ತವೆಯೋ ಏನೋ..
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?