ರೈಸಿಂಗ್ ಕನ್ನಡ :
ಪ್ರತಿನಿಧಿ : ದುರ್ಗೇಶ್ ಮಂಗಿಹಾಳ, ಯಾದಗಿರಿ :
ಬೆಂಗಳೂರು ಬಳಿಕ, ರಾಜ್ಯದ ಹಲವು ಜಿಲ್ಲೆಗಳಲ್ಲೂ ಲಾಕ್ಡೌನ್ ಮಾತುಗಳು ಹೆಚ್ಚಾಗೇ ಕೇಳಿಬರುತ್ತಿವೆ. ಇದೀಗ ಯಾದಗಿರಿ ಜಿಲ್ಲೆ ಬುಧವಾರ ರಾತ್ರಿಯಿಂದ ಲಾಕ್ಡೌನ್ಗೆ ತೀರ್ಮಾನಿಸಿದೆ. ಬುಧವಾರ ರಾತ್ರಿ 8 ಗಂಟೆಯಿಂದ ಸಂಪೂರ್ಣ ಜಿಲ್ಲೆ ಸ್ತಬ್ಧವಾಗಲಿದೆ.
ಈ ನಿಟ್ಟಿನಲ್ಲಿ ಬುಧವಾರ ಬೆಳಗ್ಗಿನಿಂದಲೇ ಜನ, ಅಗತ್ಯವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ. ಲಾಕ್ಡೌನ್ ಆದ್ರೆ, ಮುಂದಿನ ದಿನಗಳು ಮತ್ತಷ್ಟು ದುಸ್ತರವಾಗಲಿವೆ ಅನ್ನೋ ಸಲುವಾಗಿ, ಜನ ಮಾರುಕಟ್ಟೆಗಳತ್ತ ಮುಗಿಬೀಳುತ್ತಿದ್ದಾರೆ. ಇದೇ ಕಾರಣಕ್ಕಾಗಿ ಯಾದಗಿರಿ ಪಟ್ಟಣದಲ್ಲಿ ವ್ಯಾಪಾರ-ವಹಿವಾಟು ಬಲು ಜೋರಾಗಿ ನಡೆಯುತ್ತಿದೆ.
ಯಾದಗಿರಿ ಪ್ರಮುಖ ರಸ್ತೆಗಳು ಮತ್ತು ಮಾರುಕಟ್ಟೆಗಳು, ಜನ ಜಂಗುಳಿಯಿಂದ ಕೂಡಿವೆ. ವಿವಿಧ ಅಂಗಡಿ ಮುಂದೆ ನಗರದ ಅಕ್ಕಪಕ್ಕದ ಹಳ್ಳಿ ಜನ, ಸರತಿ ಸಾಲು ಗಟ್ಟಿನಿಂತು ವಹಿವಾಟು ನಡೆಸುತ್ತಿದ್ದಾರೆ. ದಿನಸಿ, ಮೊಬೈಲ್, ಕೃಷಿ ಚಟುವಟಿಕೆ ಬೇಕಾದ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯುತ್ತಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?