Featured
ಕೊಪ್ಪಳ ಸಿಟಿ ಇನ್ಸ್ಪೆಕ್ಟರ್ ಸಸ್ಪೆಂಡ್! – ಕರ್ತವ್ಯ ಲೋಪವೇ ಕಾರಣ ಎಂದ ಎಸ್ಪಿ!

ರೈಸಿಂಗ್ ಕನ್ನಡ :
ಕೊಪ್ಪಳ :
ಪ್ರತಿನಿಧಿ : ನಾಗರಾಜ್. ವೈ
ಕರ್ತವ್ಯಲೋಪದ ಆರೋಪದಡಿ ಕೊಪ್ಪಳ ನಗರ ಠಾಣೆಯ ಪಿಐ ಮೌನೇಶ್ವರ ಮಾಲೀಪಾಟೀಲ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅಮಾನತುಗೊಳಿಸಿದ್ದಾರೆ. 2016-17ರಲ್ಲಿ ವಿ3 ಕೇರ್ ಲೈಫ್ ಕೇರ್ ಕಂಪನಿ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿ ಬಳ್ಳಾರಿಯ ಮಧುಸೂದನ್ ವೀರಾಪುರ ಎಂಬಾತನನ್ನು ಬಂಧಿಸಿ ಕೋರ್ಟ್ಗೆ ಹಾಜರುಪಡಿಸುವಂತೆ ಮೇಲಾಧಿಕಾರಿಗಳು ಆದೇಶಿಸಿದ್ದರೂ, ಆರೋಪಿಯನ್ನು ಬಂಧಿಸಿರಲಿಲ್ವಂತೆ.

ಜೊತೆಗೆ ಆರೋಪಿಗೆ ನಿರೀಕ್ಷಣಾ ಜಾಮೀನು ದೊರೆತ ಮಾಹಿತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ವಂತೆ. ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕರು ಆರೋಪಿಗೆ ವಾರಂಟ್ ಜಾರಿಗೊಳಿಸಿ ಬಂಧಿಸುವಂತೆ ಸೂಚಿಸಿದ್ದರೂ ಉದಾಸೀನ ಮಾಡಿ ಕರ್ತವ್ಯ ಲೋಪ ಎಸಗಿದ್ದರು.
ಈ ಕಾರಣಕ್ಕೆ ನಗರ ಠಾಣೆ ಪಿಐ ಮೌನೇಶ್ವರ ಮಾಲೀಪಾಟೀಲ್ರನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ಜಿ.ಸಂಗೀತಾ ತಿಳಿಸಿದ್ದಾರೆ. ಆದ್ರೆ ಎಸ್ಪಿ ಆದೇಶದಲ್ಲಿ ರಾಜಕಾರಣ ಇದ್ದು ಯಾವುದೋ ದುರದ್ದೇದಿಂದ ಸಣ್ಣ ನೆಪವೊಡ್ಡಿ ದಕ್ಷ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ ಎಂದು ಕೆಲ ಸಂಘಟನೆಗಳು ಪ್ರತಿಭಟನೆ ನಿರ್ಧರಿಸಿವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?