ರೈಸಿಂಗ್ ಕನ್ನಡ :
ಕೊಪ್ಪಳ :
ಜಿಲ್ಲಾಧಿಕಾರಿ ವರ್ಗಾವಣೆ ವಿಚಾರವಾಗಿ ಮಾಜಿ ಮಂತ್ರಿ ಹಾಲಿ ಶಾಸಕರ ನಡುವೆ ವಾಕ್ಸಮರ ಶುರುವಾಗಿದೆ.
ಮಾಜಿ ಸಚಿವ ಶಿವರಾಜ್ ತಂಗಡಗಿ ಮಾಡಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ವರ್ಗಾವಣೆಗೆ ಶಾಸಕ ಕಾರಣ ಎಂಬ ಆರೋಪಕ್ಕೆ ಶಾಸಕ ಬಸವರಾಜ್ ದಢೇಸೂಗೂರು ತಿರುಗೇಟು ನೀಡಿದ್ದಾರೆ.
ಈ ಹಿಂದೆ ಶಿವರಾಜ್ ತಂಗಡಗಿ ಮಂತ್ರಿ ಇದ್ದಾಗ 30 ಗುಂಟೆ ಜಾಗವನ್ನ ಫೋರ್ಜರಿ ಸಹಿ ಮಾಡಿ ಕಬಳಿಸಿದ್ದಾರೆ. ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದ್ದ ಖಡಕ್ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿಯನ್ನ ರಾತ್ರೋರಾತ್ರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಮಾನ ಕಾಪಾಡುವಂತೆ ಅಂಗಲಾಚಿದ್ರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಡಿಸಿಯನ್ನ ವರ್ಗಾವಣೆ ಮಾಡಿಸಿದ್ದು ನೀವು ಎಂದಿದ್ದಾರೆ.
ಇನ್ನು ನೀವು ಕ್ಷೇತ್ರಕ್ಕೆ ಬರಬೇಕಾದಾಗ ನಿನ್ನ ಕಾಲಲ್ಲಿ ಯಾವ ಚಪ್ಪಲಿ ಇದ್ದವು ಎನ್ನೋದನ್ನ ನೆನಪಿನಲ್ಲಿ ಇಟ್ಕೋ ಬೇಕು, ಬಾಯಿಯಲ್ಲಿ ಬಂಗಾರದ ಚಮಚ ಇಟ್ಕೊಂಡು ಬಂದಿಲ್ಲ, ಟಾಟಾ ಬಿರ್ಲಾ ಆಗಿ ಬಂದಿಲ್ಲ, ನೀನು ನೂರಾರು ಕೋಟಿ ಆಸ್ತಿ ಮಾಡಿದ್ದೀಯಲ್ಲ ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದ್ರು.
ಅಲ್ಲದೇ ತಂಗಡಗಿ ಮಂತ್ರಿ ಇದ್ದಾಗ ಎಂಐ ನಲ್ಲಿ 38 ಕೋಟೊ ರೂಪಾಯಿ ಲೂಟಿ ಮಾಡಿದ್ದಾರೆ. ತಂಗಡಗಿ ಅಧಿಕಾರ ಅವಧಿಯಲ್ಲಿ ಅಧಿಕಾರಿಗಳ ಮೇಲೆ ದರ್ಬಾರ್ ಮಾಡಿದ್ದಾರೆ, ಗೂಂಡಾಗಿರಿ ಮಾಡಿದ್ದಾರೆ ಎಂದು ದಢೇಸೂಗುರು ಟಾಂಗ್ ನೀಡಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?