ಕೋಲಾರ : ಲೋಕಸಭೆ ಚುಣಾವಣೆ ಕಾವು ಹೆಚ್ಚುತ್ತಿದ್ದು ರಾಷ್ಟ್ರೀಯ ಪಕ್ಷಗಳ ಟಿಕೆಟ್ಗಾಗಿ ಪೈಪೋಟಿ ಹೆಚ್ಚುತ್ತಲೇ ಇದೆ ಈ ಚುಣಾವಣೆಯಲ್ಲಿ ಕೋಲಾರ ಲೋಕಸಭಾ ಟಿಕೆಟ್ ಎರಡೂ ಪಕ್ಷಗಳಲ್ಲಿ ಕಗ್ಗಂಟಾಗಿದ್ದು ಕಾಂಗ್ರೆಸ್ ನಲ್ಲಿ ಸಚಿವ ಕೆಎಚ್ ಮುನಿಯಪ್ಪ ಹೆಸರು ಮುಂಚೂಣಿ ಯಲ್ಲಿದ್ದರೂ ಟಿಕೆಟ್ ಆಕಾಂಕ್ಷಿಗಳಿಗೆ ಕೊರತೆ ಇಲ್ಲ, ವೃತ್ತಿಯಲ್ಲಿ ವೈದ್ಯರಾಗಿರುವ ಡಾ ಲೋಹಿತ್ ಮುನಿಯಪ್ಪ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು ಬಲಗೈ ಸಮುದಾಯದ ಸ್ಥಳೀಯನಿಗೆ ಅವಕಾಶ ನೀಡಿ ಎಂದು ಆಗ್ರಹಿಸಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರ ಎಸ್ ಸಿ ಸಂಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಕೆ ಎಚ್ ಮುನಿಯಪ್ಪ ಸಚಿವರಾಗಿದ್ದು ಅವರ ಮಗಳು ರೂಪಕಲಾ ಶಶಿಧರ್ ರವರಿಗೂ ನಿಗಮ ಮಂಡಳಿ ನೀಡಿದ್ದಾರೆ , ಬಲಗೈ ಸಮುದಾಯದವರೇ ಹೆಚ್ಚು ಇರುವ ಕ್ಷೇತ್ರದಲ್ಲಿ ನಮ್ಮಂತ ಹೊಸಬರಿಗೆ ಅವಕಾಶ ಮಾಡಿಕೊಡಬೇಕು , ನಮ್ಮ ತಂದೆ ಮುನಿಯಪ್ಪ ಕಾಲದಿಂದಲೂ ಜನ ಪರ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ , ಸಾಮಾನ್ಯ ಜನರ ಕಷ್ಟಗಳಿಗೆ ಕೈಲಾದ ಮಟ್ಟಿಗೆ ಸ್ಪಂದಿಸಿದ್ದೇವೆ , ಜೊತೆಗೆ ಕೋಲಾರ ನಗರದ ನಿವಾಸಿಯಾಗಿದ್ದು ಸ್ಥಳೀಯರ ನಾಡಿ ಮಿಡಿತ ನನಗೆ ತಿಳಿದಿದೆ , ಇನ್ನು ಕರೋನ ಸಂದರ್ಭದಲ್ಲಿ ಸಾದ್ಯವಾದಷ್ಟು ಜನರೊಂದಿಗೆ ನಾನು ನಿಂತಿದ್ದೇನೆ , ಕಾಂಗ್ರೆಸ್ ಪಕ್ಷದಲ್ಲಿ ಸಹ ಹಲವಾರು ವರ್ಷಗಳಿಂದ ದುಡಿದಿದ್ದು ಪಕ್ಷ ಸಂಘಟನೆಗೆ ಸಾಕಷ್ಟು ಕೆಲಸ ಮಾಡಿದ್ದೇನೆ , ನಮ್ಮ ರೇಣುಕಾ ಎಲ್ಲಮ್ಮ ಬಣವನ್ನೂ ಸಹ ಗುರುತಿಸಿ ನಮಗೆ ಟಿಕೆಟ್ ನೀಡಿದರೆ ಖಂಡಿತ ಗೆದ್ದು ಬರುತ್ತೇವೆ .
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ರವರು ಸಿ ಎಮ್ ಮುನಿಯಪ್ಪ ರವರಿಗೆ ಟಿಕೆಟ್ ಕೇಳುತ್ತಿದ್ದಾರೆ , ಕಳೆದ ಬಾರಿ ಸಹ ಅವರು ಬಲಗೈ ಸಮುದಾಯದ ಎಸ್ ಮುನಿಸ್ವಾಮಿ ಪರ ಕೆಲಸ ಮಾಡಿದ್ದಾರೆ , ಈ ಬಾರಿ ಅವರ ತಮ್ಮನಂತಿರುವ ನನ್ನ ಪರ ನಿಲ್ಲಲಿ ಆ ಮೂಲಕ ನಮ್ಮ ರೇಣುಕಾ ಎಲ್ಲಮ್ಮ ಬಳಗಕ್ಕೂ ಒಂದು ಅವಕಾಶ ಒದಗಿಸಿ ಕೊಡಲಿ , ನಾನು ವೈದ್ಯನಾಗಿ ಜನರಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದೇನೆ ಹೈಕಮಾಂಡ್ ನಮಗೂ ಒಂದು ಅವಕಾಶ ಕಲ್ಪಿಸಲಿ , ಸ್ವಾತಂತ್ರ್ಯ ಬಂಗಾಗಿನಿಂದಲೂ ನಮ್ಮ ಸಮುದಾಯ ಎಲ್ಲಮ್ಮ ಬಳಗಕ್ಕೆ ಮನ್ನಣೆ ದೊರಕಿಲ್ಲ ಈ ಬಾರಿ ಯಾದರೂ ನಮ್ಮನ್ನು ಗುರುತಿಸಿ ನಮಗೆ ಒಂದು ಅವಕಾಶ ಕಲ್ಪಿಸಿಕೊಡಬೇಕು ವಿನಂತಿಸುತ್ತಿದ್ದೇನೆ ಎಂದು ಡಾ ಲೋಹಿತ್ ಮುನಿಯಪ್ಪ ಮನವಿ ಮಾಡಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?