ಟಾಪ್ ನ್ಯೂಸ್
ಕೋಲಾರದ ಅರಾಬಿಕೊತ್ತನೂರು ಗ್ರಾಮದಲ್ಲಿ ಸಂಕ್ರಾಂತಿ ಆಚರಿಸಲ್ಲ ಯಾಕೆ ಗೊತ್ತಾ.?

ರೈಸಿಂಗ್ ಕನ್ನಡ
ಕೋಲಾರ : ಕೊರೊನಾ ನಡುವೆಯು ರಾಜ್ಯಾದ್ಯಂತ ಸಂಕ್ರಾಂತಿ ಹಬ್ಬದ ಸಡಗರ ಕಳೆಗಟ್ಟಿದೆ. ಆದರೆ ಕೋಲಾರ ತಾಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ತಲ ತಲಾಂತರಗಳಿಂದ ಸಂಕ್ರಾಂತಿ ಹಬ್ಬ ಬಂದಿತೆಂದರೆ ಗ್ರಾಮದಲ್ಲಿ ಸೂತಕದ ಛಾಯೆ ಮೂಡುತ್ತದೆ. ಈ ಗ್ರಾಮದಲ್ಲಿ ಎರಡು ತಲೆಮಾರಿನ ಹಿಂದೆ, ಸಂಕ್ರಾಂತಿ ಹಬ್ಬದ ಆಚರಣೆ ಸಂದರ್ಭದಲ್ಲಿ ರಾಸುಗಳಿಗೆ ಕಿಚ್ಚಾಯಿಸುವ ವೇಳೆ ಹಸುಗಳು, ಎತ್ತುಗಳಿಗೆ ಗಾಯಗಳಾಗಿ ಗ್ರಾಮದಿಂದಲೇ ಓಡಿಹೊಗಿವೆ. ಕೆಲ ಹಸುಗಳಿಗೆ ಸಾಂಕ್ರಾಮಿಕ ಖಾಯಿಲೆಗಳು ಕಂಡುಬಂದು ಕೆಲ ಹಸುಗಳು ಸಾವನ್ನಪ್ಪಿದ್ದವು.
ಹೀಗಾಗಿ ಭಯಭೀತರಾಗಿದ್ದ ಗ್ರಾಮಸ್ಥರು ಅರಾಭಿಕೊತ್ತನೂರು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಆಚರಣೆಯನ್ನೆ ಮರೆತಿದ್ದಾರೆ. ಸಂಕ್ರಾಂತಿ ಹಬ್ಬವೆಂದರೆ ಗ್ರಾಮೀಣ ಭಾಗದಲ್ಲೆ ಸಂಭ್ರಮ ಸಡಗರದಿಂದ ಆಚರಿಸುವುದನ್ನ ಕಾಣಬಹುದು. ಆದರೆ ಈ ಗ್ರಾಮದಲ್ಲಿ ಹಬ್ಬದ ವಾತಾವರಣವೇ ಕಾಣಸಿಗುವುದಿಲ್ಲ.
ರಾಸುಗಳಿಗೆ ಪೂಜೆ ಮಾಡದಿರುವುದು, ತೋರಣ ಕಟ್ಟದಿರುವುದು, ರಂಗೋಲಿ ಹಾಕದಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಕುರಿತು ಮಾತನಾಡಿರುವ ಗ್ರಾಮದ ಹಿರಿಯರಾದ ನಂಜುಂಡೇ ಗೌಡ ಅವರು ಹಿರಿಯರ ಆಚರಣೆಯಂತೆ ನಾವು ಸಂಕ್ರಾಂತಿ ಹಬ್ಬವನ್ನ ಆಚರಣೆ ಮಾಡುತ್ತಿಲ್ಲ. ಆದರೆ ಬಸವ ಜಯಂತಿಯ ದಿನ ಗೋಪೂಜೆಯನ್ನ ಮಾಡುವುದಾಗಿ ಪ್ರತಿಕ್ರಿಯೆ ನೀಡಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?