Featured
ರಾಯಚೂರಿನಲ್ಲಿ ಕಾಡ್ಗಿಚಿನಂತೆ ಹರಡುತ್ತಿದೆ ಕಿಲ್ಲರ್ ಕೊರೊನಾ : 500ರ ಗಡಿ ತಲುಪಿದ ಸೋಂಕಿತರ ಸಂಖ್ಯೆ

ರೈಸಿಂಗ್ ಕನ್ನಡ:
ರಾಯಚೂರು :
ಕಳೆದ ಒಂದು ವಾರದಿಂದ ಯಾವುದೇ ಕೊರೊನಾ ರೋಗದ ಗುಣಲಕ್ಷಣ ಇಲ್ಲದಿದ್ದರೂ ರಾಯಚೂರಿನಲ್ಲಿ ಹೆಮ್ಮಾರಿ ಸೋಂಕು ಕಾಡ್ಗಿಚ್ಚನಂತೆ ಹರಡುತ್ತಿರುವುದು ಜಿಲ್ಲೆಯ ಜನತೆಯನ್ನ ಆತಂಕಕ್ಕೀಡುಮಾಡಿದೆ.
ಹೌದು ರಾಯಚೂರು ಜಿಲ್ಲೆಯಲ್ಲಿ ಕೆಲವು ತಿಂಗಳ ಹಿಮದೆ ಯಾವುದೇ ಕೊರೋನಾ ಸೋಂಕಿತರು ಇರಲಿಲ್ಲ ಆದರೆ ಲಾಕ್ಡೌನ್ ಸಡಲಿಕೆ ನಂತರ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರದಿಂದ ಬಂದ ವಲಸೆ ಕಾರ್ಮಿಕರಿಂದ ಸೋಂಕಿತರು ಹೆಚ್ಚಾಗಿದ್ದರು. ನಂತರದಲ್ಲಿ ಇಳಿಮುಖ ಕಂಡಿತ್ತು. ಆದರೆ ಕಳೆದ ಒಂದು ವಾರದಿಂದ ಯಾವುದೇ ಕೊರೋನಾ ಗುಣಲಕ್ಷಣ ಇಲ್ಲದಿದ್ದರೂ ಸೋಂಕು ಹರಡುತ್ತಿದೆ.
ಬುಧವಾರ ಕೂಡ 12 ಜನರಿಗೆ ಸೋಂಕು ಇರುವುದು ದೃಢವಾಗಿದೆ. ರಾಯಚೂರು ತಾಲ್ಲೂಕಿನಲ್ಲಿ 4 ಪ್ರಕರಣಗಳು ದೃಢವಾಗಿದ್ದು, ಸಿಂಧನೂರಿನಲ್ಲಿ 5 ಮತ್ತು ದೇವದುರ್ಗದಲ್ಲಿ 3 ಪ್ರಕರಣಗಳು ಪತ್ತೆಯಾಗಿವ ಮೂಲಕ ಸೋಂಕಿತರ ಸಂಖ್ಯೆ 500 ಕ್ಕೆ ಏರಿಕೆಯಾದಂತಾಗಿದೆ.
ಜಿಲ್ಲೆಯಲ್ಲಿ ತಾಲ್ಲೂಕುವಾರು ನೋಡಿದಾಗ ರಾಯಚೂರು -106, ದೇವದುರ್ಗ – 338, ಲಿಂಗಸುಗೂರು – 31, ಮಾನ್ವಿ – 16, ಸಿಂಧನೂರು – 09 ಪ್ರಕರಣಗಳು ದೃಢವಾಗಿದೆ. ಇದರಿಂದ ಜಿಲ್ಲೆಯ ಒಳಗಿನ ಸಾರ್ವಜನಿಕರಲ್ಲಿ ಯಾವುದೇ ಲಕ್ಷಣಗಳಿಲ್ಲದೇ ಸೋಂಕು ಹರಡುತ್ತಿರುವುದರಿಂದ ಜನ ಭಯಭೀತರಾಗಿದ್ದಾರೆ.
You may like
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
3 ತಿಂಗಳ ಬಳಿಕ ರಾಜ್ಯದಲ್ಲಿ ಕೊರೋನಾ ಭಾರೀ ಏರಿಕೆ : ಇದೇನಾ 3ನೇ ಅಲೆ.?