Featured
ಗನ್ ಹಿಡಿದು ಕೋಟೆಯ ರಾಜನಾದ ವಿಕ್ರಾಂತ್ ರೋಣ- ಕಿಚ್ಚನ ಖದರ್ಗೆ ಅಭಿಮಾನಿಗಳು ಫಿದಾ

ರೈಸಿಂಗ್ ಕನ್ನಡ:
ಸಿನೆಮಾ ಡೆಸ್ಕ್:
ಫ್ಯಾಂಟಮ್ ಕನ್ನಡ ಸಿನಿಮಾ ಇಂಡಷ್ಟ್ರೀಯ ಬಹುನಿರಿಕ್ಷೀತ ಚಿತ್ರ. ಡಿಫರೆಂಟ್ ಟೈಟಲ್ನಿಂದಲೇ ಗಮನ ಸೆಳೆಯುತ್ತಿರುವ ಚಿತ್ರಕ್ಕೆ ಸುದೀಪ್ ನಾಯಕ ಅನ್ನುವುದು ಡಬಲ್ ಬೋನಸ್. ಕೊರೊನಾದಂತಹ ಕಷ್ಟದ ಸಮಯದಲ್ಲೂ ಫ್ಯಾಂಟಮ್ ಕೆಲಸಗಳು ನಿಂತಿಲ್ಲ. ಅಭಿಮಾನಿಗಳು ಕೂಡ ಕಿಚ್ಚ ಸುದೀಪ್ ಖದರ್ ನೋಡಲು ಕುತೂಹಲದಿಂದ ಕಾಯ್ತಿದ್ದಾರೆ.
ಆರಂಭದಿಂದಲೂ ಅಭಿಮಾನಿಗಳಿಗೆ ಸಣ್ಣ ಸಣ್ಣ ವಿಡಿಯೋಗಳ ಮೂಲಕ ಕುತುಹಲ ಹುಟ್ಟಸಿದ್ದ ಫ್ಯಾಂಟಮ್ ತಂಡ ಈಗ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ನಿರ್ದೇಶಕ ಅನೂಪ್ ಭಂಡಾರಿ ಟ್ವಿಟರ್ನಲ್ಲಿ ವಿಕ್ರಾಂತ್ ರೋಣನ ದರ್ಶನ ಮಾಡಿದ್ದಾರೆ. ಸುದೀಪ್ ಖಡಕ್ ಲುಕ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.
Putting on makeup today was an awesome feel. Felt I was in an elaborated holiday away frm my passion. A passion called cinema.
So here iam…..
being,,,,,,, VIKRANTH RONA ,,,again.#PhantomBegins pic.twitter.com/eoxNqpP3sn— Kichcha Sudeepa (@KicchaSudeep) July 19, 2020
ವಿಕ್ರಾಂತ್ ರೋಣಾ ಪಾತ್ರದ ಬಗ್ಗೆಯೂ ನಿರ್ದೇಶಕ ಅನೂಪ್ ಭಂಡಾರಿ ಕಿರು ಪರಿಚಯ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿಯೇ ಒಂದು ವಿಡಿಯೋ ಹಂಚಿಕೊಂಡಿಕೊಂಡಿರುವ ಅವರು, ‘ಫ್ಯಾಂಟಮ್ ಚಿತ್ರದ ಮುಖ್ಯ ಪಾತ್ರ ವಿಕ್ರಾಂತ್ ರೋಣಾ. ಆ ಹೆಸರಿನಲ್ಲಿ ಎಷ್ಟು ಪವರ್ ಇದೆಯೋ ಆ ಪಾತ್ರ ಕೂಡ ಅಷ್ಟೇ ಪವರ್ಫುಲ್. ಅವನು ಏನ್ ಮಾಡ್ತಾನೆ, ಯಾಕೆ ಮಾಡ್ತಾನೆ, ಹೇಗೆ ಮಾಡ್ತಾನೆ ಅನ್ನೋದು ಯಾರಿಗೂ ಅರ್ಥ ಆಗೋದೇ ಇಲ್ಲ. ಆದರೆ ಅವನು ಏನೇ ಮಾಡಿದರೂ ಅದಕ್ಕೊಂದು ಕಾರಣ ಇರುತ್ತೆ’ ಎಂದಿದ್ದಾರೆ.
And #VikranthRona is back on duty! @KicchaSudeep sir’s first shot today backed by #WilliamDavid’s cinematography, #ShivaKumar’s amazing artwork, @AJANEESHB ‘s BGM & producer @JackManjunath sir’s passion. Hope you all liked it! #PhantomBegins https://t.co/7UFZKdkXAt— Anup Bhandari (@anupsbhandari) July 19, 2020
ಫ್ಯಾಂಟಮ್ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಕಾಡಿನ ಸೆಟ್ ಹಾಕಿ ಶೂಟಿಂಗ್ ಮಾಡಲಾಗುತ್ತಿದೆ. ಕೊರೊನಾ ವೈರಸ್ ಹಾವಳಿ ಹೆಚ್ಚಿರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ನಡೆಸಲಾಗುತ್ತಿದೆ. ಜಾಕ್ ಮಂಜು ಫ್ಯಾಂಟಮ್ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
The ‘First’ look poster of @kicchasudeep sir as Vikranth Rona will be unveiled tomorrow (Aug10) at 10am. #Phantom #VikranthRonaFirstLook pic.twitter.com/la0f0NOWB6— Anup Bhandari (@anupsbhandari) August 9, 2020
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?