ಮುಂಬೈ : ಕೆಜಿಎಫ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ಗಲಿ ಗಲಿ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಮೌನಿ ರಾಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಷ್ಟಕ್ಕೂ ಏನಾಯ್ತು ಅಂದ್ರೆ, ಮುಂಬೈನಲ್ಲಿ ಮೆಟ್ರೋ ಕಾಮಗಾರಿ ನಡೀತಿದೆ. ಈ ವೇಳೆ, ತನ್ನ ಕಾರನ್ನ ರಸ್ತೆಯಲ್ಲಿ ನಿಲ್ಲಿಸಿದ್ದಾರೆ.. ನೋಡ ನೋಡ್ತಿದ್ದಂತೆ, 11 ಅಂತಸ್ಥು ಮೇಲಿನ ಬಂಡೆಯೊಂದು ಕಾರಿನ ಮೇಲೆ ಬಿದ್ದಿದೆ.
ಕಾರಿನಲ್ಲೇ ಇದ್ದ ಮೌನಿ ರಾಯ್ಗೆ ಶಾಕ್ ಆಗಿದೆ. ಬಂಡೆ ಬಿದ್ದ ಕಾರಣ, ಕಾರಿನ ಗಾಜು ಪುಡಿ ಪುಡಿಯಾಗಿದೆ. ಅದೃಷ್ಟವಶಾತ್ ಯಾವುದೇ ಗಾಯ, ಪ್ರಾಣ ಹಾನಿಯಾಗಿಲ್ಲ. ತನ್ನ ಕಾರಿನ ಮೇಲೆ ಬಿದ್ದ ಬಂಡೆಯ ದೃಶ್ಯವನ್ನ ಮೌನಿ ರಾಯ್ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ರೀತಿಯಾಗಿ ಯಾರ ಮೇಲಾದ್ರೂ ಬಂಡೆ ಬಿದ್ದಿದ್ರೆ ಗತಿ ಏನು..? ಈ ಕುರಿತು ಏನಾದ್ರೂ ಸಜೆಸ್ಟ್ ಮಾಡಿ ಎಂದು ಗಲಿ ಗಲಿ ಹುಡುಗಿ ಮನವಿ ಮಾಡಿದ್ದಾರೆ.
ಕಾರಿನ ಮೇಲೆ ಅಲ್ಲದೆ, ವ್ಯಕ್ತಿ ಮೇಲೆ ಬಿದ್ದಿದ್ರೆ, ಪ್ರಾಣ ಹೋಗ್ತಿತ್ತು ಎಂದು ಆತಂಕ ವ್ಯಕ್ತಪಡಸಿದ್ದಾರೆ. ಮುಬೈ ಮೆಟ್ರೋ ಕಾಮಗಾರಿ ಎಷ್ಟೊಂದು ಬೇಜಾವಾಬ್ದಾರಿಯಾಗಿ ನಡೀತಿದೆ ಎನ್ನೋದಕ್ಕೆ ಇದೇ ಸಾಕ್ಷಿ ಎಂದು ಮೆಟ್ರೋ ನಿಗಮದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?