ಬೆಂಗಳೂರು :
ಘಟನೆ 01 : ಮಹಾರಾಷ್ಟ್ರ ಕೊಲ್ಲಾಪುರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ
ಘಟನೆ 02 : ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭಗ್ನ
ಘಟನೆ 03 : ಮಹಾರಾಷ್ಟ್ರದಲ್ಲಿ ಕನ್ನಡಿಗರ ಅಂಗಡಿಗಳಿಗೆ ಕಲ್ಲು
ಘಟನೆ 04 : ಮಹಾರಾಷ್ಟ್ರದಲ್ಲಿ ಕನ್ನಡಿಗರ ವಾಹನಗಳು ಜಖಂ
ಘಟನೆ 05 : ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ MES ಪುಂಡಾಟ
ಹೀಗೆ ಒಂದೇ, ಎರಡನೇ.. ಕನ್ನಡಿಗರ ಮೇಲೆ ಕರುನಾಡಿನಲ್ಲೇ ದೌರ್ಜನ್ಯ ನಡೀತಿದ್ರು ಸುಮ್ಮನಿರಬೇಕಾದ ದುಸ್ಥಿತಿ. ಬಹುಶಃ ಈ ರೀತಿಯ ಹೀನಾಯ ಸ್ಥಿತಿ ಕರ್ನಾಟಕದಲ್ಲಿ ಮಾತ್ರ ಸಾಧ್ಯ ಅನ್ಸುತ್ತೆ. ಮುಂದೊಂದು ದಿನ ಬೆಂಗಳೂರಿಗೆ ಬಂದು, ವಿಧಾನಸೌಧದ ಮೇಲೆ ಕಲ್ಲು ಹಾಕಿದ್ರೂ, ರಾಜಕಾರಣಿಗಳು ಸುಮ್ಮನೆ ಇರ್ತಾರೇನೋ ಅನ್ಸುತ್ತೆ. ಅಷ್ಟರ ಮಟ್ಟಿಗೆ ಕರ್ನಾಟಕದಲ್ಲಿರೋ ಸರ್ಕಾರ, ರಾಜಕಾರಣಿಗಳು ದಿವ್ಯ ಮೌನವನ್ನ ವಹಿಸಿದ್ದಾರೆ. ಕೆಲವು ಮಹಾನ್ ನಾಯಕರಂತೂ ರಾಷ್ಟ್ರೀಯತೆ ಬಗ್ಗೆ ಪಾಠ ಮಾಡ್ತಾರೆ.. ಇವರದ್ದು ಒಂದು ಬಾಳಾ ಅಂತ ಜನ ಛೀ.. ಥೂ.. ಅಂತ ಉಗಿಯುವ ಸ್ಥಿತಿ ಬಂದಿದೆ..
ಆದ್ರೆ, ಇಷ್ಟೆಲ್ಲಾ ಅದರೂ ಮೌನಂ ಸಮ್ಮತಿ ಲಕ್ಷಣಂ ಎನ್ನುವಂತೆ ಘನ ಸಿಎಂ ಬೊಮ್ಮಾಯಿ, ಗೃಹ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸೇರಿದಂತೆ ಎಲ್ಲರದ್ದೂ ಒಂದೇ ಉತ್ತರ ಕ್ರಮ ಕೈಗೊಳ್ತೇವೆ ಎಂದು.
ರಾಜ್ಯದಲ್ಲಿ ಬಿಜೆಪಿ ಪಕ್ಷ ಇರೋದ್ರಿಂದ, ಎಲ್ಲರಿಗೂ ಗೊತ್ತಿರುವಂತೆ ಬಿಜೆಪಿಗರಿಗೆ ಕನ್ನಡಕ್ಕಿಂತಲೂ ಶಿವಾಜಿ ಮೇಲೆ ಪ್ರೀತಿ ಜಾಸ್ತಿನೇ ಇರುತ್ತೆ. ಇರಲಿ. ಶಿವಾಜಿ ಮೂರ್ತಿಗೆ ಮಸಿ ಬಳದವರಿಗೂ ಶಿಕ್ಷೆ ಆಗಬೇಕು. ಅವರಿಗೆ ಶಿಕ್ಷೆ ಕೊಡಬೇಡಿ ಅಂತ ಯಾರೂ ಹೇಳ್ತಿಲ್ಲ. ಇಲ್ಲಿ ಪ್ರಶ್ನೆ ಇರೋದು ಕನ್ನಡಿಗರು ಅಂದ್ರೆ, ಅಷ್ಟು ಅಸಡ್ಡೆ ಯಾಕೆ.? ಅದು ಬಿಜೆಪಿ ಆಗಿರಲಿ, ಕಾಂಗ್ರೆಸ್ ಆಗಿರಲಿ.. ಎರಡೂ ರಾಷ್ಟ್ರೀಯ ಪಕ್ಷಗಳು ಕನ್ನಡಿಗರನ್ನ ಮೂರನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ತಿವೆ.
ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇದೆ. ಹೀಗಾಗಿ ಇಲ್ಲಿ ಕಾಂಗ್ರೆಸ್ ನಾಯಕರು ಸುಮ್ಮನೆ ಇದ್ದಾರೆ. ಅದರಲ್ಲೂ ಬೆಳಗಾವಿ ಪಾಲಿಟಿಕ್ಸ್ ವಿಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳದ್ದು ದಿವ್ಯ ಮೌನ. ಸುಮ್ಮನೆ ಮಾಧ್ಯಮಗಳು ಕೇಳ್ತೀವಿ ಅಂತ ಒಂದು ಟ್ವೀಟ್ ಮಾಡಿ, ಎಂಜಾಯ್ ಮಾಡಿದಂತೆ ಕಾಣ್ತಿದೆ.
ಬೆಳಗಾವಿಯಲ್ಲಿ ಅಧಿವೇಶನ ನಡೀತಿರಬೇಕಾದ್ರೆನೇ ಹೀಗಾದ್ರೆ, ಬೇರೆ ದಿನಗಳಲ್ಲಿ ಪರಿಸ್ಥಿತಿ ಇನ್ನೆಷ್ಟು ಹದಗೆಟ್ಟಿರುತ್ತೆ ಅಂತ ಯೋಚಿಸ್ಬೇಕು. ಪಕ್ಕದಲ್ಲಿರೋ ಆಂಧ್ರ, ತಮಿಳುನಾಡು, ತೆಲಂಗಾಣ ರಾಜ್ಯಗಳನ್ನ ನೋಡಿ ನಮ್ಮ ರಾಜಕಾರಣಿಗಳು ಅದ್ಯಾವಾಗ ಬುದ್ಧಿ ಕಲೀತಾರೋ ಗೊತ್ತಿಲ್ಲ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?