Featured
ಕರ್ನಾಟಕ, ಕನ್ನಡಿಗರು ಅಂದ್ರೆ ಪ್ರಧಾನಿ ಮೋದಿಗೆ ಅಸಡ್ಡೆಯಾಕೆ..? : ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.. ಉತ್ತರ ಕರ್ನಾಕದಲ್ಲಿ ಪ್ರವಾಹ ಬಂದಾಗ ಪ್ರಧಾನಿ ಭೇಟಿ ನೀಡಲಿಲ್ಲ. ಕರ್ನಾಟಕದ ಬಗ್ಗೆ ಅವರಿಗೆ ಅಸಡ್ಡೆಯೇಕೆ..? ರಾಜ್ಯದ ಬಗ್ಗೆ ಅವಮಾನೀಯ ಧೋರಣೆಯೇಕೆ..? ಎಂದು ಪ್ರಶ್ನೆ ಮಾಡಿದ್ರು. ಬೆಂಗಳೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತ್ನಾಡಿದ ಸಿದ್ದು, ಪ್ರವಾಹ ಪರಿಸ್ಥಿತಿಯನ್ನ ವಿವರಿಸಿದ್ರು.
ಬಿಹಾರದ ಬಗ್ಗೆ ಸಾಂತ್ವನ ಹೇಳೋಕೆ ಪ್ರಧಾನಿ ನರೇಂದ್ರ ಮೋದಿಗೆ ಆಗುತ್ತೆ.
ಆದ್ರೆ,ರಾಜ್ಯದ ಬಗ್ಗೆ ಒಂದು ಸಾಂತ್ವನ ಹೇಳಲಿಲ್ಲ.
೩೮ ಸಾವಿರ ಕೋಟಿ ಪರಿಹಾರವನ್ನ ಅವರದ್ದೇ ಸರ್ಕಾರ ಕೇಳಿತ್ತು. ಆದ್ರೆ, ಪರಿಹಾರ ಕೊಟ್ಟಿದ್ದು ಮಾತ್ರ
೧೨೦೦ ಕೋಟಿ. ನಾವು ದೂಪ ಹಾಕ್ತೀವಲ್ಲ ಹಾಗೆ ಅವರ ಪರಿಹಾರ ಎಂದು ಲೇವಡಿ ಮಾಡಿದ್ರು.
ಅಮಿತ್ ಶಾ, ನಿರ್ಮಾಲ ಸೀತಾರಾಮನ್ ಬಂದು ಹೋದ್ರಲ್ಲ. ಏನ್ ಹೇಳಿದ್ರು..? ೨೪ ಲಕ್ಷ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. ಕಬ್ಬು, ಭತ್ತ, ಬಾಳೆ, ಉದ್ದು, ತೊಗರಿ ಬೆಳೆ ಹಾಳಾಗಿದೆ. ಆದರೆ ರೈತರಿಗೆ ಇವರು ಕೊಟ್ಟಿದ್ದೇನು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?