Featured
ರಾಜ್ಯಾದ್ಯಂತ ಕಾಂಗ್ರೆಸ್ ಪಾದಯಾತ್ರೆ : 2013ರ ಇತಿಹಾಸ ರಿಪೀಟ್ ಆಗುತ್ತಾ.?

ಬೆಂಗಳೂರು :
ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಸಿಡಿದೆದ್ದಿದೆ. ಬೆಲೆ ಏರಿಕೆ ಸೇರಿದಂತೆ ವಿವಿಧ ವಿಚಾರಗಳನ್ನ ಮುಂದಿಟ್ಟುಕೊಂಡು, ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಅಲ್ಲದೆ, 2018ರಲ್ಲಿ ಕಾಂಗ್ರೆಸ್ ಸೋತಿರೋ ಪ್ರಮುಖ 100 ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಲು ಹೊರಟಿದ್ದು, ಪಕ್ಕಾ ಪ್ಲಾನ್ ರೆಡಿ ಮಾಡಿದೆ.
ಯೆಸ್, ಇದೇ ಬುಧವಾರದಿಂದ ಕಾಂಗ್ರೆಸ್ ದೇವನಹಳ್ಳಿಯಿಂದ ಪಾದಯಾತ್ರೆ ಶುರು ಮಾಡಲಿದೆ. ಕೆಪಿಸಿಸಿ ಸಾರಥಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ಶುರುವಾಗಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ದೇವನಹಳ್ಳಿ ಬಳಿಕ ಸಚಿವ ಡಾ.ಕೆ. ಸುಧಾಕರ್ ಪ್ರತಿನಿಧಿಸೋ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ. ಈ ವರ್ಷ ಸಂಘಟನೆಯ ವರ್ಷ, ಸಂಘರ್ಷದ ವರ್ಷ ಎಂದು ಈ ಮೊದಲೇ ಘೋಷಿಸಿದ್ದೆ.
ಅದರಂತೆ 100 ವಿಧಾನಸಭಾ ಕ್ಷೇತ್ರಗಳ 'ಜನಧ್ವನಿ ಯಾತ್ರೆ' ಮಾರ್ಚ್ 3 ರಂದು ಕೆಪಿಸಿಸಿ ಕಚೇರಿಯಿಂದ ಆರಂಭವಾಗಲಿದೆ.
ಮೊದಲ ಕಾರ್ಯಕ್ರಮ ದೇವನಹಳ್ಳಿಯಲ್ಲಿ
ನಡೆಯಲಿದ್ದು, ಅಂದೇ ಚಿಕ್ಕಬಳ್ಳಾಪುರದಲ್ಲೂ ಕಾರ್ಯಕ್ರಮ ಜರುಗಲಿದೆ.
– @DKShivakumar #JanaDwani pic.twitter.com/LscgdrZRra— Karnataka Congress (@INCKarnataka) February 28, 2021
ದೇವನಹಳ್ಳಿ, ಚಿಕ್ಕಬಳ್ಳಾಪುರದಲ್ಲಿ ಪಾದಯಾತ್ರೆ ನಡೆಸಿದ ಬಳಿಕ, ರಾಜ್ಯಾದ್ಯಂತ ಎಲ್ಲೆಲ್ಲೆ ಪಾದಯಾತ್ರೆ ನಡೆಸಲಾಗುತ್ತೆ ಅನ್ನೋದು ಗೊತ್ತಾಗಲಿದೆ. ಈಗಾಗ್ಲೇ ಕೋಲಾರದ ಕುರುಡುಮಲೆಯಲ್ಲಿ ಪೂಜೆ ಮಾಡಿರೋ ಕಾಂಗ್ರೆಸ್ ನಾಯಕರು, 2023ರಲ್ಲಿ ಅಧಿಕಾರಕ್ಕೆ ತರಲು ತಯಾರಿ ನಡೆಸಿದ್ದಾರೆ. 2013ರಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಸಲಾಗಿತ್ತು. ಆಗ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತ್ತು. ಅದೇ ಇತಿಹಾಸವನ್ನ ಮತ್ತೆ ರಿಪೀಟ್ ಮಾಡಬೇಕು ಅಂತ ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿದೆ.
ವಿಶೇಷವಾಗಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗ್ತಿದೆ. ಇದೇ ವಿಚಾರವನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ಪಾದಯಾತ್ರೆ ಪ್ಲಾನ್ ಮಾಡಿದ್ದು, ಡಿಕೆ ಶಿವಕುಮಾರ್ ನೇತೃತ್ವ ವಹಿಸಿದ್ದಾರೆ. ಆದ್ರೆ, ಎಲ್ಲೋ ಸಿದ್ದರಾಮಯ್ಯ ಅವರನ್ನ ಕಡೆಗಣಿಸಲಾಗಿದೆ ಅನ್ನೋ ಮಾತು ಕೇಳಿ ಬರ್ತಿದ್ದು, ಪಾದಯಾತ್ರೆ ಯಾವ ರೀತಿ ಸಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?