ರೈಸಿಂಗ್ ಕನ್ನಡ :
ಬಸವರಾಜ ಬೊಮ್ಮಾಯಿ ನೂತನ ಸಿಎಂ ಆದ ಬಳಿಕ ಇದೇ ಮೊದಲ ನಾಳೆ ಅಂದ್ರೆ, ಶುಕ್ರವಾರ ದೆಹಲಿಗೆ ಪ್ರಯಾಣ ಬೆಳೆಸ್ತಿದ್ದಾರೆ. ಬೆಳಗ್ಗೆ 6.10ರ ವಿಶೇಷ ವಿಮಾನದಲ್ಲಿ ಸಿಎಂ ದೆಹಲಿಗೆ ಹೊರಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾಗಿ ಧನ್ಯವಾದ ತಿಳಿಸಲಿದ್ದಾರೆ. ಇದೇ ವೇಳೆ, ರಾಜ್ಯ ಸಚಿವ ಸಂಪುಟ ರಚನೆ ವಿಚಾರವಾಗಿ ಚರ್ಚೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಈಗಾಗ್ಲೇ ಮಾಜಿ ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ 12 ಮಂದಿಯನ್ನ ಕೈಬಿಡಬೇಕು ಅನ್ನೋ ಚರ್ಚೆ ಜೋರಾಗಿಯೇ ನಡೀತಿದೆ. ಆದ್ರೆ, ಯಾರನ್ನ ಕೈಬಿಡಬೇಕು, ಯಾವ ಮಾನದಂಡದ ಮೇಲೆ ಅವರನ್ನ ಕೈಬಿಡಬೇಕು ಅನ್ನೋ ಅಂಶ ಕುತೂಹಲ ಮೂಡಿಸಿದೆ.
ಹೀಗಾಗಿಯೇ, ಶುಕ್ರವಾರ ಈ ಎಲ್ಲಾ ಅಂಶಗಳು ಫೈನಲ್ ಆಗೋ ಸಾಧ್ಯತೆ ಇದೆ. ಒಮ್ಮೆ ಹೈಕಮಾಂಡ್ ಸಂಪುಟದ ಪಟ್ಟಿಗೆ ಓಕೆ ಅಂದಾಕ್ಷಣ, ಶನಿವಾರವೇ ಹೊಸ ಸಚಿವರ ಪ್ರಮಾಣ ವಚನ ನಡೆಯೋ ಸಾಧ್ಯತೆ ಇದೆ. ಯಾಕಂದ್ರೆ, ರಾಜ್ಯದಲ್ಲಿ ಈಗ ಪ್ರವಾಹ ಜೋರಾಗಿದೆ. ಜೊತೆಗೆ ಕೊರೋನಾ ಮೂರನೇ ಅಲೆ ಭೀತಿ ಶುರುವಾಗ್ತಿದೆ. ಇಂಥ ಟೈಮಲ್ಲಿ ಸಿಎಂ ಒಬ್ಬರೇ, ಎಷ್ಟೂ ಅಂತ ಮಾಡೋಕೆ ಆಗುತ್ತೆ. ಹೀಗಾಗಿ ಆದಷ್ಟು ಶೀಘ್ರವಾಗಿ ಕ್ಯಾಬಿನೆಟ್ ರಚನೆ ಆಗಲಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?