Featured
ಸಿಎಂ ಯಡಿಯೂರಪ್ಪಗೆ ನಂಬರ್ 6 ಟೆನ್ಷನ್ : ಸರ್ಕಾರದ ಉಳಿವಿಗೆ ಏನ್ಮಾಡೋದು..?

ಬೆಂಗಳೂರು : ರಾಜ್ಯದಲ್ಲಿ ಉಪಚುನಾವಣೆ ಘೋಷಣೆ ಆಗ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿವೆ. ಯಡಿಯೂರಪ್ಪ ಸರ್ಕಾರ ಉಳಿಯಬೇಕು ಅಂದ್ರೆ, ಬೈ ಎಲೆಕ್ಷನ್ ಆಗುವ 15 ಕ್ಷೇತ್ರಗಳ ಪೈಕಿ ಕನಿಷ್ಠ ಆರು ಕ್ಷೇತ್ರಗಳನ್ನ ಗೆಲ್ಲಲೇ ಬೇಕು. ಹೀಗಾಗಿ ಸಿಎಂ ಯಡಿಯೂರಪ್ಪಗೆ ಈಗ ನಂಬರ್ 6 ಟೆನ್ಷನ್ ಶುರುವಾಗಿದೆ.
ಸದ್ಯ ಬಿಜೆಪಿಯಲ್ಲಿ 105 ಶಾಸಕರಿದ್ದಾರೆ. ಮುಳಬಾಗಿಲು ಶಾಸಕ ನಾಗೇಶ್ ಪಕ್ಷೇತರರಾಗಿದ್ದು, ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಅಲ್ಲಿಗೆ ಬಿಜೆಪಿ ಬಲ 106 ಆಗಿದೆ. 15 ಕ್ಷೇತ್ರಗಳಿಗೆ ಎಲೆಕ್ಷನ್ ನಡೆದ್ರೆ, ಒಟ್ಟು ವಿಧಾನಸಭಾ ಸಂಖ್ಯೆ 222 ಆಗುತ್ತೆ. ಆಗ ಬಹುಮತಕ್ಕೆ 112 ಶಾಸಕರ ಬಲ ಬೇಕಾಗುತ್ತೆ. ಸದ್ಯ ಬಿಜೆಪಿಗೆ 106 ಶಾಸಕರ ಬಲ ಇದ್ದು, 112 ಶಾಸಕರ ಬಲ ಬೇಕು ಅಂದ್ರೆ, 15 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 6 ಗೆಲ್ಲಲೇ ಬೇಕು.
ಹೀಗಾಗಿಯೇ ಫುಲ್ ಟೆನ್ಷನ್ನಲ್ಲಿರೋ ಸಿಎಂ ಯಡಿಯೂರಪ್ಪ, ಚುನಾವಣೆ ಘೋಷಣೆ ಆಗ್ತಿದ್ದಂತೆ ಆ್ಯಕ್ಷನ್ ಪ್ಲಾನ್ಗೆ ಮುಂದಾಗಿದ್ದಾರೆ. ಅನರ್ಹ ಶಾಸಕರ ಜೊತೆ ಸಭೆ ನಡೆಸಿರೋ ಸಿಎಂ ಬಿಎಸ್ವೈ, ಹೇಗಾದರೂ ಮಾಡಿ, ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು. ಇದಕ್ಕೆ ಯಾವೆಲ್ಲಾ ತಂತ್ರ, ಪ್ರತಿತಂತ್ರಗಳನ್ನ ಅನುಸರಿಸಬೇಕು ಅನ್ನೋದರ ಚರ್ಚೆ ನಡೆದಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?