Featured
ನಾದ ಬ್ರಹ್ಮನ ಜನುಮದಿನ – ವಿಶೇಷವಾಗಿ ಶುಭಕೋರಿದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್..!

ರೈಸಿಂಗ್ ಕನ್ನಡ :
ಕನ್ನಡದ ಜನಪ್ರಿಯ ಸಂಗಿತ ನಿರ್ದೇಶಕ. ನಾದಬ್ರಹ್ಮ ಹಂಸಲೇಖಾ ಅವರಿಗೆ ಇಂದು ಜನುಮದಿನದ ಸಂಭ್ರಮ. 1951ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರ ನಿಜನಾಮ ಗೋವಿಂದರಾಜು ಗಂಗರಾಜು.
ಕನ್ನಡ ಸಿನಿ ಜಗತ್ತಿನಲ್ಲಿ ‘ಪ್ರೇಮಲೋಕ’ವನ್ನೇ ಸೃಷ್ಠಿಸಿದ ಈ ‘ರಣಧೀರ‘, ಭಾರತೀಯ ಚಿತ್ರರಂಗದಲ್ಲಿ ‘ರಣರಂಗ‘ವನ್ನೇ ಸೃಷ್ಟಿಸಿ, ಎಲ್ಲರಿಗೂ ಸೆಡ್ಡುಹೊಡೆದು ನಿಂತ ‘ಸಾಂಗ್ಲಿಯಾನ’ ಇವರು. ಪೈಪೋಟಿ ಎಂಬ ‘ಯುದ್ಧಕಾಂಡ’ದಲ್ಲಿ ಒಬ್ಬಂಟಿಯಾಗಿ ಹೋರಾಡೋ ‘ಅಂಜದಗಂಡು’ ಈ ‘ಯುಗಪುರುಷ’.
ಕನ್ನಡ ಸಂಗೀತ ಲೋಕದಲ್ಲಿ ಹಂಸಲೇಖ ಯಾವತ್ತಿಗೂ ‘ಒಂಟಿ ಸಲಗ’, ಎಂತವರನ್ನೂ ಸೆಳೆಯೋ ‘ಕಿಂದರಜೋಗಿ’. ಸಂಗೀತ ರಸಿಕನ ಕಾಲಿಗೆ ‘ಬಣ್ಣದ ಗೆಜ್ಜೆ’ ಕಟ್ಟಿ ಕುಣಿಸಿದ ‘ಸೂಪರ್ ಸ್ಟಾರ್’. ಹಂಸಲೇಖ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದ್ರೆ ಅದೊಂದು ಸಂಗೀತ ಸ್ವರ್ಗಲೋಕವೇ ಸರಿ. ಇನ್ನೂ ಡಾ. ರಾಜ್ ಕುಮಾರ್ ಜೊತೆಗಿನ ಒಡನಾಡವೂ ಅದ್ಭುತ. ಅಣ್ಣಾವ್ರ ಅಂತಿಮ ಚಿತ್ರ ‘ಶಬ್ದವೇದಿ’ ಸಿನಿಮಾಕ್ಕೂ ಇವರದ ಸಂಗೀತ.
ಹೊಸ ಜಮಾನದ ಸಂಗೀತ ನಿರ್ದೇಶಕರಿಗೂ ತಾನು ಪೈಪೋಟಿ ಕೊಡಬಲ್ಲೇ ಅನ್ನೋದನ್ನ ಈ ನಾದಬ್ರಹ್ಮ ಸಾಕಷ್ಟು ಬಾರಿ ಸಾಭೀತು ಮಾಡಿದ್ದಾರೆ. ಎಲ್ಲೋ ಸೈಲೆಂಟ್ ಆದ್ರೂ ಅನ್ನುವಷ್ಟರಲ್ಲೇ, ಎಲ್ಲರ ಮನದಲ್ಲೂ ಅಚ್ಚಳಿಯದೇ ಉಳಿದ ‘ನೆನಪಿರಲಿ’ ಚಿತ್ರಕ್ಕೆ ಸಂಗೀತ ರಸವನ್ನ ಹರಿಸಿದ್ರು.
1993ರಿಂದ ಹಿಡಿದ 2020ರವರೆಗೂ ಅವರ ಸಂಗೀತ ಕೃಷಿ ನಡೆಯುತ್ತಲೇ ಇದೆ. ಮುಂಬರುವ ಡಿ ಬಾಸ್ ಅಭಿನಯದ ‘ರಾಜವೀರ ಮದಕರಿ ನಾಯಕ’ ಚಿತ್ರಕ್ಕೂ ಹಂಸಲೇಖರದ್ದೇ ಸಂಗೀತ. ಈ ಸಂಗೀತ ಗಾರುಡಿಗನ ಕೆಲಸ ಮತ್ತಷ್ಟು ಸಾಗಲಿ. ದೇವರು ಆರೋಗ್ಯ, ಆಯುಷ್ಯಕೊಟ್ಟು ಕಾಪಾಡಲಿ ಅಂತ ಹಾರೈಸೋಣ. ಒನ್ಸ್ ಎಗೈನ್ ಹ್ಯಾಪಿ ಬರ್ಡ್ ಡೇ ಸರ್.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















