ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್ :
ಹೆಮ್ಮಾರಿ ಕೊರೊನಾ ತನ್ನ ಕ್ರೂರ ಅಟ್ಟಹಾಸದಿಂದ ಜನಸಾಮಾನ್ಯರ ಜೀವನ ಮಾತ್ರವಲ್ಲ ಸಿನಿಮಾ ಮಂದಿಯ ಜೀವನವನ್ನೂ ಕಿತ್ತುಕೊಂಡಿದೆ. ಇದಕ್ಕೆ ತಾಜಾ ಉದಾಹರಣೆ ಹಿರಿಯ ನಟ ಶಂಕರ್ ಅಶ್ವತ್ಥ್. ನಟನಾಗಿ, ಟ್ಯಾಕ್ಸಿ ಚಾಲಕನಾಗಿ ಜೀವನ ನಡೆಸುತ್ತಿದ್ದ ಶಂಕರ್ ಇಂದು ಕ್ಯಾಟರಿಂಗ್ ಮಾಡುತ್ತಿದ್ದಾರೆ.
ಹಿರಿಯ ನಟ ದಿವಂಗತ ಕೆ.ಎಸ್.ಅಶ್ವತ್ಥ್ ಪುತ್ರ, ಶಂಕರ್ ಅಶ್ವತ್ಥ್ ಸಿನಿಮಾದಲ್ಲಿ ಅವಕಾಶ ಸಿಗದೇ ಮೈಸೂರಿನಲ್ಲಿ ಟ್ಯಾಕ್ಸಿ ಓಡಿಸುತ್ತಿರುವುದು ಗೊತ್ತಿರುವ ವಿಚಾರ. ಅಪ್ಪನಂತೆ ಸ್ವಾಭಿಮಾನಿಯಾಗಿರುವ ಶಂಕರ್ ಊಬರ್ ಚಾಲಕರಾಗಿ ಕೆಲಸ ಮಾಡಿ ಸಮಯ ಸಿಕ್ಕಾಗಲೆಲ್ಲಾ ಸಿನಿಮಾ ಮಾಡಿಕೊಂಡು ಜೀವನ ಮಾಡಿಕೊಂಡು ಬಂದಿದ್ದರು.
ಇದೀಗ ಕಳೆದ ನಾಲ್ಕು ತಿಂಗಳಿನಿಂದ ಲಾಕ್ಡೌನ್ ಆಗಿರುವುದರಿಂದ ಶಂಕರ್ಗೆ ಸಿನಿಮಾದಲ್ಲಿ ಅವಕಾಶವಿಲ್ಲ. ಇತ್ತ ಟ್ಯಾಕ್ಸಿ ಚಾಲನೆ ಮಾಡಿ ಜೀವನ ಸಾಗಿಸೋಣವೆಂದರೆ ಟ್ಯಾಕ್ಸಿಗೂ ಒಬ್ಬ ಪ್ರಯಾಣಕನೂ ಬರುತ್ತಿಲ್ಲ. ಹೀಗಾಗಿ ಅಶ್ವತ್ಥ್ ಬೇರೆ ದಾರಿ ಕಾಣದೇ ಪತ್ನಿ ನಡೆಸುತ್ತಿರುವ ಕ್ಯಾಟರಿಂಗ್ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ.
ಶಂಕರ್ ಕುಟುಂಬದ ಕೈ ರುಚಿ ಹೆಚ್ಚಿನ ಜನರಿಗೆ ಇಷ್ಟವಾಗಿದ್ದು ಕರೆ ಮಾಡಿ ತಮಗೆ ಬೇಕಾದ ತಿನಿಸುಗಳನ್ನ ತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಶಂಕರ್ ದಿನವೀಡಿ ಕ್ಯಾಟರಿಂಗ್ ಮಾಡುತ್ತಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?