ರೈಸಿಂಗ್ ಕನ್ನಡ ಸಿನಿಮಾ
ಬೆಂಗಳೂರು : 2020 ಇಡೀ ಜಗತ್ತಿಗೆ ಆಘಾತ ತಂದಿರೋದು ಎಷ್ಟು ನಿಜವೋ, ಕನ್ನಡ ಸಿನಿಮಾ ರಂಗಕ್ಕೂ ಅಷ್ಟೇ ನೋವನ್ನ ತಂದಿದೆ. ಅದರಲ್ಲೂ ಈ ಭಾನುವಾರ ಸ್ಯಾಂಡಲ್ವುಡ್ಗೆ ಕರಾಳ ದಿನ. 39 ವರ್ಷದ ನಟ, ಯುವ ಸಾಮ್ರಾಟ್, ಸುಪ್ರೀಂ ಹೀರೋ ಅಂತಲೇ ಕರೆಸಿಕೊಳ್ತಿದ್ದ ಚಿರಂಜೀವಿ ಸರ್ಜಾ ವಿಧಿವಶರಾಗಿದ್ದಾರೆ. ಚಿರು ನಿಧನದಿಂದ ಇಡೀ ಸ್ಯಾಂಡಲ್ವುಡ್ ಶಾಕ್ಗೆ ಒಳಗಾಗಿದೆ.
ಚಿರಂಜೀವಿ ಸರ್ಜಾಗೆ ಇನ್ನೂ 39 ವರ್ಷ. ಕಳೆದ 10 ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ವಿಭಿನ್ನ ಸಿನಿಮಾಗಳನ್ನ ಮಾಡಿ, ಪ್ರೇಕ್ಷಕರ ಮನ ಗೆದ್ದಿದ್ದಾರೆ. 39 ವರ್ಷಕ್ಕೆ ಇಹಲೋಕ ತ್ಯಜಿಸಿರೋದು ನುಂಗಲಾರದ ತುತ್ತಾಗಿದೆ. ಚಿರು, 2018ರ ಮೇ 2ರಂದು ನಟಿ ಮೇಘನಾ ರಾಜ್ ಅವರನ್ನ ವಿವಾಹವಾಗಿದ್ರು. ಮದುವೆಯಾದ ಎರಡನೇ ವರ್ಷದಲ್ಲಿ ಚಿರು ಅಗಲಿಕೆ ಕುಟುಂಬವರ್ಗಕ್ಕೆ ಸಿಡಿಲು ಬಡಿದಂತೆ ಆಗಿದೆ.
ಚಿರುಗೆ ಕಳೆದ ಮೂರು ದಿನಗಳ ಹಿಂದೆ ಬ್ರೈನ್ ಸ್ಟ್ರೋಕ್ ಆಗಿತ್ತು ಎನ್ನಲಾಗಿದೆ. ಅಲ್ಲದೆ, ಭಾನುವಾರ ಉಸಿರಾಟದ ತೊಂದರೆಯಾಗಿದೆ. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡ ಹೋಗೋ ಟೈಮಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
2009ರಲ್ಲಿ ವಾಯುಪುತ್ರ ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶ ಮಾಡಿದ್ದ ಚಿರು, ಗಂಡೆದೆ, ಚಿರು, ದಂಡಂ ದಶಗುಣಂ, ಕೆಂಪೇಗೌಡ, ಅಜಿತ್, ರುದ್ರತಾಂಡವ, ರಾಮ ಲೀಲಾ, ಆಕೆ, ಪ್ರೇಮ ಬರಹ, ಐ ಲವ್ ಯೂ ಅಮ್ಮ, ಸಿಂಹ, ಶಿವಾರ್ಜುನ ಸೇರಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ರು.
ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಸಂಬಂಧಿ ಹಾಗೂ ನಟ ಧ್ರುವ ಸರ್ಜಾ ಅವರ ಸಹೋದರ ಚಿರು ಸರ್ಜಾ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?