Featured
ಜೆಡಿಎಸ್ 12 ಶಾಸಕರು ಬಿಜೆಪಿಗೆ ಬರ್ತಾರಾ..? ಡಿಸಿಎಂ ಗೋವಿಂದ ಕಾರಜೋಳ ಮಾತಿನ ಅರ್ಥವೇನು..?

ಕಲಬುರಗಿ : ಜೆಡಿಎಸ್ನಲ್ಲಿ ಸಮಾಧಾನದ ಹೊಗೆ ಇರೋ ಟೈಮಲ್ಲೇ ಇದಕ್ಕೆ ಪುಷ್ಠಿ ನೀಡುವಂತಹ ಸುದ್ದಿ ಹೊರಬಿದ್ದಿದೆ. ಈಗಾಗಲೇ ಅತೃಪ್ತ ಎಂಎಲ್ಸಿಗಳು ಸಭೆ ನಡೆಸಿದ್ದಾರೆ. ಇತ್ತ ಜೆಡಿಎಸ್ ವರಿಷ್ಠರು ಸಭೆ ನಡೆಸಿ, ಎಲ್ಲಾ ಅಸಮಾಧಾನವನ್ನ ಬಗೆಹರಿಸೋ ಪ್ರಯತ್ನ ನಡೆಸ್ತಿದ್ದಾರೆ. ಆದ್ರೆ, ಉಪ ಚುನಾವಣೆ ಬಳಿಕ ಜೆಡಿಎಸ್ನ 12 ಶಾಸಕರು ಬಿಜೆಪಿಗೆ ಸೇರ್ತಾರೆ ಅನ್ನೋ ಸುದ್ದಿ ಜೋರಾಗಿದೆ. ಇದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಮಾತು ಪುಷ್ಠಿ ನೀಡುವಂತಿದೆ.
ಕಲಬುರಗಿಯಲ್ಲಿ ಮಾತ್ನಾಡಿರೋ ಡಿಸಿಎಂ ಗೋವಿಂದ ಕಾರಜೋಳ, ಜೆಡಿಎಸ್ನ 12 ಶಾಸಕರ ಬಗ್ಗೆ ಯಾವುದೇ ವಿಚಾರ ನನಗೆ ಗೊತ್ತಿಲ್ಲ. ಆದ್ರೆ ನಮ್ಮ ಪಕ್ಷದ ಬಾಗಿಲು ಯಾವಾಗಲೂ ತೆರೆದಿರುತ್ತೆ. ಯಾರೇ ನಮ್ಮ ಪಕ್ಷಕ್ಕೆ ಬಂದ್ರೂ ಸ್ವಾಗತ ಮಾಡ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ, ಜೆಡಿಎಸ್ ಶಾಸಕರಿಗೆ ಡಿಸಿಎಂ ಕಾರಜೋಳ ಆಫರ್ ಕೊಟ್ಟಿದ್ದಾರೆ.
ಹಾಗಿದ್ರೆ, ಬಿಜೆಪಿ ನಾಯಕರು ಮತ್ತೊಮ್ಮೆ ಆಪರೇಷನ್ಗೆ ಮುಂದಾಗಿದ್ದಾರಾ..? ಉಪ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಬಾರದೇ ಇದ್ರೆ, ಈ ತಂತ್ರ ಪಾಲಿಸ್ತಾರಾ ಅನ್ನೋ ಕುತೂಹಲ ಸದ್ಯ ರಾಜ್ಯ ರಾಜಕೀಯದಲ್ಲಿ ಗರಿಗೆದರಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?