Featured
ದೇವ ಮಾನವ ಕಲ್ಕಿ ಭಗವಾನ್ ಆಶ್ರಮದಲ್ಲಿ ಸಿಕ್ಕಿದ್ದು ಬರೋಬ್ಬರಿ 490 ಕೋಟಿ ಅಕ್ರಮ ಕ್ಯಾಶ್..!

ರೈಸಿಂಗ್ ಕನ್ನಡ / ಬೆಂಗಳೂರು :
ಆದಾಯ ತೆರಿಗೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ನಡೆಸಿದ ದಾಳಿಯಲ್ಲಿ, ಕಲ್ಕಿ ಭಗವಾನ್ ಆಶ್ರಮ ಹಾಗೂ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಬೆಂಗಳೂರು, ಹೈದ್ರಾಬಾದ್, ತಮಿಳುನಾಡು ಸೇರಿದಂತೆ ಸುಮಾರು 40 ಪ್ರದೇಶಗಳಲ್ಲಿ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ರು. ದಾಳಿ ಮುಗಿದ ಮೇಲೆ ಎಲ್ಲಾ ಲೆಕ್ಕ ಹಾಕಿದ್ರೆ, ಬರೋಬ್ಬರಿ 490 ಕೋಟಿ ಕ್ಯಾಶ್ ಸಿಕ್ಕಿದೆ. ಈ ಹಣಕ್ಕೆ ಯಾವುದೇ ರೀತಿ ದಾಖಲೆಗಳು ಇಲ್ಲ ಎಂದು ಐಟಿ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಈ ಹಣ ಕಲ್ಕಿ ಭಗವಾನ್ ಹಾಗೂ ಅವರ ಮಗ ಕೃಷ್ಣಾ ಅವರಿಗೆ ಸೇರಿದ್ದಾಗಿದೆ. ಆದ್ರೆ, ಹಣದ ಮೂಲ ಎಲ್ಲೂ ನಮೂದಾಗಿಲ್ಲ. ಹೀಗಾಗಿ, 490 ಕೋಟಿ ಕ್ಯಾಶ್ ಸೀಜ್ ಮಾಡಿದ್ದು, ಅಕ್ರಮ ಹಣ ಎಂದು ಘೋಷಿಸಲಾಗಿದೆ. 1980ರಲ್ಲಿ ಕಲ್ಲಿ ಭಗವಾನ್ ಆಶ್ರಮ ಆರಂಭಿಸಿ, ಬಳಿಕ ಹಲವು ರೀತಿಯ ಉದ್ಯಮಗಳಲ್ಲಿ ಕಲ್ಕಿ ಭಗವಾನ್ ತೊಡಗಿಸಿಕೊಂಡಿದ್ರು. ಇದಕ್ಕೆ ತಮ್ಮ ಪುತ್ರ ಕೃಷ್ಣಾ ಸಾಥ್ ನೀಡಿದ್ರು.
ತನ್ನನ್ನು ತಾನು ವಿಷ್ಣುವಿನ 10ನೇ ಅವತಾರ ಎಂದು ಕರೆದುಕೊಳ್ಳುವ ಸ್ವಯಂ ಘೋಷಿತ ದೇವ ಮಾನವ ಈ ಕಲ್ಕಿ ಭಗವಾನ್. ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಅಪಾರ ಭಕ್ತ ಸಮೂಹವನ್ನೇ ಕಲ್ಕಿ ಭಗವಾನ್ ಹೊಂದಿದ್ದಾರೆ.
ಕಲ್ಕಿ ಆಶ್ರಮದಲ್ಲಿ ಏನೇನು ಸಿಕ್ಕಿದೆ..?
- 93 ಕೋಟಿ ರೂ. ಕ್ಯಾಶ್
- 18 ಕೋಟಿ ವಿದೇಶಿ ಕರೆನ್ಸಿ
- 88 ಕೆಜಿ ಚಿನ್ನ, 26 ಕೋಟಿ ರೂ.ಮೌಲ್ಯ
- 1271 ಕ್ಯಾರೆಟ್ ವಜ್ರದ ಮೌಲ್ಯ 5 ಕೋಟಿ ರೂ.
- 500 ಕೋಟಿ ರೂಗೂ ಹೆಚ್ಚು ಅಕ್ರಮ ಆಸ್ತಿ
ಒಟ್ಟಿನಲ್ಲಿ ಕಲ್ಕಿ ಭಗವಾನ್ ನಿಜ ಸ್ವರೂಪ ಬಯಲಾಗಿದ್ದು, ಐಟಿ ಅಧಿಕಾರಿಗಳ ಮುಂದಿನ ನಡೆ ಏನು ಅನ್ನೋದು ಕುತೂಹಲ ಮೂಡಿಸಿದೆ. ಇನ್ನೂ, ಐಟಿ ಅಧಿಕಾರಿಗಳ ದಾಳಿ ಹಾಗೂ ವಿಚಾರಣೆ ನಡೆಯುತ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?