Connect with us

Featured

ಬಿಜೆಪಿ ಸರ್ಕಾರ ಕನ್ನಡಿಗರಿಗೆ ದ್ರೋಹ ಮಾಡ್ತಿದೆಯಾ..? ರಾಜ್ಯೋತ್ಸವಕ್ಕೆ ಕನ್ನಡ ಧ್ವಜವೋ..? ರಾಷ್ಟ್ರ ಧ್ವಜವೋ..?

ರೈಸಿಂಗ್ ಕನ್ನಡ : ಕನ್ನಡ ರಾಜ್ಯೋತ್ಸವ ಅಂದ್ರೆ, ಅದು ನಾಡ ಹಬ್ಬ. ಕನ್ನಡಿಗರ, ಕರ್ನಾಟಕದ ಹಬ್ಬ. ಇಂಥಹ ಸಂದರ್ಭದಲ್ಲಿ ಕನ್ನಡ ಧ್ವಜ ಹಾರಾಟ ಮಾಡುವುದು ನಮ್ಮ ಇತಿಹಾಸ, ಸಂಪ್ರದಾಯ. ಇದುವರೆಗೆ ಬೆಳೆದು, ನಡೆದುಕೊಂಡು ಬಂದಿರೋ ಪರಂಪರೆ. ಆದ್ರೆ, ಅದ್ಯಾಕೋ ಬಿಜೆಪಿ ಸರ್ಕಾರ ಇದಕ್ಕೆ ತಿಲಾಂಜಲಿ ಹಾಡುವ ಸಾಧ್ಯತೆ ಕಾಣಿಸ್ತಿದೆ. ಕೆಲವು ಮೂಲಗಳ ಪ್ರಕಾರ, ಸಾಧ್ಯವಾದಷ್ಟು ರಾಷ್ಟ್ರ ಧ್ವಜ ಹಾರಾಟ ಮಾಡಿ ಎಂದು ರಾಜ್ಯ ಸರ್ಕಾರವೇ ಮೌಖಿಕ ಆದೇಶ ನೀಡಿದೆ ಎನ್ನಲಾಗಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರೋ ಶಿಕ್ಷಣ ಇಲಾಖೆ, ಕೊಪ್ಪಳದಲ್ಲಿ ರಾಷ್ಟ್ರ ಧ್ವಜ ಹಾರಾಟ ಮಾಡುವಂತೆ ಶಿಕ್ಷಕರಿಗೆ ಲಿಖಿತ ಆದೇಶವನ್ನೇ ನೀಡಲಾಗಿದೆ. ಇದು ಕ್ಷೇತ್ರ ಶಿಕ್ಷಣಾಧಿಕಾರಿಯ ಪ್ರಮಾದವೋ..? ಅಥವಾ ರಾಜ್ಯ ಸರ್ಕಾದ ಆದೇಶವೋ ಸ್ಪಷ್ಟನೆ ಇಲ್ಲ. ಆದ್ರೆ, ರಾಜ್ಯ ಸರ್ಕಾರದ ಆದೇಶ ಇಲ್ಲದೇ ಈ ರೀತಿಯ ಉಲ್ಲೇಖ ಸರ್ಕಾರ ಆದೇಶದಲ್ಲಿ ಬರಲು ಸಾಧ್ಯವಿಲ್ಲ.

ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರ ಆಗ್ತಿದ್ದಂತೆ, ಇದು ಸರ್ಕಾರಿ ಆದೇಶವಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೂ, ಎಲ್ಲೋ ಒಂದು ಕಡೆ, ಬಿಜೆಪಿ ಸರ್ಕಾರ ಕನ್ನಡಿಗರನ್ನ ರೊಚ್ಚಿಗೆಬ್ಬಿಸೋ ಕೆಲಸ ಮಾಡ್ತಿದೆ. ಒಮ್ಮೊಮ್ಮೆ ಒಂದೇ ಭಾಷೆ, ಒಂದೇ ದೇಶ ಅನ್ನುತ್ತೆ. ಮತ್ತೊಮ್ಮೆ ಕನ್ನಡ ಧ್ವಜ ಬೇಕಿಲ್ಲ ಅನ್ನುತ್ತೆ. ಕನ್ನಡಿಗರಿ ಬಿಜೆಪಿ ದ್ರೋಹ, ಮೋಸ, ಅನ್ಯಾಯ ಮಾಡ್ತಿದೆಯಾ ಅನ್ನೋ ಭಾವನೆ ಹುಟ್ಟುತ್ತಿದೆ.

ರಾಜ್ಯ ಮೊದಲೋ..? ದೇಶ ಮೊದಲೋ ಎಂಬ ಪ್ರಶ್ನೆಗೆ ಬಹಳಷ್ಟು ಕನ್ನಡಿಗರು ರಾಜ್ಯವೇ ಮೊದಲು ಅನ್ನೋ ಉತ್ತರ ಕೊಡ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಸೇರಿದ್ರೆನೇ ದೇಶ. ದೇಶದಿಂದ ರಾಜ್ಯವಲ್ಲ. ರಾಜ್ಯಗಳಿಗೆ ಪ್ರಾತಿನಿಧ್ಯ, ಅವರ ಭಾಷೆಗೆ ಬೆಲೆ ನೀಡದೆ ಇದ್ರೆ ದೇಶದ ಉನ್ನತಿ ಸಾಧ್ಯವಿಲ್ಲ. ಇದನ್ನ ಬಿಜೆಪಿ ಅರಿಯಬೇಕು.

https://twitter.com/dineshgrao/status/1189948344753246208?s=20

ಇದೇ ಕಾರಣಕ್ಕಾಗಿ, ರಾಜ್ಯ ಸರ್ಕಾರದ ನಿಲುವಿಗೆ ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಕೂಡ ಈ ಹಿಂದೆ ಹಿಂದೆ ಮಹತ್ವ ನೀಡಿತ್ತು. ಆದ್ರೆ, ಬಿಜೆಪಿಯಷ್ಟು ಅಲ್ಲ. ನಾಡಧ್ವಜ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ ಟ್ವಿಟರ್ ಮೂಲಕ ಟ್ಯಾಗ್ ಮಾಡಿ ತೀರ್ವ ಅಸಮಾಧಾನ ಹೊರಹಾಕಿದ್ದಾರೆ. ಕನ್ನಡಿಗರ ಅಸ್ಮಿತೆಗೆ, ಏಕೀಕರಣಕ್ಕೆ ಅಪಮಾನ ಮಾಡಿದಂತೆ. ಇತಿಹಾಸ, ಪರಂಪರೆಯನ್ನ ಬಿಜೆಪಿ ಸಾಯಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ.

Advertisement

ಇನ್ನಾದ್ರೂ, ಬಿಜೆಪಿ ಸರ್ಕಾರ ಸ್ಥಳೀಯರ ಭಾವನೆಗಳಿಗೆ ಬೆಲೆ ಕೊಡುವುದನ್ನ ಕಲಿಯಬೇಕಿದೆ.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ