ರೈಸಿಂಗ್ ಕನ್ನಡ : ಕನ್ನಡ ರಾಜ್ಯೋತ್ಸವ ಅಂದ್ರೆ, ಅದು ನಾಡ ಹಬ್ಬ. ಕನ್ನಡಿಗರ, ಕರ್ನಾಟಕದ ಹಬ್ಬ. ಇಂಥಹ ಸಂದರ್ಭದಲ್ಲಿ ಕನ್ನಡ ಧ್ವಜ ಹಾರಾಟ ಮಾಡುವುದು ನಮ್ಮ ಇತಿಹಾಸ, ಸಂಪ್ರದಾಯ. ಇದುವರೆಗೆ ಬೆಳೆದು, ನಡೆದುಕೊಂಡು ಬಂದಿರೋ ಪರಂಪರೆ. ಆದ್ರೆ, ಅದ್ಯಾಕೋ ಬಿಜೆಪಿ ಸರ್ಕಾರ ಇದಕ್ಕೆ ತಿಲಾಂಜಲಿ ಹಾಡುವ ಸಾಧ್ಯತೆ ಕಾಣಿಸ್ತಿದೆ. ಕೆಲವು ಮೂಲಗಳ ಪ್ರಕಾರ, ಸಾಧ್ಯವಾದಷ್ಟು ರಾಷ್ಟ್ರ ಧ್ವಜ ಹಾರಾಟ ಮಾಡಿ ಎಂದು ರಾಜ್ಯ ಸರ್ಕಾರವೇ ಮೌಖಿಕ ಆದೇಶ ನೀಡಿದೆ ಎನ್ನಲಾಗಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರೋ ಶಿಕ್ಷಣ ಇಲಾಖೆ, ಕೊಪ್ಪಳದಲ್ಲಿ ರಾಷ್ಟ್ರ ಧ್ವಜ ಹಾರಾಟ ಮಾಡುವಂತೆ ಶಿಕ್ಷಕರಿಗೆ ಲಿಖಿತ ಆದೇಶವನ್ನೇ ನೀಡಲಾಗಿದೆ. ಇದು ಕ್ಷೇತ್ರ ಶಿಕ್ಷಣಾಧಿಕಾರಿಯ ಪ್ರಮಾದವೋ..? ಅಥವಾ ರಾಜ್ಯ ಸರ್ಕಾದ ಆದೇಶವೋ ಸ್ಪಷ್ಟನೆ ಇಲ್ಲ. ಆದ್ರೆ, ರಾಜ್ಯ ಸರ್ಕಾರದ ಆದೇಶ ಇಲ್ಲದೇ ಈ ರೀತಿಯ ಉಲ್ಲೇಖ ಸರ್ಕಾರ ಆದೇಶದಲ್ಲಿ ಬರಲು ಸಾಧ್ಯವಿಲ್ಲ.
ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರ ಆಗ್ತಿದ್ದಂತೆ, ಇದು ಸರ್ಕಾರಿ ಆದೇಶವಲ್ಲ ಎಂದು ಸ್ಪಷ್ಟನೆ ನೀಡಿದೆ. ಆದರೂ, ಎಲ್ಲೋ ಒಂದು ಕಡೆ, ಬಿಜೆಪಿ ಸರ್ಕಾರ ಕನ್ನಡಿಗರನ್ನ ರೊಚ್ಚಿಗೆಬ್ಬಿಸೋ ಕೆಲಸ ಮಾಡ್ತಿದೆ. ಒಮ್ಮೊಮ್ಮೆ ಒಂದೇ ಭಾಷೆ, ಒಂದೇ ದೇಶ ಅನ್ನುತ್ತೆ. ಮತ್ತೊಮ್ಮೆ ಕನ್ನಡ ಧ್ವಜ ಬೇಕಿಲ್ಲ ಅನ್ನುತ್ತೆ. ಕನ್ನಡಿಗರಿ ಬಿಜೆಪಿ ದ್ರೋಹ, ಮೋಸ, ಅನ್ಯಾಯ ಮಾಡ್ತಿದೆಯಾ ಅನ್ನೋ ಭಾವನೆ ಹುಟ್ಟುತ್ತಿದೆ.
ರಾಜ್ಯ ಮೊದಲೋ..? ದೇಶ ಮೊದಲೋ ಎಂಬ ಪ್ರಶ್ನೆಗೆ ಬಹಳಷ್ಟು ಕನ್ನಡಿಗರು ರಾಜ್ಯವೇ ಮೊದಲು ಅನ್ನೋ ಉತ್ತರ ಕೊಡ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳು ಸೇರಿದ್ರೆನೇ ದೇಶ. ದೇಶದಿಂದ ರಾಜ್ಯವಲ್ಲ. ರಾಜ್ಯಗಳಿಗೆ ಪ್ರಾತಿನಿಧ್ಯ, ಅವರ ಭಾಷೆಗೆ ಬೆಲೆ ನೀಡದೆ ಇದ್ರೆ ದೇಶದ ಉನ್ನತಿ ಸಾಧ್ಯವಿಲ್ಲ. ಇದನ್ನ ಬಿಜೆಪಿ ಅರಿಯಬೇಕು.
ಇದೇ ಕಾರಣಕ್ಕಾಗಿ, ರಾಜ್ಯ ಸರ್ಕಾರದ ನಿಲುವಿಗೆ ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಕೂಡ ಈ ಹಿಂದೆ ಹಿಂದೆ ಮಹತ್ವ ನೀಡಿತ್ತು. ಆದ್ರೆ, ಬಿಜೆಪಿಯಷ್ಟು ಅಲ್ಲ. ನಾಡಧ್ವಜ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವಿಟರ್ ಮೂಲಕ ಟ್ಯಾಗ್ ಮಾಡಿ ತೀರ್ವ ಅಸಮಾಧಾನ ಹೊರಹಾಕಿದ್ದಾರೆ. ಕನ್ನಡಿಗರ ಅಸ್ಮಿತೆಗೆ, ಏಕೀಕರಣಕ್ಕೆ ಅಪಮಾನ ಮಾಡಿದಂತೆ. ಇತಿಹಾಸ, ಪರಂಪರೆಯನ್ನ ಬಿಜೆಪಿ ಸಾಯಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ.
ಇನ್ನಾದ್ರೂ, ಬಿಜೆಪಿ ಸರ್ಕಾರ ಸ್ಥಳೀಯರ ಭಾವನೆಗಳಿಗೆ ಬೆಲೆ ಕೊಡುವುದನ್ನ
ಕಲಿಯಬೇಕಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?