ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ನಲ್ಲಿ ಆರ್ಸಿಬಿ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಪ್ಲೇ ಆಫ್ಗೆ ಹೋಗಲು ಎರಡೂ ತಂಡಗಳಿಗೂ ಇನ್ನೊಂದು ಗೆಲುವು ಬೇಕಾಗಿದೆ. ಆರ್ಸಿಬಿ 11 ಪಂದ್ಯಗಳಿಂದ 7ರಲ್ಲಿ ಗೆದ್ದು 4ರಲ್ಲಿ ಸೋಲು ಕಂಡಿದೆ. ಮುಂಬೈ ಕೂಡ 11 ಪಂದ್ಯಗಳಿಂದ 7ರಲ್ಲಿ ಗೆದ್ದು 4ರಲ್ಲಿ ಸೋಲು ಕಂಡಿದೆ.ಈಗಾಗಲೇ ಒಂದು ಬಾರಿ ಮುಖಾಮುಖಿಯಾಗಿದ್ದ ರೋಚಕ ಪಂದ್ಯದಲ್ಲಿ ಆರ್ಸಿಬಿ ಸೂಪರ್ ಓವರ್ನಲ್ಲಿ ಗೆದ್ದಿತ್ತು.
ಇದೀಗ ಮತ್ತೊಂದು ರೋಚಕ ಕದನದಲ್ಲಿ ಹೋರಾಡಲು ಉಭಯ ತಂಡಗಳು ಸಜ್ಜಾಗಿವೆ. ಇಂದಿನ ಪಂದ್ಯವನ್ನ ಆರ್ಸಿಬಿ ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಲಿದೆ.ಎರಡೂ ತಂಡಗಳಿಗೂ ಗಾಯದ ಸಮಸ್ಯೆ ದೊಡ್ಡ ತಲೆ ನೋವಾಗಿದೆ.
ಮುಂಬೈ ಪರ ನಾಯಕ ರೋಹಿತ್ ಶರ್ಮಾ ಗಾಯದಿಂದಾಗಿ ತಂಡದಿಂದ ಹೊರಗುಳಿದ್ರೆ ಆರ್ಸಿಬಿ ತಂಡದ ವೇಗಿ ನವದೀಪ್ ಸೈನಿ ಗಾಯಕ್ಕೆ ಗುರಿಯಾಗಿ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ಮುಂಬೈ ತಂಡದ ದೊಡ್ಡ ಶಕ್ತಿ ಹಿಟ್ಮ್ಯಾನ್ ರೋಹಿತ್ ಶರ್ಮಾ ಆಡದಿದ್ದರೇ ಆರ್ಸಿಬಿ ತುಂಬ ಲಾಭವಿದೆ. ಇನ್ನು ಆರ್ಸಿಬಿ ಪ್ಲೇಯಿಂಗ್ ಇಲೆವೆನ್ ಬಗ್ಗೆ ಹೇಳುವುದಾದರೇ ಓಪನರ್ ಆ್ಯರಾನ್ ಫಿಂಚ್ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಹೀಗಾಗಿ ಜೋಸ್ ಫಿಲಿಪ್ ಅವರನ್ನ ಓಪನರ್ರಾಗಿ ಕಳಿಸಬಹುದು. ನವದೀಪ್ ಸೈನಿ ಸ್ಥಾನಕ್ಕೆ ಉಮೇಶ್ ಯಾದವ್ಗೆ ಅವಕಾಶ ಕೊಡಬಹುದು.
ಇನ್ನು ಮುಂಬೈ ತಂಡದಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಇಶನ್ ಕಿಶನ್, ಕ್ವಿಂಟಾನ್ ಡಿ ಕಾಕ್ ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಹಾರ್ದಿಕ್ ಪಾಂಡ್ಯ, ನಾಯಕ ಕಿರಾನ್ ಪೊಲಾರ್ಡ್, ಬೌಲಿಂಗ್ ವಿಭಾಗದಲ್ಲಿ ಟ್ರಂಟ್ ಬೌಲ್ಟ್, ಜಸ್ಪ್ರೀತ್ ಬೂಮ್ರಾ ಇದ್ದಾರೆ. ಒಟ್ಟಾರೆ ಹೈಸ್ಕೋರಿಂಗ್ ಪಂದ್ಯಕ್ಕೆ ಅಬುಧಾಬಿ ಸಜ್ಜಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?