ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಗಲ್ವಾನ್ ನದಿ ಪಾತ್ರದಲ್ಲಿ ಚೀನಾ ಸೇನೆ ಬೀಡುಬಿಟ್ಟಿದ್ದು ಆತಂಕದ ವಿಷ್ಯವಾಗಿತ್ತು. ಆದ್ರೀಗ, ಆತಂಕ ದೂರವಾಗಿದೆ, ಚೀನಾ ಗಲ್ವಾನ್ ನದಿ ಪಾತ್ರದಿಂದ ತನ್ನ ಸೈನ್ಯವನ್ನ ಹಿಂದಕ್ಕೆ ಕರೆಸಿಕೊಂಡಿದೆ. ಇದು ಸೋಮವಾರ ಬೆಳಗ್ಗೆ ಭಾರತಕ್ಕೆ ಸಿಕ್ಕ ಖುಷಿ ವಿಚಾರ. ಆದ್ರೆ, ಚೀನಿಯರು ತಮ್ಮ ಸೈನ್ಯವನ್ನ ಹಿಂಪಡೆಯೋಕೆ ಕಾರಣ ಯಾರು ಗೊತ್ತಾ…? ಬೇರೆ ಯಾರೂ ಅಲ್ಲ ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್. ಯೆಸ್, ಅಜಿತ್ ದೋವಲ್ ಮಾಡಿದ ಒಂದೇ ಒಂದು ದೂರವಾಣಿ ಕರೆಯ ಪರಿಣಾಮ ಚೀನಾ, ಗಲ್ವಾನ್ ನದಿಪಾತ್ರದಿಂದ ತನ್ನ ಸೈನ್ಯವನ್ನು ಹಿಂಪಡೆದಂ. ಪಿಎಲ್ಎ ತುಕಡಿಗಳನ್ನು ಗಡಿಯಿಂದ ಸುಮಾರು 1 ಕಿ.ಮೀ ಹಿಂದಕ್ಕೆ ಕರೆಸಿಕೊಂಡಿದೆ.
ಯೆಸ್, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ನಡುವೆ ಭಾನುವಾರ ನಡೆದ ದೂರವಾಣಿ ಸಂಭಾಷಣೆ ಎಲ್ಲಕ್ಕೂ ಕಾರಣ ಎಂಬುದು ಇದೀಗ ತಿಳಿದು ಬಂದಿದೆ. ಅಜಿತ್ ಧೋವಲ್ ಹಾಗೂ ವಾಂಗ್ ಯೀ ನಡುವೆ ದೂರವಾಣಿ ಮಾತುಕತೆ ವೇಳೆ ಗಡಿ ಉದ್ವಿಗ್ನತೆ ಶಮನಕ್ಕೆ ಚೀನಾ ತನ್ನ ಸೈನ್ಯವನ್ನು ಹಿಂಪಡೆಯುವುದೊಂದೇ ಪರಿಹಾರ ಎಂದು ಧೋವಲ್ ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಗಡಿ ತಕರಾರು ಪರಸ್ಪರ ಆದ ಒಪ್ಪಂದಗಳಿಗೆ ಧಕ್ಕೆ ತರಬಾರದು ಎಂಬ ಭಾರತದ ನಿಲುವನ್ನು ಅಜಿತ್ ತಮ್ಮ ಮಾತಿನ್ನ ಪುನರುಚ್ಛಿಸಿದ್ದು, ಶಾಂತಿ ಮಾತುಕತೆಗಳಿಗೂ ಮುನ್ನ ಗಡಿಯಿಂದ ಸೈನ್ಯ ಹಿಂಪಡೆಯುವ ಪ್ರಕ್ರಿಯೆಯನ್ನ ಶೀಘ್ರವೇ ಮಾಡಬೇಕು ಎಂದು ಧೋವ್ ಮಾತಿಕತೆ ನಡೆಸಿದ್ದರು ಎನ್ನಲಾಗಿದೆ.
ಧೋವಲ್ ಮಾತಿಗೆ ಸ್ಪಂಧಿಸಿದ, ಚೀನಾ ವಿದೇಶಾಂಗ ಸಚಿವ ವಾಂಗ್ ಯೀ, ಗಲ್ವಾನ್ ಗಡಿಯಿಂದ ಸೈನ್ಯವನ್ನು ಹಿಂಪಡೆಯುವ ಕುರಿತು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಪರಿಣಾಮವಾಗಿ ಸೋಮವಾರ ಚೀನಾ ಗಲ್ವಾನ್ ವ್ಯಾಲಿ ಗಡಿಯಿಂದ ತನ್ನ ಸೇನೆಯನ್ನು ಸುಮಾರು 1 ಕಿ.ಮೀ ಹಿಂದಕ್ಕೆ ಕರೆಸಿಕೊಂಡಿದೆ. ವಿದೇಶಗಳ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳು ಬಂದಾಗ, ಅಜಿತ್ ಧೋವಲ್ ಮಧ್ಯೆಪ್ರವೇಶಿಸಿ, ಸಮಸ್ಯೆನ್ನ ಬಗೆಹರಿಸುತ್ತಾರೆ. ಈ ಬಾರಿಯ ಅವರ ಮಾತುಕತೆ ಫಲಪ್ರದವಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?