Connect with us

Featured

ಇಂದಿನಿಂದ ಇಂಡೋ-ಆಸಿಸ್ ಸರಣಿ ಆರಂಭ: ಮೊದಲ ಏಕದಿನ ಕದನಕ್ಕೆ ಸಿಡ್ನಿ ಸಜ್ಜು

ರೈಸಿಂಗ್ ಕನ್ನಡ:

ನ್ಯೂಸ್​ ಡೆಸ್ಕ್​:

ಇಡೀ ಕ್ರಿಕೆಟ್​ ಜಗತ್ತೆ ಕಾತರದಿಂದ ಕಾಯುತ್ತಿರುವ ಇಂಡೋ- ಆಸಿಸ್​ ಕಾದಾಟಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಲಾಕ್​ಡೌನ್​ ನಂತರ ಟೀಮ್​ ಇಂಡಿಯಾಕ್ಕೆ ಇದೇ ಮೊದಲ ಅಂತಾರಾಷ್ಟ್ರೀಯ ಸರಣಿ ಇದಾಗಿದೆ. ಶುಕ್ರವಾರ ಫಿಂಚ್​ ಪಡೆ ವಿರುದ್ಧ ಮೊದಲ ಏಕದಿನ ಪಂದ್ಯ ಆಡುವ ಮೂಲಕ ವಿರಾಟ್​ ಪಡೆ ಪ್ರವಾಸವನ್ನ ಆರಂಭಿಸಲಿದೆ. ವಿಶ್ವ ಕ್ರಿಕೆಟ್​ನ ಎರಡು ಬಲಿಷ್ಠ ತಂಡಗಳ ಕಾದಾಟಕ್ಕೆ ಸಿಡ್ನಿ ಅಂಗಳ ಸಜ್ಜಾಗಿದೆ.

ಕ್ವಾರಂಟೈನ್​ ಅವಧಿ ಮುಗಿಸಿರುವ ಟೀಮ್​ ಇಂಡಿಯಾ ಬಯೋ ಬಬಲ್​ ಅಡಿಯಲ್ಲಿ ಅಭ್ಯಾಸ ಮಾಡಿ ಕಾಂಗರೂಗಳ ವಿರುದ್ಧ ಮೊದಲ ಕಾದಾಟಕ್ಕೆ ಸಜ್ಜಾಗಿದೆ. ಹಿಟ್​​ಮ್ಯಾನ್​ ರೋಹಿತ್​ ಶರ್ಮಾ ಅನುಪಸ್ಥಿಯಲ್ಲಿ ಟೀಮ್​ ಇಂಡಿಯಾ ಕಣಕ್ಕಿಳಿಯುತ್ತಿದೆ. ಉಪನಾಯಕನ ಜವಾಬ್ದಾರಿಯನ್ನ ಕನ್ನಡಿಗ ಕೆ.ಎಲ್​.ರಾಹುಲ್ ವಹಿಸಿಕೊಂಡಿದ್ದಾರೆ. ತಂಡದ ಓಪನರ್ಸ್​ಗಳಾಗಿ ಡ್ಯಾಶಿಂಗ್​ ಓಪನರ್​ ಶಿಖರ್​ ಧವನ್​ ಮತ್ತು  ಕನ್ನಡಿಗ ಮಯಾಂಕ್​ ಅಗರ್​ವಾಲ್​ ಕಣಕ್ಕಿಯಳಿಯಲಿದ್ದಾರೆ. ನಂ.3ರಲ್ಲಿ ನಾಯಕ ವಿರಾಟ್​ ಕೊಹ್ಲಿ, ಮಿಡ್ಲ್​ ಆರ್ಡರ್​​ನಲ್ಲಿ  ಶ್ರೇಯಸ್​ ಅಯ್ಯರ್​, ಕೆ.ಎಲ್​.ರಾಹುಲ್​ ಮತ್ತು ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಕಣಕ್ಕಿಳಿಯಲಿದ್ದಾರೆ. ಇವರ ನಂತರ ರವೀಂದ್ರ ಜಡೇಜಾ ತಂಡದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ತುಂಬ ಇದೆ. ಇನ್ನು ಬೌಲಿಂಗ್​ ಡಿಪಾರ್ಟ್​ಮೆಂಟ್​ನಲ್ಲಿ ರಿಸ್ಟ್​ ಸ್ಪಿನ್ನರ್ಸ್​ಗಳಾದ ಯಜ್ವಿಂದರ್​ ಚಹಲ್​ ಮತ್ತು ಕುಲ್​ದೀಪ್​ ಯಾದವ್​ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ.

Advertisement

ಇನ್ನು ವೇಗಿಗಳ ವಿಭಾಗದಲ್ಲಿ ಮೊಹ್ಮದ್​ ಶಮಿ ಮತ್ತು ಜಸ್​ಪ್ರೀತ್​ ಬೂಮ್ರಾ  ಆಡೋದು ಪಕ್ಕಾ ಇನ್ನು ಮೂರನೇ ಪೇಸರ್​ ಕೋಟಾದಲ್ಲಿ ನವದೀಪ್​ ಸೈನಿ ಅಥವಾ ಶಾರ್ದೂಲ್​ ಠಾಕೂರ್​ಗೆ ಅವಕಾಶ ಸಿಗಬಹುದು. ಇನ್ನು ಆಸ್ಟ್ರೇಲಿಯಾ ತಂಡವನ್ನ ನೋಡುವುದಾದರೆ ಅನುಭವಿ ಆಟಗಾರ ಆ್ಯರಾನ್​ ಫಿಂಚ್ ತಂಡವನ್ನ ಮುನ್ನಡೆಸಲಿದ್ದಾರೆ. ಇನ್ನು ತಂಡದಲ್ಲಿ ಸ್ಟೀವ್​ ಸ್ಮಿತ್​, ಮಾರ್ನಸ್​ ಲಾಬುಸ್​ಶಾನೆ, ಮಾರ್ಕಸ್​​ ಸ್ಟೋಯ್ನಿಸ್​, ಗ್ಲೇನ್​ ಮ್ಯಾಕ್ಸ್​ವೆಲ್​ ಮತ್ತು ಆ್ಯಡಾಮ್​ ಜಾಂಪ, ಮಿಶೆಲ್​ ಸ್ಟಾರ್ಕ್​, ಪ್ಯಾಟ್​ ಕಮಿನ್ಸ್​ ರಂಥಹ ಸ್ಟಾರ್​ ಆಟಗಾರರಿದ್ದಾರೆ.

ಸಿಡ್ನಿ ಅಂಗಳ ಬೌಲರ್ಸ್​ಗಳ ಪಾಲಿಗೆ ಸ್ವರ್ಗ. ಟಾಸ್​ ಗೆದ್ದರೆ ಮೊದಲು ಬ್ಯಾಟಿಂಗ್​ ಮಾಡಬೇಕು.ಭಾರತ ಆಸ್ಟ್ರೇಲಿಯಾ ಇದುವರೆಗೂ 140 ಬಾರಿ ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಭಾರತ 52 ಬಾರಿ ಗೆದ್ರೆ ಆಸಿಸ್​ 78 ಬಾರಿ ಗೆಲುವು ಕಂಡಿದೆ. ಇನ್ನು ಸಿಡ್ನಿ ಅಂಗಳದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 17 ಏಕದಿನ ಪಂದ್ಯಗಳನ್ನ ಆಡಿವೆ ಇದರಲ್ಲಿ ಕೇವಲ 2 ಬಾರಿ ಭಾರತ ಗೆದ್ರೆ ಆಸ್ಟ್ರೇಲಿಯಾ 14 ಬಾರಿ ಗೆದ್ದಿದೆ. 1 ಬಾರಿ ಫಲಿತಾಂಶ ರಹಿತವಾಗಿದೆ.

ಪಿಚ್​ ಬಗ್ಗೆ ಹೇಳೊದಾದ್ರೆ ಸಿಡ್ನಿ ಅಂಗಳದಲ್ಲಿ 227 ಸರಾಸರಿ ರನ್​ ಆಗಿದೆ 408 ಗರಿಷ್ಠ ಸ್ಕೋರ್​ ಆಗಿದೆ. ಈ ಅಂಗಳದಲ್ಲಿ ಭಾರತ ಈ ಹಿಂದೆ ಕೇವಲ 63 ರನ್​ಗಳಿಗೆ ಆಲೌಟ್​ ಆಗಿತ್ತು. ಹೀಗಾಗಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಟಾಸ್​ ಗೆದ್ದಾಗ ಮೊದಲು ಬ್ಯಾಟಿಂಗ್​ ಆಯ್ದುಕೊಳ್ಳಬೇಕು. ವೀಕ್ಷಕರೇ ಭಾರತ –ಆಸಿಸ್​ ನಡುವಿನ ಕದನದಲ್ಲಿ ಯಾರು ಗೆಲ್ಲಬಹುದುದೆಂಬುದನ್ನ ಕಮೆಂಟ್​ ಮಾಡಿ ತಿಳಿಸಿ.

ಬೆಂಗಳೂರು1 year ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್1 year ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು1 year ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು1 year ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು1 year ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು1 year ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು1 year ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು1 year ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು1 year ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured4 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured6 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured4 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured2 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ6 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured5 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured6 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured6 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured1 year ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured2 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ