Featured
ಇಂದಿನಿಂದ ಇಂಡೋ-ಆಸಿಸ್ ಸರಣಿ ಆರಂಭ: ಮೊದಲ ಏಕದಿನ ಕದನಕ್ಕೆ ಸಿಡ್ನಿ ಸಜ್ಜು

ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಕಾಯುತ್ತಿರುವ ಇಂಡೋ- ಆಸಿಸ್ ಕಾದಾಟಕ್ಕೆ ಕೌಂಟ್ಡೌನ್ ಶುರುವಾಗಿದೆ. ಲಾಕ್ಡೌನ್ ನಂತರ ಟೀಮ್ ಇಂಡಿಯಾಕ್ಕೆ ಇದೇ ಮೊದಲ ಅಂತಾರಾಷ್ಟ್ರೀಯ ಸರಣಿ ಇದಾಗಿದೆ. ಶುಕ್ರವಾರ ಫಿಂಚ್ ಪಡೆ ವಿರುದ್ಧ ಮೊದಲ ಏಕದಿನ ಪಂದ್ಯ ಆಡುವ ಮೂಲಕ ವಿರಾಟ್ ಪಡೆ ಪ್ರವಾಸವನ್ನ ಆರಂಭಿಸಲಿದೆ. ವಿಶ್ವ ಕ್ರಿಕೆಟ್ನ ಎರಡು ಬಲಿಷ್ಠ ತಂಡಗಳ ಕಾದಾಟಕ್ಕೆ ಸಿಡ್ನಿ ಅಂಗಳ ಸಜ್ಜಾಗಿದೆ.
ಕ್ವಾರಂಟೈನ್ ಅವಧಿ ಮುಗಿಸಿರುವ ಟೀಮ್ ಇಂಡಿಯಾ ಬಯೋ ಬಬಲ್ ಅಡಿಯಲ್ಲಿ ಅಭ್ಯಾಸ ಮಾಡಿ ಕಾಂಗರೂಗಳ ವಿರುದ್ಧ ಮೊದಲ ಕಾದಾಟಕ್ಕೆ ಸಜ್ಜಾಗಿದೆ. ಹಿಟ್ಮ್ಯಾನ್ ರೋಹಿತ್ ಶರ್ಮಾ ಅನುಪಸ್ಥಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುತ್ತಿದೆ. ಉಪನಾಯಕನ ಜವಾಬ್ದಾರಿಯನ್ನ ಕನ್ನಡಿಗ ಕೆ.ಎಲ್.ರಾಹುಲ್ ವಹಿಸಿಕೊಂಡಿದ್ದಾರೆ. ತಂಡದ ಓಪನರ್ಸ್ಗಳಾಗಿ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಮತ್ತು ಕನ್ನಡಿಗ ಮಯಾಂಕ್ ಅಗರ್ವಾಲ್ ಕಣಕ್ಕಿಯಳಿಯಲಿದ್ದಾರೆ. ನಂ.3ರಲ್ಲಿ ನಾಯಕ ವಿರಾಟ್ ಕೊಹ್ಲಿ, ಮಿಡ್ಲ್ ಆರ್ಡರ್ನಲ್ಲಿ ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಣಕ್ಕಿಳಿಯಲಿದ್ದಾರೆ. ಇವರ ನಂತರ ರವೀಂದ್ರ ಜಡೇಜಾ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ತುಂಬ ಇದೆ. ಇನ್ನು ಬೌಲಿಂಗ್ ಡಿಪಾರ್ಟ್ಮೆಂಟ್ನಲ್ಲಿ ರಿಸ್ಟ್ ಸ್ಪಿನ್ನರ್ಸ್ಗಳಾದ ಯಜ್ವಿಂದರ್ ಚಹಲ್ ಮತ್ತು ಕುಲ್ದೀಪ್ ಯಾದವ್ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ.
ಇನ್ನು ವೇಗಿಗಳ ವಿಭಾಗದಲ್ಲಿ ಮೊಹ್ಮದ್ ಶಮಿ ಮತ್ತು ಜಸ್ಪ್ರೀತ್ ಬೂಮ್ರಾ ಆಡೋದು ಪಕ್ಕಾ ಇನ್ನು ಮೂರನೇ ಪೇಸರ್ ಕೋಟಾದಲ್ಲಿ ನವದೀಪ್ ಸೈನಿ ಅಥವಾ ಶಾರ್ದೂಲ್ ಠಾಕೂರ್ಗೆ ಅವಕಾಶ ಸಿಗಬಹುದು. ಇನ್ನು ಆಸ್ಟ್ರೇಲಿಯಾ ತಂಡವನ್ನ ನೋಡುವುದಾದರೆ ಅನುಭವಿ ಆಟಗಾರ ಆ್ಯರಾನ್ ಫಿಂಚ್ ತಂಡವನ್ನ ಮುನ್ನಡೆಸಲಿದ್ದಾರೆ. ಇನ್ನು ತಂಡದಲ್ಲಿ ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಸ್ಶಾನೆ, ಮಾರ್ಕಸ್ ಸ್ಟೋಯ್ನಿಸ್, ಗ್ಲೇನ್ ಮ್ಯಾಕ್ಸ್ವೆಲ್ ಮತ್ತು ಆ್ಯಡಾಮ್ ಜಾಂಪ, ಮಿಶೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ರಂಥಹ ಸ್ಟಾರ್ ಆಟಗಾರರಿದ್ದಾರೆ.
ಸಿಡ್ನಿ ಅಂಗಳ ಬೌಲರ್ಸ್ಗಳ ಪಾಲಿಗೆ ಸ್ವರ್ಗ. ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಮಾಡಬೇಕು.ಭಾರತ ಆಸ್ಟ್ರೇಲಿಯಾ ಇದುವರೆಗೂ 140 ಬಾರಿ ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಭಾರತ 52 ಬಾರಿ ಗೆದ್ರೆ ಆಸಿಸ್ 78 ಬಾರಿ ಗೆಲುವು ಕಂಡಿದೆ. ಇನ್ನು ಸಿಡ್ನಿ ಅಂಗಳದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 17 ಏಕದಿನ ಪಂದ್ಯಗಳನ್ನ ಆಡಿವೆ ಇದರಲ್ಲಿ ಕೇವಲ 2 ಬಾರಿ ಭಾರತ ಗೆದ್ರೆ ಆಸ್ಟ್ರೇಲಿಯಾ 14 ಬಾರಿ ಗೆದ್ದಿದೆ. 1 ಬಾರಿ ಫಲಿತಾಂಶ ರಹಿತವಾಗಿದೆ.
ಪಿಚ್ ಬಗ್ಗೆ ಹೇಳೊದಾದ್ರೆ ಸಿಡ್ನಿ ಅಂಗಳದಲ್ಲಿ 227 ಸರಾಸರಿ ರನ್ ಆಗಿದೆ 408 ಗರಿಷ್ಠ ಸ್ಕೋರ್ ಆಗಿದೆ. ಈ ಅಂಗಳದಲ್ಲಿ ಭಾರತ ಈ ಹಿಂದೆ ಕೇವಲ 63 ರನ್ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟಾಸ್ ಗೆದ್ದಾಗ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಬೇಕು. ವೀಕ್ಷಕರೇ ಭಾರತ –ಆಸಿಸ್ ನಡುವಿನ ಕದನದಲ್ಲಿ ಯಾರು ಗೆಲ್ಲಬಹುದುದೆಂಬುದನ್ನ ಕಮೆಂಟ್ ಮಾಡಿ ತಿಳಿಸಿ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?