ಬಾಗಲಕೋಟೆ : ತಲೆಸುಡುವ ಬಿಸಿಲ ನಡುವೆ ಕೃಷ್ಣಾ ನದಿ ನೀರು ಗಣನೀಯ ಪ್ರಮಾಣ ಖಾಲಿಯಾಗುತ್ತಿದೆ.ಗ್ರಾಮೀಣ ಭಾಗದ ಕೆರೆ, ಬಾವಿ, ಕೊಳವೆಬಾವಿಗಳು ಬತ್ತುತ್ತಿವೆ. ಹೀಗಾಗಿ ಹಳ್ಳಿಗಳಲ್ಲಿ ನೀರಿಗಾಗಿ ಪರದಾಟ ಪ್ರಾರಂಭವಾಗಿದೆ.
ಹೌದು,ಬಾಗಲಕೋಟ ಜಿಲ್ಲೆಯ ಹಿಂದಿನ ಜಮಖಂಡಿ ತಾಲೂಕು ಈಗಿನ ರಬಕವಿ ಬನಹಟ್ಟಿ ತಾಲೂಕಿನಲ್ಲಿ ಬರುವ ಯಲ್ಲಟ್ಟಿ ಗ್ರಾಮದ ವಾರ್ಡ ೫ ರ ಸೀಮಿ ಲಕ್ಕವ್ವ ಗುಡಿ ಬಳಿಯಲ್ಲಿ ಕಳೆದ ಸುಮಾರು 30 ವರ್ಷಗಳಿಂದ ವಸತಿ ಜನರು ವಾಸವಾಗಿದ್ದಾರೆ. ಬಿರುಬೇಸಿಗೆಯ ಆರಂಭವಾದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಮಕ್ಕಳಾದಿಯಾಗಿ ಮಹಿಳೆಯರು ಅಲೆದಾಡುವ ಪರದಾಡುವ ಪರಿಸ್ಥಿತಿ ನಿರ್ಮಾವಾಗಿದೆ. ಗ್ರಾಮಸ್ಥೆ ಯಂಕವ್ವ ಮಾತನಾಡಿ, ಎಲೆಕ್ಷನ್ ಬಂದಾಗ ಬರ್ತಾರ.
ಕೈಕಾಲು ಹಿಡಕೊಂಡು ವೋಟ್ ಕೇಳ್ತಾರ. ಇಂಥ ಕುಡಿಯುವ ನೀರಿನ ಸಮಸ್ಯೆ ಐತಿ ಅಂತ ಹೇಳಿದ್ದರೂ ಯಾರೂ ಕಿವಿಯಾಗ ಹಾಕುವಲ್ಲರು. ಗ್ರಾಮ ಪಂಚಾಯತಿ ಯವ್ರಿಗೆ ಹೇಳಿದ್ರೂ ಮಾಡ್ತಿವಿ ಅಂತಾರ ಇನ್ನೂ ನಮಗ ಕುಡಿಯುವ ನೀರಿನ ಸಮಸ್ಯೆ ಭಾಳ ಐತಿ. ನೀರಿಗಾಗಿ ಅಲೆದಾಡುವಂಗ ಆಗೈತಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಆದ್ದರಿಂದ ಯಲ್ಲಟ್ಟಿ ಗ್ರಾಮ ಪಂಚಾಯತಿ ಯವರು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?