ಆರೋಗ್ಯ
ಖಾಲಿ ಹೊಟ್ಟೆಗೆ ದಾಲ್ಚಿನ್ನಿ ನೀರು ಕುಡಿದರೆ, ತಕ್ಷಣವೇ ಸಿಗುವ ಆರೋಗ್ಯ ಲಾಭಗಳು

Health tips : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಡ್ ಕಾಫಿ ಕುಡಿಯುವ ಬದಲು ಒಂದು ಕಪ್ ದಾಲ್ಚಿನ್ನಿ ಮಿಕ್ಸೆಡ್ ವಾಟರ್ ಕುಡಿಯುವುದರಿಂದ ಸಿಗುವ ಆರೋಗ್ಯ ಲಾಭಗಳು ನಿಮಗೆ ಆಶ್ಚರ್ಯ ಹುಟ್ಟಿಸುತ್ತವೆ.
ನಮಗೆ ಚಿಕ್ಕ ವಯಸ್ಸಿನಲ್ಲಿ ಎದುರಾಗುತ್ತಿದ್ದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಸದಾ ಒಂದಿಲ್ಲೊಂದು ಮನೆ ಮದ್ದುಗಳು ಮನೆಯಲ್ಲೇ ರೆಡಿಯಾಗುತ್ತಿದ್ದವು. ಹಾಗಾಗಿ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆ ಬಾಗಿಲು ತಟ್ಟುವುದು ತಪ್ಪುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಮಕ್ಕಳು ತುಂಬಾ ಸೂಕ್ಷ್ಮ.
ಮಕ್ಕಳೇ ಏಕೆ ದೊಡ್ಡವರು ಕೂಡ. ಹಾಗಾಗಿ ಮನೆ ಮದ್ದುಗಳನ್ನು ನಾವು ಮರೆತೆ ಬಿಟ್ಟಿದ್ದೇವೆ. ಹೆಜ್ಜೆಗೊಂದು ಮೆಡಿಕಲ್ ಶಾಪ್ ಬೀದಿಗೊಂದು ಆಸ್ಪತ್ರೆ ಇದಕ್ಕೆ ಪುಷ್ಟಿ ಕೊಡುತ್ತಿವೆ. ಆದರೆ ಮನಸು ಮಾಡಿದರೆ ಪರಿಣಾಮಕಾರಿಯಾದ ಮನೆಮದ್ದುಗಳು ನಮ್ಮ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡಬಲ್ಲವು. ಇವುಗಳಲ್ಲಿ ದಾಲ್ಚಿನ್ನಿ ಕೂಡ ಒಂದು.
ದಾಲ್ಚಿನ್ನಿಯ ಬಗ್ಗೆ ಹೇಳುವುದಾದರೆ, ಇದನ್ನು ಚಕ್ಕೆ ಅಂತಲೂ ಇದನ್ನು ಕರೆಯುತ್ತಾರೆ. ಇದರ ಸುವಾಸನೆಗೆ ಸಾಟಿಯೇ ಇಲ್ಲ. ದಾಲ್ಚಿನ್ನಿ ಬಳಸಿ ಕೊಂಡು ತಯಾರಾಗುವ ಅಡುಗೆಗಳು ಕೂಡ ತುಂಬಾ ರುಚಿಕರವಾ ಗಿರುತ್ತವೆ.
ಹೀಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ದಾಲ್ಚಿನ್ನಿಯನ್ನು ಸೇರಿಸಿ ಕೊಳ್ಳುವುದರ ಜೊತೆಗೆ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆ ಯಲ್ಲಿ ದಾಲ್ಚಿನ್ನಿ ವಾಟರ್ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಆರೋಗ್ಯ ಸ್ವಾಸ್ಥ್ಯ ತಜ್ಞರಾದ ರಾಧಿ ದೇವುಲುಕಿಯ ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ರೀತಿ ಹಂಚಿಕೊಂಡಿದ್ದಾರೆ. ದಾಲ್ಚಿನ್ನಿ ನೀರಿನ ಆರೋಗ್ಯ ಪ್ರಯೋಜನಗಳು
ಇಂದಿನ ಕಾಲದಲ್ಲಿ ಸಕ್ಕರೆ ಕಾಯಿಲೆ ಎನ್ನುವುದು ಹಲವು ಜನರಲ್ಲಿ ಏಕಕಾಲಕ್ಕೆ ಕಂಡು ಬರುತ್ತಿದೆ. ಸಕ್ಕರೆ ಕಾಯಿಲೆ ಬಂದ ನಂತರದಲ್ಲಿ ಬೆರೆಯದೆ ಜೀವನ ಶೈಲಿ ಬಂದುಬಿಡುತ್ತದೆ.

ಇಂತಹ ಸಂದರ್ಭದಲ್ಲಿ ದಾಲ್ಚಿನ್ನಿ ಸೇವನೆ ಮಾಡುವುದರಿಂದ ಅಥವಾ ದಾಲ್ಚಿನ್ನಿ ಮಿಶ್ರಿತ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅದರ ಅಭೂತಪೂರ್ವ ಲಾಭಗಳನ್ನು ಪಡೆದುಕೊಳ್ಳಬಹುದು.
ಏಕೆಂದರೆ ದಾಲ್ಚಿನ್ನಿ ತನ್ನಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ಬಯೋಟೆಕ್ ಮತ್ತು ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ದಾಲ್ಚಿನ್ನಿ ನೀರಿನ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಂಟ್ರೋಲ್ ಆಗುತ್ತದೆ ಮತ್ತು ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?