Featured
IBPS ಪರೀಕ್ಷೆ, ಕನ್ನಡಿಗರಿಗೆ ಗಾಯದ ಮೇಲೆ ಬರೆ, ಕೇಂದ್ರದ ಮಲತಾಯಿ ಧೋರಣೆ : ಹೆಚ್ಡಿಕೆ

ಬೆಂಗಳೂರು: ಹಿಂದಿ ಹೇರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು ಕೇಂದ್ರ ಸರ್ಕಾರ ಕನ್ನಡ ಭಾಷಿಗರನ್ನ ಕಡೆಗಣಿಸಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ಬೇಡಿಕೆ ನಂತರವೂ ಕೇಂದ್ರ ಸರ್ಕಾರ ಐಬಿಪಿಎಸ್ ಪರೀಕ್ಷೆಯನ್ನ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ, ಜೊತೆಗೆ ಹಿಂದೆ ಇದ್ದ ಡೊಮಿಸೆಲ್ ನಿಯಮವನ್ನ ತೆಗೆದುಹಾಕಿ ಮಲತಾಯಿ ಧೋರಣೆ ತೋರಲಾಗಿದೆ, ಇದನ್ನ ನಾನು ಖಂಡಿಸುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕನ್ನಡದ ಮೇಲಿನ ದಬ್ಬಾಳಿಕೆ ವಿರೋಧಿಸಿ ಸೆ.೧೪ರಂದು ಟೌನ್ಹಾಲ್ನಿಂದ ಫ್ರೀಢಂಪಾರ್ಕ್ ವರೆಗೆ ಮೆರವಣಿಗೆ ಆಯೋಜಿಸುವುದಾಗಿ ಕನ್ನಡಪರ ಸಂಘಟನೆಗಳು ಹೇಳಿದ್ದು, ಅಂದು ಹ್ಯಾಷ್ಟ್ಯಾಗ್ ಮೂಲಕ ಟ್ವಿಟ್ಟರ್ ಟ್ರೆಂಡ್ ಮಾಡಲು ಮನವಿ ಮಾಡಿಕೊಳ್ಳಲಾಗಿದೆ. ಕನ್ನಡಿಗರ ಹಲವಾರು ಬೇಡಿಕೆಗಳ ನಂತರವೂ ಕೇಂದ್ರ ಸರ್ಕಾರ IBPS ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಜೊತೆಗೆ ಮುಂಚೆ ಇದ್ದ domicile ನಿಯಮವನ್ನು ವಾಪಾಸ್ ತರಲಾಗಿಲ್ಲ.
ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಇದು ಸಾಕ್ಷಿ. ಇದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ. #IBPSMosa pic.twitter.com/2qPcg4AvYW— H D Kumaraswamy (@hd_kumaraswamy) September 13, 2019
You may like
ಕ್ಷಮೆ ಕೋರಿದ ಹೆಚ್.ಡಿ. ಕುಮಾರಸ್ವಾಮಿ : ಭಾವುಕರಾಗಿ ಕಣ್ಣೀರು ಹಾಕಿದ ದೇವೇಗೌಡ, ಜೆಡಿಎಸ್ ಭಿನ್ನಮತ ಶಮನ..!
ಜೆಡಿಎಸ್ ಹಾಗೂ ಹೆಚ್ಡಿ ಕುಮಾರಸ್ವಾಮಿಗೆ ಮತ್ತೊಂದು ಶಾಕ್..? ಏನದು ಗೊತ್ತಾ..?
ಮುಖಾಮುಖಿಯಾದ ಯಡಿಯೂರಪ್ಪ-ಕುಮಾರಸ್ವಾಮಿ : ಕೈ-ಕೈ ಹಿಡಿದು ಚರ್ಚೆ ನಡೆಸಿದ್ದೇನು..?
JDS ಸದಸ್ಯರ ಮಲೇಷಿಯಾ ಟೂರ್ ಕ್ಯಾನ್ಸಲ್ ಆಗಿದ್ದು ಯಾಕೆ..? ಪಕ್ಷ ಬಿಡ್ತಾರಾ..? HDKಗೆ ಕಾದಿದೆಯಾ ಶಾಕ್..?
ಮಠಾಧೀಶರ ಟೆಲಿಫೋನ್ ಕದ್ದಾಲಿಕೆ ಆಗಿದೆ. ಕ್ಷಮಿಸಿ, ಇದು ಪಾಪದ ಕೆಲಸ ಎಂದ ಕಂದಾಯ ಸಚಿವ ಆರ್. ಅಶೋಕ್
ಅಧಿಕಾರ ಸಿಗಲಿಲ್ಲ ಎಂದು ಕಣ್ಣೀರು ಹಾಕಬಾರದು : ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್