ಬೆಂಗಳೂರು : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತ್ನಾಡಿದ ದೊರೆಸ್ವಾಮಿ ಅವರು, ಪ್ರಧಾನಿ ಮೋದಿಯ ಸರ್ವಾಧಿಕಾರಿ ಧೋರಣೆ ಮುಂದುವರೆದಿದೆ. ನೆರೆ ಬಗ್ಗೆ ಮಾತನಾಡದ ಮೋದಿ, ಅಮೆರಿಕಾಗೆ ಹೋಗಿ ಏನ್ ಮಾಡ್ತಾರೆ ಎಂದು ಪ್ರಶ್ನೆ ಮಾಡಿದ್ರು.
ಕರ್ನಾಟಕಕ್ಕೆ ಒಂದೇ ಒಂದು ರೂಪಾಯಿ ಕೊಡ್ತಿಲ್ಲ. ಇಲ್ಲಿ ಜನ ಸಾಯ್ತಿದ್ದಾರೆ. ಆದ್ರೆ, ಮೋದಿ ಅಮೆರಿಕಾಗೆ ಹೋಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ರು. ಇದೇ ವೇಳೆ ಒಕ್ಕಲಿಗರನ್ನ ಮೋದಿ ಟಾರ್ಗೆಟ್ ಮಾಡಲು ಹುನ್ನಾರ ನಡೆಯುತ್ತಿದೆ. ಮೋದಿಯ ಸರ್ವಾಧಿಕಾರ ಧೋರಣೆ ಮುರಿಯಲು ಅವತಾರ ಪುರುಷ ಬರಬೇಕಿದೆ ಎಂದ್ರು. ಇಂದಿರಾ ಗಾಂಧಿ ವಿರುದ್ಧ ಜಯಪ್ರಕಾಶ್ ನಾರಾಯಣ್ ಬಂದಿದ್ರು. ಅವರಂತೆ ಮೋದಿ ಅಹಂಕಾರ ಮುರಿಯಬೇಕಿದೆ ಎಂದ್ರು.
ಮೋದಿ ವರ್ಸಸ್ ಸಿದ್ದು..!
ರಾಷ್ಟ್ರದಲ್ಲಿ ಮೋದಿ ಹಿಮ್ಮೆಟ್ಟಿಸಿ ನಿಲ್ಲುವ ನಾಯಕರಿಲ್ಲ. ರಾಷ್ಟ್ರಮಟ್ಟದಲ್ಲಿ ನೀವೇ ನಾಯಕರಾಗಿ. ಕೇಂದ್ರದಿಂದ ಯಾವುದೇ ಜವಾಬ್ದಾರಿ ಕೊಟ್ಟರು ತೆಗೆದುಕೊಳ್ಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ದೊರೆಸ್ವಾಮಿ ಸಲಹೆ ನೀಡಿದ್ರು. ನೀವು ರಾಷ್ಟ್ರಮಟ್ಟದ ನಾಯಕರಾಗುವ ಅನಿವಾರ್ಯತೆ ಬಂದಿದೆ ಎಂದ್ರು.
ರಮೇಶ್ ಕುಮಾರ್ ನಿಜವಾದ ಗಂಡು.!
ಅನರ್ಹ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ದೊರೆಸ್ವಾಮಿ, ಅನರ್ಹ ಶಾಸಕರಲ್ಲಿ ಬಹುತೇಕರು ಅಯೋಗ್ಯರು ಎಂದ್ರು. ಪ್ರವಾಹ ಬಂದಾಗ ಶೆಲ್ಟರ್ ಹುಡುಕಿಕೊಂಡು, ಇಲಿಗಳು ಓಡಿ ಹೋಗುತ್ತವೆ. ಅದರಂತೆ ಈ ಶಾಸಕರು ಬಿಜೆಪಿ ಕಾಲಿಗೆ ಬಿದ್ದಿದ್ದಾರೆ ಎಂದ್ರು. ಅವರನ್ನ ರಮೇಶ್ ಕುಮಾರ್ ಬಲಿ ಹಾಕಿದರು. ರಮೇಶ್ ಕುಮಾರ್ ನಿಜವಾದ ಗಂಡಿನ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?