Featured
ಮುಖದ ಮೇಲಿನ ಕೂದಲನ್ನು ನಿವಾರಿಸಲು ಸುಲಭವಾದ ಮನೆ ಮದ್ದು

ರೈಸಿಂಗ್ ಕನ್ನಡ:- ಪದೇ ಪದೇ ಮುಖದ ಕೂದಲನ್ನು ತೆಗೆಸುವುದು ಕಷ್ಟದ ಕೆಲಸ. ಪದೇ ಪದೇ ಮುಖದ ಮೇಲೆ ಕಾಣಿಸಿಕೊಳ್ಳುವುದರಿಂದ ಅದರ ನಿವಾರಣೆಗೆ ಚಿಂತಿಸುವುದು ಸಾಮನ್ಯ.
ಮುಖವು ನಮ್ಮ ಸೌಂದರ್ಯವನ್ನು ಪ್ರತಿಬಿಂಬಿಸುವ ಅಂಗ. ಮುಖದ ಅಕರ್ಷಣೇಯು ಸುಂದರ ನೋಟವನ್ನು ನೀಡುವುದು. ಮಮುಖದ ಆರೈಕೆ ಹಾಗೂ ಬಣ್ಣಗಳ ಲೇಪನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವಿಶೇಚವಾಗಿ ತುಟಿಯ ಮೇಲಿನ ಕೂದಲು ಹಾಗೂ ಮುಖದ ಮೇಲಿರುವ ಕೂದಲುಗಳನ್ನು ತೆಗೆಯಲು ಸಾಕಷ್ಟು ಕ್ರಮ ಹಾಗೂ ಚಿಕಿತ್ಸೆಯನ್ನು ಸಹ ಪಡೆಯಲಾಗುತ್ತದೆ.
ಕಡ್ಲೆ ಹಿಟ್ಟು :-
ಪುರಾತನ ಕಾಲದಿಂದಲೂ ಕಡ್ಲೆ ಹಿಟ್ಟನ್ನು ಚರ್ಮದ ಆರೈಕೆಗೆ ಬಳಸಲಾಗುತ್ತದೆ. ಕಡ್ಲೆ ಹಿಟ್ಟಿನ ಫೇಸ್ ಪ್ಯಾಕ್ ಅಥವಾ ಮುಖದ ಲೇಪವು ಮುಖಕ್ಕೆ ಅದ್ಬುತ ಮೆರಗನ್ನು ನೀಡುತ್ತದೆ. ಚರ್ಮದಲ್ಲಿ ನೀರನ್ನು ಹಿಡಿದಿಡುವಂತೆ ಮಾಡುವುದು. ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುವುದು.
ಅರಿಶಿನ ಚಿಕಿತ್ಸೆ :-
ಅರಿಶಿನ ಚರ್ಮ ಹಾಗೂ ಮುಖದ ಸೌಂದರ್ಯವನ್ನು ಅತ್ಯುತ್ತವಾದ ನೈಸರ್ಗಿಕ ಉತ್ವನ್ನ. ಇದು ಬ್ಯಾಕ್ಟೀರಿಯಾ ವಿರೋಧಿಯಾಗಿ ಕೆಲಸ ನಿರ್ವಹಿಸುವುದು. ಕೂದಲ ಬೆಳವಣಿಗೆಯನ್ನು ತಡೆಯುವ ಗುಣವನ್ನು ಪಡೆದುಕೊಂಡಿದೆ.
- ಅರಿಶಿನ ಮತ್ತು ನೀರನ್ನು ಸೇರಿಸಿ, ಮೃದುವಾದ ಪೇಸ್ಟ್ನಂತೆ ತಯಾರಿಸಿಕೊಳ್ಳಬೇಕು.
- ಮಿಶ್ರಣವು ಮುಖದ ಮೇಲೆ ಅರಲು ಸ್ವಲ್ಪ ಸಮಯ ಬಿಡಬೇಕು.
- ಒಂದು ಬಟ್ಟೆಯನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ, ಅದರಿಂದ ಮುಖವನ್ನು ಒರೆಸಬೇಕು.
- ಗಣನೀಯವಾಗಿ ಈ ಕ್ರಮವನ್ನು ಅನುಸರಿಸುವುದರಿಂದ ಮುಖದಲ್ಲಿ ಇರುವ ಅನಗತ್ಯ ಕೂದಲು ಉದುರುವುದು.
ಮೊಟ್ಟೆಯ ಲೇಪನ :-
ಮೊಟ್ಟೆಯು ಸಮೃದ್ಧವಾದ ಪೋಷಕಾಂಶ ಹಾಗೂ ಪ್ರೋಟೀನ್ ಗಳಿಂದ ಕೂಡಿರುವ ನೈಸರ್ಗಿಕ ಉತ್ವನ್ನ. ಇದನ್ನು ಸೌಂದರ್ಯ ವರ್ಧಕ ಚಿಕಿತ್ಸೆಗೆ ಬಳಸಲಾಗುತ್ತದೆ. ಮೊಟ್ಟೆಯಲ್ಲಿ ಇರುವ ಘಟಕಗಳು ಚರ್ಮ ಆರೈಕೆ ಹಾಗೂ ಕೂದಲು ಬೆಳವಣಿಗೆಯ ವಿರೋದಿ ಗುಣವನ್ನು ಪಡೆದುಕೊಂಡಿದೆ.
- ಒಂದು ಬೌಲ್ ನಲ್ಲಿ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ರೆಗೆದುಕೊಳ್ಳಿ.
- ಅದಕ್ಕೆ ಅರ್ಧ ಚಮಚ ಜೋಳದ ಹಿಟ್ಟು ಮತ್ತು ಒಂದು ಚಮಚ ಸಕ್ಕರೆಯನ್ನು ಸೇರಿಸಿ.
- ನಯವಾದ ಈ ಪೇಸ್ಟ್ ಅನ್ನು ಅನಗತ್ಯ ಕೂದಲು ಇರುವ ಜಾಗಕ್ಕೆ ಅನ್ವಹಿಸಿ ಆರಲು ಬಿಡಿ.
- ಸಂಪೂರ್ಣವಾಗಿ ಒಣಗಿದ ಬಳಿಕ ಮೃದುವಾಗಿ ಎಳೆದು ತೆಗೆಯಿರಿ. ಆಗ ಕೂದಲು ನಿವಾರಣೆಯಾಗುತ್ತವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?