ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಕೊರೊನಾ ಜೊತೆ ಜೊತೆಯಲ್ಲೇ ಇದೀಗ ವರುಣ ಕೂಡ ಜನರನ್ನ ಬಿಟ್ಟೂ ಬಿಡದೆ ಕಾಡುತ್ತಿದ್ದಾನೆ. ಶೀತ ವಾತವರಣದಿಂದಾಗಿ, ಆರೋಗ್ಯದಲ್ಲಿ ಏರುಪೇರಾಗೋದು ಸರ್ವೇಸಾಮಾನ್ಯ. ಕೊರೊನಾ ಹೆಚ್ಚುತ್ತಿರೋದ್ರಿಂದ, ಆಸ್ಪತ್ರೆಗೆ ಹೋಗೋಕು ಭಯ. ಅಂತದ್ರಲ್ಲಿ ಜ್ವರ, ತಲೆನೋವು, ಗಂಟಲು ನೋವು ಅಂದ್ರೆ, ಮೊದಲು ಗಂಟಲ ಧ್ರವ ಪರೀಕ್ಷೆ ಮಾಡಿಸಿ ಅಂತಾರೆ. ಅದೂ ಕೂಡ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ. ಹಾಗಾದ್ರೆ, ಇಂತಹ ಸಂದರ್ಭದಲ್ಲಿ ಏನು ಮಾಡ್ಬೇಕು. ಗಂಟಲು ನೋವಿಗೆ ಮನೆ ಮದ್ದೇನು… ಇಲ್ಲಿದೆ ಪರಿಹಾರ.
ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಗಂಟಲು ನೋವಿಗೆ ಮನೆ ಮದ್ದು ತಯಾರಿಸಲು ಶುಂಠಿ ಮತ್ತು ಜೇನುತುಪ್ಪ ಇದ್ರೆ ಸಾಕು. ಇವರೆಡು ಬಹುತೇಕ ಎಲ್ಲರ ಮನೆಯಲ್ಲೂ ಇರುತ್ತೆ. ಇದನ್ನು ಬಳಸಿ ಔಷಧಿ ತಯಾರಿಸಬಹುದಾಗಿದೆ. ಒಂದು ತುಂಡು ಶುಂಠಿಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಳಿಕ ಎರಡು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ. ನೀರು ಕುದ್ದೂ, ಕುದ್ದು ಒಂದು ಗ್ಲಾಸ್ನಷ್ಟಾದಾಗ, ಅದನ್ನು ಫಿಲ್ಟರ್ ಮಾಡಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಈ ನೀರಿನಿಂದ ಗಂಟಲು ನೋವು ಶಮನವಾಗಲಿದೆ.
ದಿನಕ್ಕೆ ಎರಡು ಬಾರಿ ಹೀಗೆ ಮಾಡಿದ್ರೆ ಸಾಕು. ಗಂಟಲು ನೋವು ಹತ್ತಿರಕ್ಕೂ ಸುಳಿಯೋಲ್ಲ. ಅನೇಕ ಅನಾರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಆಯುರ್ವೇದದಲ್ಲಿ ಶುಂಠಿ ಮತ್ತು ಜೇನುತುಪ್ಪವನ್ನು ಬಳಸಲಾಗುತ್ತದೆ. ಇನ್ನು ಗಂಟಲು ನೋವಿನ ಮದ್ದಿಗೂ ಶುಂಠಿ ಮತ್ತು ಜೇನುತುಪ್ಪ ಬಹಳ ಪ್ರಯೋಜನಕಾರಿ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?