ಜ್ಯೋತಿಷ್ಯ
ದೇವಸ್ಥಾನಗಳ ಹಣ ದೇಗುಲಗಳಿಗೆ ಮಾತ್ರ : ಶೀಘ್ರವೇ ಹೊಸ ಕಾನೂನು, ಸಿಎಂ ಬೊಮ್ಮಾಯಿ

ರೈಸಿಂಗ್ ಕನ್ನಡ ಡೆಸ್ಕ್
ಹುಬ್ಬಳ್ಳಿ : ಹಿಂದೂಗಳ ಬಹು ದಿನಗಳ ಕನಸು ನನಸಾಗೋ ಟೈಮ್ ಬಂದಂತೆ ಕಾಣ್ತಿದೆ. ಯೆಸ್, ತುಂಬಾ ದಿನಗಳಿಂದ ಕೇಳಿ ಬರ್ತಿದ್ದ ಆರೋಪ ಅಂದ್ರೆ, ಹಿಂದೂ ದೇಗುಲಗಳಿಗೆ ಬರುವ ಹಣ ಬೇರೆ ಬೇರೆ ರೀತಿಯ ಕಾರ್ಯಗಳಿಗೆ, ಬೇರೆ ಧರ್ಮಗಳಿಗೂ ಚರ್ಚು ಮಾಡ್ತಾರೆ ಅಂತ. ಆದ್ರೀಗ, ಮುಜರಾಯಿ ಇಲಾಖೆಯಿಂದ ದೇಗುಲಗಳಿಗೆ ಶೀಘ್ರವೇ ಮುಕ್ತಿ ದೊರಕಿಸಿಕೊಡಲು ಸಿಎಂ ಬೊಮ್ಮಾಯಿ ನಿರ್ಧಾರ ಕೈಗೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಿಎಂ ಬೊಮ್ಮಾಯಿ ಕೂಡ ಘೋಷಣೆ ಮಾಡಿದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ತೀವಿ ಅಂತ ಹೇಳಿದ್ದಾರೆ. ಹಿಂದೂ ದೇವಾಲಯಗಳು ಕಾನೂನು ಕಟ್ಟಳೆಗಳಲ್ಲಿ ಸಿಲುಕಿವೆ. ಅದಕ್ಕೆ ಶೀಘ್ರವೇ ಮುಕ್ತಿ ಸಿಗುವಂತೆ ಮಾಡಲು, ಹೊಸ ಕಾನೂನು ಮಾಡೋದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ದೇವಸ್ಥಾನಗಳ ಹಣ ದೇವಾಲಯಗಳಿಗೆ ಮಾತ್ರ ಬಳಕೆ ಮಾಡಲು ತೀರ್ಮಾನ ಕೈಗೊಳ್ತೀವಿ. ನಮ್ಮ ಹಿಂದೂ ದೇಗುಲಗಳು ಹಲವರ ನಿಯಂತ್ರಣದಲ್ಲಿವೆ. ಕೆಲವು ಕಟ್ಟುಪಾಡುಗಳಿವೆ.. ಅವುಗಳಿಗೆ ಶೀಘ್ರವೇ ಮುಕ್ತಿ ಸಿಗುವಂತೆ ಮಾಡ್ತೀವಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಮೂಲಕ ಹಿಂದುಗಳ ಬಹು ದಿನಗಳ ಬೇಡಿಕೆ ಈಡೇರಿಸೋ ಸಾಧ್ಯತೆ ಇದೆ.
ಮಂತಾಂತರ ನಿಷೇಧ ಕಾಯ್ದೆ ಬಳಿಕ ಇದೀಗ ಹಿಂದೂ ದೇವಾಲಯಗಳ ವಿಚಾರವನ್ನ ರಾಜ್ಯ ಬಿಜೆಪಿ ಸರ್ಕಾರ ಕೈಗೆತ್ತಿಕೊಂಡಿರೋದು ಹಿಂದೂಗಳ ಓಲೈಕೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ. ಮುಂದಿನ ದಿನಗಳಲ್ಲಿ ಇದು ಯಾವ ರೀತಿಯ ರಾಜಕೀಯ ತಿರುವು ಪಡೆಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?