Featured
ವರುಣಾಘಾತಕ್ಕೆ ಬೀದರ್ ಜನತೆ ತತ್ತರ: ರಾಜ್ಯ ಹೆದ್ದಾರಿಗೆ ಜಲ ದಿಗ್ಬಂಧನ

ರೈಸಿಂಗ್ ಕನ್ನಡ:
ಬೀದರ್:
ಕರ್ನಾಟಕದ ಗಡಿ ಶಿಖರ ಬೀದರ್ ನಲ್ಲಿ ವರುಣನ ಆರ್ಭಟ ಜೋರಾಗಿದೆ. ಕಳೆದ ಒಂದುವಾರದಿಂದ ಕಣ್ಣಾಮುಚ್ಚಾಲೆಯಾಡಿದ್ದ ವರುಣ ಈಗ ತನ್ನ ನರ್ತನ ಮುಂದುವರೆಸಿದ್ದಾನೆ.
ಗುರುವಾರ ಕಳೆದ ನಾಲ್ಕು ಗಂಟೆಯಿಂದ ಸತತವಾಗಿ ವರುಣನ ಪ್ರತಾಪ ಜೋರಾಗಿದೆ. ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಾವಿರಾರು ಹೆಕ್ಟರ್ ಪ್ರದೇಶದಗಳಿಗೆ ನೀರು ನುಗ್ಗಿದ್ದು ಬೆಳೆದ ಬೆಳೆಯಲ್ಲಾ ಹಾಳಾಗಿ ಕುಳಿತಿವೆ. ವರುಣನ ಆರ್ಭಟಕ್ಕೆ ಗಡಿ ಜಿಲ್ಲೆ ಬೀದರ್ ಜನತಯಲ್ಲಿ ಆತಂಕ ಮನೆ ಮಾಡಿದೆ. ಇತ್ತ ಕಲಬುರಗಿ ಬೀದರ್ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ.
ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿಯಲ್ಲಿ ರಸ್ತೆ ಜಲಾವೃತವಾಗಿದ್ದು ರಸ್ತೆ ದಾಟಲು ಪ್ರಯಾಣಿಕರು ಪರದಾಡುವಂತಾಗಿದೆ. ರಸ್ತೆ ಮಾರ್ಗವೆಲ್ಲಾ ಜಲದಿಗ್ಬಂಧನವಾಗಿದ್ದು ,ರಸ್ತೆ ಯಾವುದು ಕೆರೆಯಾವುದಿ ಎನ್ನುವಂತಾಗಿದೆ.

ರಸ್ತೆ ದಾಟಲು ಪರದಾಡುತ್ತಿರುವ ಪ್ರಯಾಣಿಕರಿಗೆ ಸ್ಥಳಿಯರೆ ಸಹಾಯಮಾಡುತ್ತಿದ್ದಾರೆ. ಅತ್ತ ಜಲಾವೃತ್ತ ಗೊಳ್ಳುತ್ತಿರುವ ರಸ್ತೆ ಮೇಲಿನ ನೀರು ಮನೆಗಳಿಗೆ ನುಗ್ಗುತ್ತಿದ್ದರು ಸ್ಥಳಿಯರು ಮೊದಲು ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಕಂಡು ಕೇಳರಿಯದ ವರುಣನ ಆರ್ಭಟಕ್ಕೆ ಬಿಸಿಲ ನಗರಿ ಬೀದರ್ ಜನತೆ ಈಗ ತೀರ ಸಂಕಷ್ಟಕ್ಕಿಡಾಗಿದ್ದಾರೆ. ಜಿಲ್ಲೆಯ ಜನತೆಗೆ ಇಷ್ಟು ದಿನ ಬರಗಾಲ ಬರೆ ಬಿದ್ದಿದ್ದರೆ ಈಗ ವರುಣನ ಬರೆ ಬಿದ್ದಿದ್ದು ರೈತರು ಬೆಳೆದ ಬೆಳೆ ಕೈಗೆ ಬಾರದಂತಾಗಿದ್ದು, ಅತಿವೃಷ್ಠಿಗೆ ಸಿಲುಕಿ ಮತ್ತೆ ಗಾಯದ ಮೇಲೆಬರೆ ಎಳೆದಂತಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?