Featured
ಗುರುವಾರವೂ ಕೊರೊನಾ ರಣಕೇಕೆ- ಬೆಂಗಳೂರಿನಲ್ಲಿ ಮತ್ತೆ 113 ಹೊಸ ಕೇಸ್- ಕಲಬುರಗಿ ಮತ್ತು ರಾಮನಗದಲ್ಲೂ ಕೋವಿಡ್19 ಆರ್ಭಟ

ರೈಸಿಂಗ್ ಕನ್ನಡ ಡೆಸ್ಕ್:
ರಾಜ್ಯದಾದ್ಯಂತ ಕೊರೊನಾ ಆರ್ಭಟ ಮುಂದುವರೆದಿದೆ. ಪ್ರಯೊಂದು ಜಿಲ್ಲೆಯಲ್ಲೂ ಕೋವಿಡ್ನದ್ದೇ ಆಟ. ರಾಜ್ಯದಾದ್ಯದಂತ ಗುರುವಾರದ ಕೊರೊನಾ ರಿಪೋರ್ಟ್ ಹೀಗಿದೆ.
ಗುರುವಾರ ರಾಜ್ಯದಲ್ಲಿ ಒಟ್ಟು 442 ಹೊಸ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 113 ಹೊಸ ಪ್ರಕರಣಗಳು ದಾಖಲಾಗಿದೆ. ಕಲಬುರಗಿಯಲ್ಲಿ 35, ರಾಮನಗರದಲ್ಲಿ 33 ಕೇಸ್ಗಳು ಹೊಸದಾಗಿ ದಾಖಲಾಗಿದೆ. ದಕ್ಷಿಣ ಕನ್ನಡ, ಬಳ್ಳಾರಿ, ಧಾರಾವಾಡ ಮತ್ತು ಮೈಸೂರಿನಲ್ಲಿ ಹೊಸ ಪ್ರಕರಣಗಳ ಸಂಖ್ಯೆ 20ರ ಗಡಿ ದಾಟಿದೆ.
ಚಿತ್ರದುರ್ಗ:
ಚಿತ್ರದುರ್ಗದಲ್ಲೂ ಕೊರೊನಾ ಕೇಕೆಯನ್ನು ತಡೆಯಲು ಹರಸಾಹಸ ಮಾಡಲಾಗುತ್ತಿದೆ. ಕೊರೊನಾ ಸೋಂಕು ಇರುವ ತಾಯಿ ಮಗು ಇದ್ದ ಮನೆ ಏರಿಯಾ ಸೀಲ್ ಡೌನ್ ಮಾಡಲಾಗಿದೆ. ಹಿರಿಯೂರಿನ ಆಜಾದ್ ನಗರದ 200ಮೀ ಏರಿಯಾ ಸೀಲ್ ಡೌನ್ ಆಗಿದೆ . ಆಂಜನೇಯಸ್ವಾಮಿ, ತೇರುಮಲ್ಲೇಶ್ವರ ದೇವಸ್ಥಾನ, ಮಟನ್ ಮಾರ್ಕೆಟ್, ಬನದಮ್ಮ ರಸ್ತೆ ಸೀಲ್ ಡೌನ್ ಆದ ಪ್ರದೇಶಗಳಾಗಿವೆ. ಮುಂಜಾಗೃತಾ ಕ್ರಮವಾಗಿ ಸೋಂಕಿತರ ಮನೆಯ ಸುತ್ತಮುತ್ತಲ ಪ್ರದೇಶ ಸೀಲ್ ಡೌನ್ ಮಾಡಿ ಮಹಾಮಾರಿ ಹರಡುವುದನ್ನು ತಡೆಯಲು ಸಾಹಸ ಮಾಡಲಾಗುತ್ತಿದೆ.
ಹಾಸನ:
ಕೊರೋನಾ ಹಾಸನದಲ್ಲಿ ಪೊಲೀಸರಿಗೆ ಭಯ ಹುಟ್ಟಿಸಿದೆ. ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಪೇದೆಗೆ ಕೊರೊನಾ ಸೋಂಕು ದೃಢವಾಗಿದೆ. ಬುಧವಾರ ಈ ಠಾಣೆ ಸೀಲ್ ಡೌನ್ ಆದ ಬಳಿಕ ಮತ್ತೆ ಅದೇ ಠಾಣೆ ಸಿಬ್ಬಂದಿಗೆ ಸೋಂಕು ತಗುಲಿದೆ. ಠಾಣೆ ಸೀಲ್ ಡೌನ್ ಆದ ಬಳಿಕ ಎಲ್ಲಾ ಸಿಬ್ಬಂದಿಗಳನ್ನು ಡಿಎಆರ್ ವಸತಿ ಗೃಹದಲ್ಲಿ ಕ್ವಾರೆಂಟೈನ್ ಮಾಡಲಾಗಿದೆ.

You may like
ನಾಳೆ, ನಾಡಿದ್ದು ಉಳಿದ ಅಭ್ಯರ್ಥಿಗಳ ಟಿಕೆಟ್ ಘೋಷಣೆ: ಬಸವರಾಜ ಬೊಮ್ಮಾಯಿ
ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ 21 ಕುರಿಗಳ ಬಲಿ
ಅಗ್ನಿಗೆ 5 ಬಣವಿಗಳು ಆಹುತಿ, ರೈತರಿಗೆ ಪರಿಹಾರ ನೀಡುವುದೇ ಸರಕಾರ
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಯಾಕಾಯ್ತು ಗೊತ್ತಾ?
ಮುರುಘಾ ಶ್ರೀಗೆ ಮತ್ತೆ ಸಂಕಷ್ಟ.. ಸುಪ್ರೀಂನಲ್ಲಿ ಹಿನ್ನಡೆ
ಕೊಪ್ಪಳದಲ್ಲಿ ನೀರಿನ ಬರ : ಶಾಲೆ ಬಿಟ್ಟರೂ ಕೊಡ ಹಿಡಿದು ನಿಂತರು