ಸಕ್ಕರೆ ಕಾಯಿಲೆ ಅನ್ನುವುದು ಇತ್ತೀಚಿನ ದಿನಗಳಲ್ಲಿ ಕಾಮನ್. ಬದಲಾದ ಜೀವನ ಶೈಲಿ, ಒತ್ತಡ ಮತ್ತು ಬ್ಲಡ್ ಪ್ರೆಶರ್ ಸಕ್ಕರೆ ಕಾಯಿಲೆಗೆ ಪ್ರಮುಖ ಕಾರಣ. ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಮನೆಮದ್ದುಗಳಿಂದಲೇ ಕಡಿಮೆ ಮಾಡಿಕೊಳ್ಳಬಹುದು. ಆದ್ರೆ ಮನೆ ಮದ್ದು ಮಾಡುವ ಮೊದಲು ಒಂದು ಬಾರಿ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಸಕ್ಕರೆ ಕಾಯಿಲೆಗೆ ಹಾಗಲಕಾಯಿ ರಾಮಬಾಣ. ಹಾಗಲಕಾಯಿ ದೇಹಕ್ಕೆ ವಿಟಮಿನ್ಗಳ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಕೂಡ ನೀಡುತ್ತದೆ. ಪುರಾಣಿಕ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ಹಾಗಲಕಾಯಿಯ ಉಪಯುಕ್ತತೆ ಬಗ್ಗೆ ತಿಳಿಸಿಕೊಡುತ್ತಿದೆ.
ಹಾಗಲಕಾಯಿಯನ್ನು ತೆಗೆದುಕೊಂಡು ಬಿಸಿನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಅದರ ಎರಡೂ ಬದಿಗಳನ್ನು ಒಂದೊಂದು ಇಂಚು ತುಂಡು ಮಾಡಿಕೊಳ್ಳಬೇಕು. ಹೀಗೆ ಮಾಡಿದ ಹಾಗಲಕಾಯಿಯನ್ನು ಉದ್ದುದ್ದಕ್ಕೆ 4 ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ಹಾಗಲಕಾಯಿಯ ಒಳಗಡೆ ಇರುವ ಬೀಜಗಳನ್ನು ತೆಗೆದು ಹಾಕಬೇಕು. ಹಾಗಲಕಾಯಿ ತುಂಡುಗಳಿಗೆ ಮೊದಲಿಗೆ ಉಪ್ಪನ್ನು ಸವರಬೇಕು. ಜೊತೆಗೆ ಅರಿಷಿಣವನ್ನು ಕೂಡ ಸವರಬೇಕು. ಆ ನಂತರ ಶೇಂಗಾ ಪುಡಿ ಮತ್ತು ಒಣಮೆಣಸಿನಕಾಯಿ ಪುಡಿಯನ್ನು ತೆಗೆದುಕೊಂಡು ಉಪ್ಪು, ಅರಿಷಿಣ ಸವರಿಗೆ ಹಾಗಲಕಾಯಿ ತುಂಡುಗಳಿಗೆ ಸವರಬೇಕು. ಹೀಗೆ ಮಾಡಿದ ಹಾಗಲಕಾಯಿ ತಂಡನ್ನು 15ರಿಂದ 20 ನಿಮಿಷಗಳ ಕಾಲ ನೆನೆಯಲು ಬಿಡಬೇಕು.
ಹೀಗೆ ನೆನದ ನಂತರ ಮಸಾಲೆ ಹಚ್ಚಿದ ಹಾಗಲಕಾಯಿ ತುಂಡುಗಳನ್ನು ಚೆನ್ನಾಗಿ ಕಾದ ಹೆಂಚಿನ ಮೇಲೆ ಹಾಕಬೇಕು. ಹಾಗಲಕಾಯಿ ಹೆಂಚಿಗೆ ಹಾಕಿದ ನಂತರ ಉರಿಯನ್ನು ಕಡಿಮೆ ಮಾಡಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಹಾಗಲಕಾಯಿ ಕಹಿ ಹೊರಟುಹೋಗುತ್ತದೆ. ಹೀಗೆ ಮಾಡುವುದರಿಂಧ ಸಕ್ಕರೆ ಕಾಯಿಲೆ ಹೊಂದಿದವರಿಗೆ ಇದು ರಾಮಬಾಣ. ನಿಶ್ಶಕ್ತಿ, ಅಜೀರ್ಣ, ವಾತಪಿತ್ತಕ್ಕೂ ಹಾಗಲಕಾಯಿ ವಿಶೇಷ ಔಷಧವನ್ನು ನೀಡಬಲ್ಲದು.
ಆಯುರ್ವೇದ ಔಷಧಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕೆಳಗಿನ ನಂಬರ್ಗೆ ಕರೆ ಮಾಡಿ
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್