Featured
ಮನೆಯಲ್ಲಿ ಇದ್ದರೆ ಬಿಲ್ವಪತ್ರೆ, ದೇಹಕ್ಕೆ ಬೇಕಾಗಿಲ್ಲ ಮಾತ್ರೆ..!

ಆಯುರ್ವೇದ ಔಷಧಿಗಳ ಬಗ್ಗೆ ತಿಳಿದುಕೊಂಡಷ್ಟು ಹೆಚ್ಚು ಮನೆಮದ್ದುಗಳ ಬಗ್ಗೆ ಜ್ಞಾನ ಬರುತ್ತದೆ. ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ಮನೆಯಲ್ಲೇ ಔಷಧಿಗಳನ್ನು ತಯಾರಿಕೊಳ್ಳುವ ಬಗೆಯನ್ನು ತಿಳಿಸಿಕೊಡುತ್ತಿದೆ. ಬಿಲ್ವಪತ್ರೆಯ ಎಲೆಯಲ್ಲಿರುವ ಔಷಧೀಯ ಗುಣವನ್ನು ತಿಳಿಸಿಕೊಟ್ಟ ಪುರಾಣಿಕ ಆಯುರ್ವೇದ ಚಿಕಿತ್ಸಾ ಕೇಂದ್ರ ಮತ್ತು ಅನುವಂಶೀಯ ವೈದ್ಯರ ಪರಿಷತ್ ಈಗ ಬಿಲ್ವಪತ್ರೆ ಕಾಯಿಗಳಲ್ಲಿರುವ ಔಷಧೀಯ ಸತ್ವವನ್ನು ತಿಳಿಸಿಕೊಡುತ್ತಿದೆ.
ಬಿಲ್ವಪತ್ರೆ ಕಾಯಿ ಕೂಡ ಔಷಧಗಳ ಸತ್ವವನ್ನು ಹೊಂದಿದೆ. ಬಿಲ್ವಪತ್ರೆ ಕಾಯಿಯ ಒಳಗಿನ ಅಂಟಿನಲ್ಲಿನಲ್ಲಿ ಕಬ್ಬಿಣದ ಅಂಶ, ಕ್ಯಾಲ್ಸಿಯಂ, ಸೋಡಿಯಂ ಮಿಶ್ರಣದ ಸತ್ವ ಇದೆ. ಹಲವು ಜನರು ಹಲವು ಕಾಯಿಲೆಗಳಿಗೆ ಬಿಲ್ವಪತ್ರೆಯನ್ನು ಒಡೆದು ತಿನ್ನುತ್ತಾರೆ. ಬಿಲ್ವಪತ್ರೆ ಮರದ ಪ್ರತಿಯೊಂದೂ ಭಾಗವನ್ನು ಕೂಡ ಹಲವು ಔಷಧಿಗಳಿಗೆ ಉಪಯುಕ್ತ.
ಬಿಲ್ವಪತ್ರೆಯ ಕಾಯಿಯ ತಿರುಳನ್ನು ಅರೆದು ಕಣ್ಣಿಗೆ ಲೇಪಿಸುವುದರಿಂದ ಕಣ್ಣಿನ ರೋಗಗಳು ಕಡಿಮೆಯಾಗುತ್ತದೆ.
ಹೆಂಗಸರ ಮುಟ್ಟಿನ ಸಂದರ್ಭದಲ್ಲಿ ಉಂಟಾಗುವ ಹೊಟ್ಟೆ ನೋವು ಮತ್ತು ಬಿಳಿಸ್ರಾವಕ್ಕೆ ಬಿಲ್ವಪತ್ರೆಯ ರಸವನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕು. ಇದು ಈ ಕಾಯಿಲೆಗೆ ಟಾನಿಕ್ ಇದ್ದ ಹಾಗೆ.
ಮೈಯಲ್ಲಿ ಕುರ, ನವೆ,ಹುಣ್ಣು, ಹುಲುಕಡ್ಡಿ, ಇದ್ದಾಗ ಬಿಲ್ವಪತ್ರೆ ಗಿಡಿದ ಬೇರನ್ನು ಲಿಂಬೆ ರಸದ ಜೊತೆ ಅರೆದು ಚರ್ಮದಲ್ಲಿ ಕಾಣಿಸಿಕೊಂಡಿರುವ ರೋಗದ ಭಾಗಕ್ಕೆ ಹಚ್ಚಿದರೆ ಕುರ ಚರ್ಮ ರೋಗ ಕಡಿಮೆ ಆಗುತ್ತದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?